ಮಲಗುವ ಸಮಯದಲ್ಲಿ ವಿಡಿಯೋ ಗೇಮ್: ನಿದ್ರೆ ಮಾಡದೇ 17 ಗಂಟೆ ಗೇಮ್‌ ಆಡುವ ಶಿಕ್ಷೆ ಕೊಟ್ಟ ತಂದೆ.!


Team Udayavani, Mar 20, 2023, 3:57 PM IST

ಮಲಗುವ ಸಮಯದಲ್ಲಿ ವಿಡಿಯೋ ಗೇಮ್: ನಿದ್ರೆ ಮಾಡದೇ 17 ಗಂಟೆ ಗೇಮ್‌ ಆಡುವ ಶಿಕ್ಷೆ ಕೊಟ್ಟ ತಂದೆ.!

ಬೀಜಿಂಗ್: ಈಗಿನ ಕಾಲದಲ್ಲಿ ಯಾರು ಮೊಬೈಲ್‌ ದಾಸರಲ್ಲ ಹೇಳಿ. ಪ್ರತಿಯೊಬ್ಬರಿಗೂ ಮೊಬೈಲ್‌ ಬೇಕೇ ಬೇಕು. ಮೊಬೈಲ್‌ ಬಳಸುವುದಕ್ಕೆ ಯಾವುದೇ ಸಮಯವಿಲ್ಲ. ರಾತ್ರಿ ನಿದ್ದೆಯ ಹೊತ್ತಿಗೂ, ನಿದ್ದೆಯನ್ನು ಮರೆತೂ ಮೊಬೈಲ್‌ ಬಳಸುವುದುಂಟು. ಇಲ್ಲೊಬ್ಬ ತಂದೆ ತನ್ನ ಮಗ ಹೆಚ್ಚು ಮೊಬೈಲ್‌ ಬಳಸಿದ ಕಾರಣಕ್ಕೆ ಕಠಿಣ ಶಿಕ್ಷೆಯನ್ನು ನೀಡಿದ್ದಾರೆ.

ಚೀನಾದ ಶೆನ್ಜೆನ್ ಪ್ರದೇಶದ ಬಾಲಕನೊಬ್ಬ ನಡುರಾತ್ರಿ 1:30ರ ವೇಳೆ ವಿಡಿಯೋ ಗೇಮ್‌ ಆಡುತ್ತಿದ್ದ. ಮಗನ ಈ ವಿಡಿಯೋ ಗೇಮ್‌ ಆಟವನ್ನು ನೋಡಿದ ತಂದೆ ಹುವಾಂಗ್ ಸಿಟ್ಟಾಗಿ ಮಗನ ಮೇಲೆ ಗದರಿಸಿದ್ದಾನೆ. ಎಷ್ಟು ಸಲಿ ಹೇಳಿದರು ನಿದ್ರೆ ಮಾಡುವ ಹೊತ್ತಿನಲ್ಲಿ ಮೊಬೈಲ್‌ ಬಳಸಿದ ಮಗನ ಮೇಲೆ ಈ ಬಾರಿ ಸಿಟ್ಟು ಮಾಡಿಕೊಂಡು ಎರಡು ಮಾತು ಬೈಯುವ ಬದಲು ಅತ್ಯಂತ ಕಠಿಣ ಶಿಕ್ಷೆಯನ್ನು ಕೊಟ್ಟಿದ್ದಾರೆ.

ವಿಡಿಯೋ ಗೇಮ್‌ ಹೆಚ್ಚು ಆಡುತ್ತೀಯ ಅಲ್ವಾ ನೀನು ನಿದ್ದೆ ಮಾಡದೇ ವಿಡಿಯೋ ಗೇಮ್‌ ಆಡಬೇಕು. ಎಷ್ಟು ಬೇಕಾದರೂ ವಿಡಿಯೋ ಗೇಮ್‌ ಆಡು ಆದರೆ ನಿದ್ದೆಯನ್ನು ಮಾಡುವ ಆಗಿಲ್ಲ ಎಂದು ಮಗನಿಗೆ ಖಡಕ್‌ ಆಗಿ ಹೇಳಿ ವಿಡಿಯೋ ಗೇಮ್‌ ಆಡುವಂತೆ ಮಾಡಿದ್ದಾರೆ.

ಇದನ್ನೂ ಓದಿ: ಲಂಡನ್ ಹೈ ಕಮಿಷನ್‌ನಲ್ಲಿ ಭಾರತದ ಧ್ವಜ ಇಳಿಸಿದ ಖಲಿಸ್ತಾನಿ ಪರ ಪ್ರತಿಭಟನಾಕಾರರು

ಮಗ ನಿದ್ದೆ ಬಂದರೂ ತಂದೆ ಆತನಿಗೆ ನಿದ್ದೆ ಮಾಡಲು ಬಿಡದೇ ವಿಡಿಯೋ ಗೇಮ್‌ ಆಡು ಎಂದು ಮಾಡಿದ ತಪ್ಪಿಗೆ ಇದು ಶಿಕ್ಷೆ ಎಂದು ಹೇಳುತ್ತಾರೆ. ನಿದ್ದೆಯಿಲ್ಲದೆ ತಲೆ ತಿರುಗಿ ವಾಂತಿ ಬರುವ ಹಾಗೆ ಆದರೂ ವಿಡಿಯೋ ಗೇಮ್‌ ಆಡುವುದನ್ನು ನಿಲ್ಲಸಬಾರದೆಂದು ತಂದೆ ಹೇಳಿದ್ದಾರೆ.

ಇಡೀ ಘಟನೆ ದೃಶ್ಯವನ್ನು ತಂದೆ ಚೀನಾದ ಟಿಕ್‌ ಟಾಕ್‌ ನಲ್ಲಿ ಅಪ್ಲೋಡ್‌ ಮಾಡಿದ್ದಾರೆ. ಕೊನೆಗೆ ಮಗ ಅತ್ತು ಕ್ಷಮೆ ಕೇಳಿದ ಬಳಿಕ ಅಂದರೆ ಸತತ 17 ಗಂಟೆ ವಿಡಿಯೋ ಗೇಮ್‌ ಆಡುವ ಶಿಕ್ಷೆಯನ್ನು ಅನುಭವಿಸಿದ ಬಳಿಕ ತಂದೆ ಆತನನ್ನು ಮತ್ತೆ ತಪ್ಪು ಮಾಡುವುದಿಲ್ಲ ಎನ್ನುವ ಮಾತನ್ನು ಹೇಳಿಸಿಕೊಂಡು ಬಿಟ್ಟಿದ್ದಾರೆ.

ಇನ್ಮುಂದೆ ನಾನೆಂದೂ ವಿಡಿಯೋ ಗೇಮ್‌ ಆಡುವುದಿಲ್ಲ. 17 ಗಂಟೆ ವಿಡಿಯೋ ಗೇಮ್‌ ಆಡಿದೆ. ಸರಿಯಾದ ಸಮಯದಲ್ಲಿ ನಿದ್ರೆ ಮಾಡುತ್ತೇನೆ ಎಂದು ತಂದೆಯ ಬಳಿ ಮಗ ಕ್ಷಮೆ ಕೇಳಿದ್ದಾನೆ.

ಈ ಘಟನೆ ವೈರಲ್‌ ಆಗಿದ್ದು, ಯಾರೂ ಕೂಡ ತಮ್ಮ ಮನೆಯಲ್ಲಿ ಮಕ್ಕಳಿಗೆ ಈ ರೀತಿ ಮಾಡಬೇಡಿ. ಮಗನಿಗೆ ಬುದ್ದಿ ಬರಲಿ ಎಂದು ಈ ರೀತಿಯಾಗಿ ಮಾಡಿದೆ ಎಂದು ತಂದೆ ಹೇಳಿದ್ದಾರೆ.

ನೆಟ್ಟಿಗರು ಮಗನ ಮೇಲಿನ ತಂದೆಯ ವರ್ತನೆಗೆ ಕಿಡಿಕಾರಿದ್ದಾರೆ.

ಟಾಪ್ ನ್ಯೂಸ್

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

1-wewwqewewqe

US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ

police USA

USA: ಅಪಘಾತದಲ್ಲಿ ಭಾರತ ಮೂಲದ ಇಬ್ಬರ ಸಾವು

ISREL

Hamas ದಾಳಿ ತಡೆಗೆ ವಿಫ‌ಲ: ಇಸ್ರೇಲ್‌ ಸೇನಾ ಗುಪ್ತಚರ ಮುಖ್ಯಸ್ಥ ರಾಜೀನಾಮೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.