Swarna Mudra sweet: ಈ ಸ್ವೀಟ್ನ ಒಂದು ಕೆಜಿಯ ಬೆಲೆ 21 ಸಾವಿರ; ಏನಿದರ ವಿಶೇಷ?
Team Udayavani, Nov 8, 2023, 8:44 AM IST
ಅಹಮದಾಬಾದ್: ದೀಪಾವಳಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಇತ್ತ ಮನೆ – ಮನದಲ್ಲಿ ಸಂಭ್ರಮ ಶುರು ಮಾಡಲು ಜೋರಾದ ತಯಾರಿ ನಡೆಯುತ್ತಿದ್ದರೆ, ಇನ್ನೊಂದೆಡೆ ಸಿಹಿ ತಿಂಡಿಯ ಅಂಗಡಿಗಳು ಹಬ್ಬಕ್ಕಾಗಿ ವಿಶೇಷ ಸ್ವೀಟ್ ಬಾಕ್ಸ್ ಗಳನ್ನು ತಯಾರಿ ಮಾಡುವ ತರಾತುರಿಯಲ್ಲಿವೆ.
ದೀಪಾವಳಿ ಹಬ್ಬಕ್ಕೆ ನಮ್ಮ ಸ್ನೇಹಿತರು ಹಾಗೂ ಪ್ರೀತಿಪಾತ್ರರಿಗೆ ಸ್ವೀಟ್ ಬಾಕ್ಸ್ ನೀಡಿ ಹಬ್ಬದ ಶುಭಾಶಯವನ್ನು ಕೋರುತ್ತೇವೆ. ಪೇಡಾ, ಲಡ್ಡು, ಸೋನ್ ಪಾಪಡಿ ಹೀಗೆ ನಾನಾ ಬಗೆಯ ಸಿಹಿಯನ್ನು ನೀಡುವುದುಂಟು. ಇಲ್ಲೊಂದು ಸಿಹಿ ಅಂಗಡಿಯಲ್ಲಿ ಬಂದಿರುವ ವಿಶೇಷ ಸ್ವೀಟ್ ಗೆ ಭಾರೀ ಬೇಡಿಕೆಯಿದೆ. ಆದರೆ ಅದನ್ನು ಒಂದು ಕೆ.ಜಿ. ಖರೀದಿಸಲು ಹೋಗುವಾಗ ಸಾವಿರ ಸಲಿ ಯೋಚಿಸಬೇಕು. ಏಕೆಂದರೆ ಈ ಸ್ವೀಟ್ ನ ಒಂದು ಕೆಜಿಯ ಬೆಲೆ ಬರೋಬ್ಬರಿ 21 ಸಾವಿರ.!
ಹೌದು. ಅಹಮದಾಬಾದ್ ನಲ್ಲಿ ʼ’ಸ್ವರ್ಣ ಮುದ್ರಾ’ ಸ್ವೀಟ್ ನ ಒಂದು ಕೆಜಿಯ ಬೆಲೆ 21,000 ರೂ.! ‘ಸ್ವರ್ಣ ಮುದ್ರಾ’ ಹೆಸರಿನ ಸಿಹಿತಿಂಡಿ ಅಹಮದಾಬಾದ್ನಲ್ಲಿ ಜನಪ್ರಿಯವಾಗುತ್ತಿದೆ. ದೀಪಾವಳಿ ಹಬ್ಬವಾಗಿರುವುದರಿಂದ ಈ ಸ್ವೀಟ್ ಗೆ ಹೆಚ್ಚಿನ ಬೇಡಿಕೆಯಿದೆ.
ಈ ಸ್ವೀಟ್ ನ ಮೇಲೆ 24-ಕ್ಯಾರೆಟ್ ಚಿನ್ನದ ಪದರವನ್ನು ಬಳಸಿ ಲೇಯರ್ ಮಾಡಲಾಗಿದೆ. ಇದು ʼ’ಸ್ವರ್ಣ ಮುದ್ರಾ’ ಸ್ವೀಟ್ ನ ವಿಶೇಷ ಆಕರ್ಷಣೆಯಾಗಿದೆ. ಇದರ ಒಂದು ತುಂಡಿನ ಬೆಲೆ 1,400 ರೂ.ಆಗಿದೆ. ಒಂದು ಕಿಲೋಗ್ರಾಂ ಸ್ವರ್ಣ ಮುದ್ರಾ ಸಿಹಿತಿಂಡಿಯಲ್ಲಿ 15 ತುಂಡುಗಳಿವೆ.
ಇದು ಬಾದಾಮಿ, ಬ್ಲೂಬೆರ್ರಿ, ಪಿಸ್ತಾ ಮತ್ತು ಕ್ರ್ಯಾನ್ಬೆರಿಗಳಂತಹ ವಿವಿಧ ಪದಾರ್ಥಗಳನ್ನು ಒಳಗೊಂಡಿದೆ. ಇದನ್ನು ಅಹಮದಾಬಾದ್ನ ಗ್ವಾಲಿಯಾ ಎಸ್ಬಿಆರ್ ಔಟ್ಲೆಟ್ನಲ್ಲಿ ಮಾರಾಟ ಮಾಡಲಾಗುತ್ತಿದೆ.
ಈ ವರ್ಷ ಸ್ವರ್ಣ ಮುದ್ರಾ ಸ್ವೀಟ್ ನ್ನು ವಿಶೇಷವಾಗಿ ತಯಾರಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸಿಹಿತಿಂಡಿಗಳ ಆರ್ಡರ್ ಪಡೆದು ಅದರಂತೆ ತಯಾರಿ ನಡೆಸುತ್ತಿದ್ದೇವೆ ಎಂದು ರವೀನಾ ತಿಲ್ವಾನಿ ತಿಳಿಸಿದ್ದಾರೆ.
ಸ್ವರ್ಣ ಮುದ್ರಾವನ್ನು ಹೊರತುಪಡಿಸಿ, 350 ರೂ.ನಿಂದ 15,000 ರೂ.ವರೆಗಿನ ಸಿಹಿತಿಂಡಿಗಳು ಮತ್ತು ಡ್ರೈ ಫ್ರೂಟ್ಸ್ಗಳಿಗಾಗಿ ಔಟ್ಲೆಟ್ ಅನೇಕ ಆರ್ಡರ್ಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ