

Team Udayavani, May 24, 2024, 6:40 AM IST
ಡೆಹ್ರಾಡೂನ್: ಉತ್ತರಾ ಖಂಡದ ಹೃಷಿಕೇಶ ಏಮ್ಸ್ ಆಸ್ಪತ್ರೆಯ ವಾರ್ಡ್ನೊಳಗೆ “ದಬಾಂಗ್’ ಸಿನೆಮಾರೀತಿಯಲ್ಲಿ ಪೊಲೀಸರು ಜೀಪ್ ನುಗ್ಗಿ ಸಿದ್ದು, ರೋಗಿಗಳ ವಾರ್ಡ್ನಿಂದಲೇ ಆರೋಪಿಯನ್ನು ಬಂಧಿಸಿದ್ದಾರೆ. ಈ ವೀಡಿಯೋ ವೈರಲ್ ಆಗಿದೆ.
ಎಮರ್ಜೆನ್ಸಿ ವಾರ್ಡ್ಗೆ ಪೊಲೀಸರಿದ್ದ ಬಿಳಿ ಬಣ್ಣದ ಎಸ್ಯುವಿ ನುಗ್ಗಿ ಬರುತ್ತಿದ್ದಂತೆ ಸಿಬಂದಿ, ರೋಗಿಗಳು ಮಲಗಿದ್ದ ಸ್ಟ್ರೆಚರ್ಗಳನ್ನು ಸರಿಸಿ ದಾರಿ ಮಾಡಿಕೊಟ್ಟರು. ಪೊಲೀಸರು ನೆರೆದಿದ್ದ ಜನರನ್ನು ಸರಿಸಿ ಜೀಪ್ ಮುಂದೆ ಹೋಗಲು ಅನುವು ಮಾಡಿದ್ದಾರೆ.
ಆಸ್ಪತ್ರೆಯ ಆಪರೇಷನ್ ಥಿಯೇಟರ್ ಒಳಗೆ ಮಹಿಳಾ ವೈದ್ಯರಿಗೆ ಲೈಂಗಿಕ ಕಿರುಕುಳ ನೀಡಿ ಪೀಡಿಸುತ್ತಿದ್ದವನ ಸೆರೆಗಾಗಿ ಈ ಸಿನಿ ಮೀಯ ಕಾರ್ಯಾಚರಣೆ ನಡೆಸಲಾಗಿದೆ. ಆಸ್ಪತ್ರೆಯ ಶುಶ್ರೂಷಕ ಅಧಿಕಾರಿ ಸತೀಶ್ ಕುಮಾರ್ ಮಹಿಳಾ ವೈದ್ಯರಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಲಾ ಗಿದೆ. ಆತನ ಬಂಧನಕ್ಕೆ ಆಗ್ರಹಿಸಿ ಆಸ್ಪತ್ರೆ ಹೊರಗೆ ತೀವ್ರ ಪ್ರತಿಭಟನೆ ನಡೆದಿತ್ತು.
4 ಮಹಡಿ ಏರಿದ ಜೀಪು!
ಪ್ರತಿಭಟನಕಾರರು ಆಕ್ರೋಶಭರಿತ ರಾಗಿದ್ದ ಕಾರಣ ಆರೋಪಿಯನ್ನು ಅವರ ನಡುವಿನಿಂದ ಕರೆದೊಯ್ಯುವ ಬದಲು ಪೊಲೀಸರು ಆಸ್ಪತ್ರೆ ಒಳಕ್ಕೆ ಜೀಪ್ ಸಹಿತ ಬಂದು ಬಂಧಿಸಿದ್ದಾರೆ. ಆರೋಪಿಯು ಎಮರ್ಜೆನ್ಸಿ ವಾರ್ಡ್ನಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಇಳಿಜಾರು ಹಾದಿಯಲ್ಲಿ ಆಸ್ಪತ್ರೆಯ 4ನೇ ಮಹಡಿಗೆ ಜೀಪ್ ಮೂಲಕ ಸಾಗಿ ಆತನನ್ನು ಬಂಧಿಸಿದ್ದಾರೆ.
ಪೊಲೀಸರ ನಡೆಗೂ ಟೀಕೆ
ವೀಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರ ನಡೆಯ ಬಗ್ಗೆಯೂ ಟೀಕೆ ವ್ಯಕ್ತವಾಗಿದೆ. ತುರ್ತು ನಿಗಾ ವಿಭಾಗದ ಒಳಗೆ ಪೊಲೀಸ್ ಜೀಪ್ ಜತೆ ಬರುವ ಮೂಲಕ ಪೊಲೀಸರು ರೋಗಿಗಳಿಗೆ ಗಾಬರಿ ಉಂಟುಮಾಡಿದ್ದಾರೆ ಮತ್ತು ಅಲ್ಲಿದ್ದ ಎಲ್ಲರನ್ನೂ ಭಯಭೀತರನ್ನಾಗಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತವಾಗಿದೆ.
ಏನಿದು ಪ್ರಕರಣ ?
ಏಮ್ಸ್ ಶುಶ್ರೂಷಕ ಅಧಿಕಾರಿ ಸತೀಶ್ ಕುಮಾರ್ನಿಂದ ವೈದ್ಯೆಗೆ ಲೈಂಗಿಕ ಕಿರುಕುಳ
ಅನುಚಿತ ಸಂದೇಶ ಕಳುಹಿಸಿ ಮಾನಸಿಕ ವಾಗಿಯೂ ಹಿಂಸಿಸಿದ ಆರೋಪ
ವೈದ್ಯೆ ದೂರು ನೀಡಿ 3 ದಿನ ಕಳೆದರೂ ಎಫ್ಐಆರ್ ದಾಖಲಾಗದ್ದಕ್ಕೆ ಆಕ್ರೋಶ
ಆರೋಪಿಯ ವಜಾ ಹಾಗೂ ಬಂಧನಕ್ಕೆ ಆಗ್ರಹಿಸಿ ರೆಸಿಡೆಂಟ್ ವೈದ್ಯರ ಪ್ರತಿಭಟನೆ
ಪ್ರತಿಭಟನೆ ಬಳಿಕ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 354, 506ರಂತೆ ಕೇಸು ದಾಖಲು
ಪ್ರತಿಭಟನೆ ತೀವ್ರವಾಗಿದ್ದ ಕಾರಣ ಆಸ್ಪತ್ರೆ ಒಳಗೇ ಆರೋಪಿಯ ಬಂಧನಕ್ಕೆ ಚಿಂತನೆ
4ನೇ ಮಹಡಿಯಲ್ಲಿದ್ದ ಆರೋಪಿ ಸತೀಶ್ ಕುಮಾರ್ ಬಂಧನಕ್ಕೆ ಪೊಲೀಸರ ಸಾಹಸ
ಇಳಿಜಾರಿನಲ್ಲಿ ಜೀಪ್ ಚಲಾಯಿಸಿ ತುರ್ತು ವಿಭಾಗದಲ್ಲಿದ್ದ ಆರೋಪಿ ಸೆರೆ.
Ad
Video: ಸ್ಟಂಟ್ ಮಾಡಲು ಹೋಗಿ 300 ಅಡಿ ಆಳದ ಕಂದಕಕ್ಕೆ ಬಿದ್ದ ಕಾರು… ಯುವಕನ ಸ್ಥಿತಿ ಗಂಭೀರ
Jharkhand:ರೈಲ್ವೆ ಹಳಿ ಬಳಿಯೇ ಮರಿಗೆ ಜನ್ಮ ನೀಡಿದ ಆನೆ…2 ಗಂಟೆ ಕಾಲ ರೈಲು ನಿಲ್ಲಿಸಿದ ಚಾಲಕ!
Video: ಲಿಫ್ಟ್ ಬಾಗಿಲು ಹಾಕಿದ ಎಂದು ಬಾಲಕನ ಮೇಲೆ ಹಲ್ಲೆ ನಡೆಸಿ ಕೈ ಕಚ್ಚಿದ ವ್ಯಕ್ತಿ…
ಹಳಸಿದ ಆಹಾರ ಕೊಟ್ಟಿದ್ದಕ್ಕೆ ಕ್ಯಾಂಟೀನ್ ಸಿಬ್ಬಂದಿ ಮುಖಕ್ಕೆ ಗುದ್ದಿದ ಶಿವಸೇನೆ ಶಾಸಕ!
ಚಿಕ್ಕಮ್ಮನ ಜತೆ ಸಂಬಂಧ: 24ರ ಯುವಕನನ್ನು ಅಪಹರಣ ಮಾಡಿ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕರು
You seem to have an Ad Blocker on.
To continue reading, please turn it off or whitelist Udayavani.