Dabangg!; ಬಂಧನಕ್ಕಾಗಿ 4 ಮಹಡಿ ಏರಿ ವಾರ್ಡ್‌ಗೇ ನುಗ್ಗಿದ ಪೊಲೀಸ್‌ ಜೀಪ್‌!

ಹೃಷಿಕೇಶದ ಏಮ್ಸ್‌ ಆಸ್ಪತ್ರೆಯಲ್ಲಿ ವೈದ್ಯೆಗೆ ಲೈಂಗಿಕ ಕಿರುಕುಳ ನೀಡಿದವ ಸೆರೆ... ಏನಿದು ಪ್ರಕರಣ ?

Team Udayavani, May 24, 2024, 6:40 AM IST

1-qeeewqewqeqw

ಡೆಹ್ರಾಡೂನ್‌: ಉತ್ತರಾ ಖಂಡದ ಹೃಷಿಕೇಶ ಏಮ್ಸ್‌ ಆಸ್ಪತ್ರೆಯ ವಾರ್ಡ್‌ನೊಳಗೆ “ದಬಾಂಗ್‌’ ಸಿನೆಮಾರೀತಿಯಲ್ಲಿ ಪೊಲೀಸರು ಜೀಪ್‌ ನುಗ್ಗಿ ಸಿದ್ದು, ರೋಗಿಗಳ ವಾರ್ಡ್‌ನಿಂದಲೇ ಆರೋಪಿಯನ್ನು ಬಂಧಿಸಿದ್ದಾರೆ. ಈ ವೀಡಿಯೋ ವೈರಲ್‌ ಆಗಿದೆ.

ಎಮರ್ಜೆನ್ಸಿ ವಾರ್ಡ್‌ಗೆ ಪೊಲೀಸರಿದ್ದ ಬಿಳಿ ಬಣ್ಣದ ಎಸ್‌ಯುವಿ ನುಗ್ಗಿ ಬರುತ್ತಿದ್ದಂತೆ ಸಿಬಂದಿ, ರೋಗಿಗಳು ಮಲಗಿದ್ದ ಸ್ಟ್ರೆಚರ್‌ಗಳನ್ನು ಸರಿಸಿ ದಾರಿ ಮಾಡಿಕೊಟ್ಟರು. ಪೊಲೀಸರು ನೆರೆದಿದ್ದ ಜನರನ್ನು ಸರಿಸಿ ಜೀಪ್‌ ಮುಂದೆ ಹೋಗಲು ಅನುವು ಮಾಡಿದ್ದಾರೆ.

ಆಸ್ಪತ್ರೆಯ ಆಪರೇಷನ್‌ ಥಿಯೇಟರ್‌ ಒಳಗೆ ಮಹಿಳಾ ವೈದ್ಯರಿಗೆ ಲೈಂಗಿಕ ಕಿರುಕುಳ ನೀಡಿ ಪೀಡಿಸುತ್ತಿದ್ದವನ ಸೆರೆಗಾಗಿ ಈ ಸಿನಿ ಮೀಯ ಕಾರ್ಯಾಚರಣೆ ನಡೆಸಲಾಗಿದೆ. ಆಸ್ಪತ್ರೆಯ ಶುಶ್ರೂಷಕ ಅಧಿಕಾರಿ ಸತೀಶ್‌ ಕುಮಾರ್‌ ಮಹಿಳಾ ವೈದ್ಯರಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಲಾ ಗಿದೆ. ಆತನ ಬಂಧನಕ್ಕೆ ಆಗ್ರಹಿಸಿ ಆಸ್ಪತ್ರೆ ಹೊರಗೆ ತೀವ್ರ ಪ್ರತಿಭಟನೆ ನಡೆದಿತ್ತು.

4 ಮಹಡಿ ಏರಿದ ಜೀಪು!

ಪ್ರತಿಭಟನಕಾರರು ಆಕ್ರೋಶಭರಿತ ರಾಗಿದ್ದ ಕಾರಣ ಆರೋಪಿಯನ್ನು ಅವರ ನಡುವಿನಿಂದ ಕರೆದೊಯ್ಯುವ ಬದಲು ಪೊಲೀಸರು ಆಸ್ಪತ್ರೆ ಒಳಕ್ಕೆ ಜೀಪ್‌ ಸಹಿತ ಬಂದು ಬಂಧಿಸಿದ್ದಾರೆ. ಆರೋಪಿಯು ಎಮರ್ಜೆನ್ಸಿ ವಾರ್ಡ್‌ನಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಇಳಿಜಾರು ಹಾದಿಯಲ್ಲಿ ಆಸ್ಪತ್ರೆಯ 4ನೇ ಮಹಡಿಗೆ ಜೀಪ್‌ ಮೂಲಕ ಸಾಗಿ ಆತನನ್ನು ಬಂಧಿಸಿದ್ದಾರೆ.

ಪೊಲೀಸರ ನಡೆಗೂ ಟೀಕೆ

ವೀಡಿಯೋ ವೈರಲ್‌ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರ ನಡೆಯ ಬಗ್ಗೆಯೂ ಟೀಕೆ ವ್ಯಕ್ತವಾಗಿದೆ. ತುರ್ತು ನಿಗಾ ವಿಭಾಗದ ಒಳಗೆ ಪೊಲೀಸ್‌ ಜೀಪ್‌ ಜತೆ ಬರುವ ಮೂಲಕ ಪೊಲೀಸರು ರೋಗಿಗಳಿಗೆ ಗಾಬರಿ ಉಂಟುಮಾಡಿದ್ದಾರೆ ಮತ್ತು ಅಲ್ಲಿದ್ದ ಎಲ್ಲರನ್ನೂ ಭಯಭೀತರನ್ನಾಗಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತವಾಗಿದೆ.

 ಏನಿದು ಪ್ರಕರಣ ?

ಏಮ್ಸ್‌ ಶುಶ್ರೂಷಕ ಅಧಿಕಾರಿ ಸತೀಶ್‌ ಕುಮಾರ್‌ನಿಂದ ವೈದ್ಯೆಗೆ ಲೈಂಗಿಕ ಕಿರುಕುಳ

ಅನುಚಿತ ಸಂದೇಶ  ಕಳುಹಿಸಿ ಮಾನಸಿಕ ವಾಗಿಯೂ ಹಿಂಸಿಸಿದ ಆರೋಪ

ವೈದ್ಯೆ ದೂರು ನೀಡಿ 3 ದಿನ ಕಳೆದರೂ ಎಫ್ಐಆರ್‌ ದಾಖಲಾಗದ್ದಕ್ಕೆ ಆಕ್ರೋಶ

ಆರೋಪಿಯ ವಜಾ ಹಾಗೂ ಬಂಧನಕ್ಕೆ ಆಗ್ರಹಿಸಿ ರೆಸಿಡೆಂಟ್‌ ವೈದ್ಯರ ಪ್ರತಿಭಟನೆ

ಪ್ರತಿಭಟನೆ ಬಳಿಕ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್‌ 354, 506ರಂತೆ ಕೇಸು ದಾಖಲು

ಪ್ರತಿಭಟನೆ ತೀವ್ರವಾಗಿದ್ದ ಕಾರಣ ಆಸ್ಪತ್ರೆ ಒಳಗೇ ಆರೋಪಿಯ ಬಂಧನಕ್ಕೆ ಚಿಂತನೆ

4ನೇ ಮಹಡಿಯಲ್ಲಿದ್ದ ಆರೋಪಿ ಸತೀಶ್‌ ಕುಮಾರ್‌ ಬಂಧನಕ್ಕೆ ಪೊಲೀಸರ ಸಾಹಸ

ಇಳಿಜಾರಿನಲ್ಲಿ ಜೀಪ್‌ ಚಲಾಯಿಸಿ ತುರ್ತು ವಿಭಾಗದಲ್ಲಿದ್ದ ಆರೋಪಿ ಸೆರೆ.

ಟಾಪ್ ನ್ಯೂಸ್

ಎಚ್‌ಡಿಕೆ ಕಾಲದಲ್ಲೂ ತೈಲ ದರ ಏರಿಸಿದ್ದರು: ಸಿದ್ಧರಾಮಯ್ಯ

ಎಚ್‌ಡಿಕೆ ಕಾಲದಲ್ಲೂ ತೈಲ ದರ ಏರಿಸಿದ್ದರು: ಸಿದ್ಧರಾಮಯ್ಯ

1-wewwqewq

T20 World Cup; ಐರ್ಲೆಂಡ್ ಎದುರು ಪಾಕ್ ಗೆ ಗೆಲುವಿನ ಸಮಾಧಾನ

Missing Case ಉಪ್ಪಿನಂಗಡಿ: ತಾಯಿ, ಮಗ ನಾಪತ್ತೆMissing Case ಉಪ್ಪಿನಂಗಡಿ: ತಾಯಿ, ಮಗ ನಾಪತ್ತೆ

Missing Case ಉಪ್ಪಿನಂಗಡಿ: ತಾಯಿ, ಮಗ ನಾಪತ್ತೆ

Subramanya: ವಿದ್ಯುತ್‌ ಕಂಬಕ್ಕೆ ಕಾರು ಢಿಕ್ಕಿ

Subramanya: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

Road Mishap ಕಡಪಾಲ: ಕಾರುಗಳ ಮುಖಾಮುಖಿ ಢಿಕ್ಕಿ

Road Mishap ಕಡಪಾಲ: ಕಾರುಗಳ ಮುಖಾಮುಖಿ ಢಿಕ್ಕಿ

Kapu ಎಟಿಎಂಗೆ ಹಣ ಡ್ರಾ ಮಾಡಲು ಬಂದವರು ಕುಸಿದು ಬಿದ್ದು ವ್ಯಕ್ತಿ ಸಾವು

Kapu ಎಟಿಎಂಗೆ ಹಣ ಡ್ರಾ ಮಾಡಲು ಬಂದವರು ಕುಸಿದು ಬಿದ್ದು ವ್ಯಕ್ತಿ ಸಾವು

Mangaluru ದ್ವಿಚಕ್ರ ವಾಹನ ಕಳವು; ದೂರು ದಾಖಲು

Mangaluru ದ್ವಿಚಕ್ರ ವಾಹನ ಕಳವು; ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಐಸಿಯುನಲ್ಲಿದ್ದ ತಂದೆಯ ಮುಂದೆಯೇ ನೆರವೇರಿತು ಮಗಳ ಮದುವೆ: ಭಾವುಕ ಕ್ಷಣದ ವಿಡಿಯೋ ವೈರಲ್

ಐಸಿಯುನಲ್ಲಿದ್ದ ತಂದೆಯ ಮುಂದೆಯೇ ನೆರವೇರಿತು ಮಗಳ ಮದುವೆ: ಭಾವುಕ ಕ್ಷಣದ ವಿಡಿಯೋ ವೈರಲ್

2

Viral Video: ಎಂಜಲು ಉಗುಳಿ ಗ್ರಾಹಕನಿಗೆ ಫೇಸ್‌ ಮಸಾಜ್‌ ಮಾಡಿದ್ದ ಕ್ಷೌರಿಕ ಬಂಧನ

telangana

Telangana: ನೀರಿನಲ್ಲಿ ಮೃತದೇಹ ತೇಲುತ್ತಿದೆ ಎಂದು ದಡಕ್ಕೆ ಎಳೆದು ತಬ್ಬಿಬ್ಬಾದ ಪೊಲೀಸರು…

Video: ಮೀಟಿಂಗ್ ವೇಳೆ ಅಧಿಕಾರಿಗಳ ಮೇಲೆ ಕೋಪ… ಕಡತವನ್ನು ಎತ್ತಿ ಬಿಸಾಡಿದ ಮೇಯರ್

Video: ಮೀಟಿಂಗ್ ವೇಳೆ ಅಧಿಕಾರಿಗಳ ಮೇಲೆ ಕೋಪ… ಕಡತವನ್ನು ಬಿಸಾಡಿ ಆಕ್ರೋಶ ಹೊರ ಹಾಕಿದ ಮೇಯರ್

ದ್ವಿಚಕ್ರ ವಾಹನಕ್ಕೆ ಪೆಟ್ರೋಲ್‌ ಹಾಕಿದ ಬಳಿಕ ಪ್ಯಾಂಟ್‌ ಬಿಚ್ಚಿ Payment ಆಯ್ತು ಎಂದ ಯುವತಿ!

ದ್ವಿಚಕ್ರ ವಾಹನಕ್ಕೆ ಪೆಟ್ರೋಲ್‌ ಹಾಕಿದ ಬಳಿಕ ಪ್ಯಾಂಟ್‌ ಬಿಚ್ಚಿ Payment ಆಯ್ತು ಎಂದ ಯುವತಿ!

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

ಎಚ್‌ಡಿಕೆ ಕಾಲದಲ್ಲೂ ತೈಲ ದರ ಏರಿಸಿದ್ದರು: ಸಿದ್ಧರಾಮಯ್ಯ

ಎಚ್‌ಡಿಕೆ ಕಾಲದಲ್ಲೂ ತೈಲ ದರ ಏರಿಸಿದ್ದರು: ಸಿದ್ಧರಾಮಯ್ಯ

1-wewwqewq

T20 World Cup; ಐರ್ಲೆಂಡ್ ಎದುರು ಪಾಕ್ ಗೆ ಗೆಲುವಿನ ಸಮಾಧಾನ

Missing Case ಉಪ್ಪಿನಂಗಡಿ: ತಾಯಿ, ಮಗ ನಾಪತ್ತೆMissing Case ಉಪ್ಪಿನಂಗಡಿ: ತಾಯಿ, ಮಗ ನಾಪತ್ತೆ

Missing Case ಉಪ್ಪಿನಂಗಡಿ: ತಾಯಿ, ಮಗ ನಾಪತ್ತೆ

Subramanya: ವಿದ್ಯುತ್‌ ಕಂಬಕ್ಕೆ ಕಾರು ಢಿಕ್ಕಿ

Subramanya: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

Road Mishap ಕಡಪಾಲ: ಕಾರುಗಳ ಮುಖಾಮುಖಿ ಢಿಕ್ಕಿ

Road Mishap ಕಡಪಾಲ: ಕಾರುಗಳ ಮುಖಾಮುಖಿ ಢಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.