
ಝೋಮ್ಯಾಟೋ ಎಡವಟ್ಟು: ಆರ್ಡರ್ ಮಾಡಿದ್ದು ವೆಜ್ ಊಟ… ಬಂದಿದ್ದು ಮಾತ್ರ ನಾನ್ ವೆಜ್
Team Udayavani, Mar 6, 2023, 5:25 PM IST

ನವದೆಹಲಿ: ಮಹಿಳೆಯೊಬ್ಬರು ಝೋಮ್ಯಾಟೋ ಆಫ್ ಮೂಲಕ ಸಸ್ಯಾಹಾರಿ ಊಟಕ್ಕೆಆರ್ಡರ್ ಮಾಡಿ ನಾನ್ ವೆಜ್ ಊಟ ಪಾರ್ಸೆಲ್ ಬಂದಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ನಿರುಪಮಾ ಸಿಂಗ್ ಎಂಬ ಮಹಿಳೆಯೊಬ್ಬರು ಝೋಮ್ಯಾಟೋ ಆಫ್ ಮೂಲಕ ಸಸ್ಯಾಹಾರಿ ಊಟಕ್ಕೆಆರ್ಡರ್ ಮಾಡಿದ್ದಾರೆ ಕೆಲ ಸಮಯದ ಬಳಿಕ ಊಟ ಪಾರ್ಸೆಲ್ ಬಂದಿದ್ದು ಇನ್ನೇನು ಊಟ ಮಾಡುವ ಎಂದು ಪೊಟ್ಟಣ ತೆರೆದಾಗ ಮಹಿಳೆಗೆ ಶಾಕ್ ಆಗಿದೆ… ಮಹಿಳೆ ತೆರೆದ ಆಹಾರ ಪೊಟ್ಟಣದಲ್ಲಿ ಸಸ್ಯಾಹಾರಿ ಬದಲು ಕೋಳಿ ಪದಾರ್ಥ ಹಾಕಲಾಗಿದೆ.
ಮಹಿಳೆ ಪದಾರ್ಥವನ್ನು ಪ್ಲೇಟ್ ಗೆ ಹಾಕಿಕೊಂಡಿದ್ದಾರೆ ಇನ್ನೇನು ತಿನ್ನಬೇಕು ಎಂದು ನೋಡುವಾಗ ಇದು ಸಸ್ಯಹಾರಿಯಲ್ಲ ಎಂಬುದು ಗೊತ್ತಾಗಿದೆ, ಕೂಡಲೇ ಅದರ ಫೋಟೋ ತೆಗೆದ ಮಹಿಳೆ ಟ್ವಿಟರ್ ಮೂಲಕ ಝೋಮ್ಯಾಟೋ ಸಂಸ್ಥೆಯ ಯಡವಟ್ಟಿನ ಕುರಿತು ಪೋಸ್ಟ್ ಮಾಡಿದ್ದಾರೆ. ಇದನ್ನು ಗಮನಿಸಿದ ಝೋಮ್ಯಾಟೋ ಸಂಸ್ಥೆ ಮಹಿಳೆಗೆ ಕರೆ ಮಾಡಿ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದೆ.
ನಿರುಪಮಾ ಸಿಂಗ್ ಮಾಡಿರುವ ಪೋಸ್ಟ್ ಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ, ಅಲ್ಲದೆ ತಮಗಾದ ಕೆಲವು ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಝೋಮ್ಯಾಟೋ ಕೇವಲ ಆಹಾರ ವಿತರಿಸುವ ಕೆಲಸ ಮಾಡುತ್ತಿದೆ ಇಲ್ಲಿ ತಪ್ಪು ಮಾಡಿರುವುದು ಹೋಟೆಲ್ ಸಿಬ್ಬಂದಿಗಳು ಹಾಗಾಗಿ ಝೋಮ್ಯಾಟೋ ವನ್ನು ದೂರಿ ಪ್ರಯೋಜನವಿಲ್ಲ ಎಂದು ಓರ್ವ ವ್ಯಕ್ತಿ ಬರೆದುಕೊಂಡಿದ್ದರೆ, ಇನ್ನೊಬ್ಬರು ಟ್ವೀಟ್ ಮಾಡಿ ಕಳೆದ ವಷ ಓರ್ವ ವ್ಯಕ್ತಿ ಟೀ ಆರ್ಡರ್ ಮಾಡಿದ್ದು ಟೀ ಕುಡಿಯುವ ವೇಳೆ ಅದರಲ್ಲಿ ಮಾಂಸ ಪತ್ತೆಯಾಗಿತ್ತು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ರಾಹುಲ್ ಮದುವೆ ಆಗುವುದಿಲ್ಲ ಯಾಕೆ ಗೊತ್ತಾ?… ; ನಳಿನ್ ಹೇಳಿಕೆ ವೈರಲ್
Hi @zomato , ordered veg food and got all non veg food. 4/5 of us were vegetarians. What is this service, horrible experience. pic.twitter.com/6hDkyMVBPg
— Nirupama Singh (@nitropumaa) March 4, 2023
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Damadan Purva: ಈ ಗ್ರಾಮದ ಯುವತಿಯರನ್ನು ಮದುವೆಯಾದರೆ ಸಿಗುತ್ತೆ ಮನೆ, ಜಮೀನು, ಆಸ್ತಿ.!

Bengal: ಕೆಂಪು ಟೀ ಶರ್ಟ್ ಬಳಸಿ ರೈಲು ದುರಂತವನ್ನು ತಪ್ಪಿಸಿದ 12ರ ಬಾಲಕ.!

Viral Video: ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಕಿಡ್ನಾಪ್? ವಿಡಿಯೋ ನೋಡಿ ಫ್ಯಾನ್ಸ್ ಶಾಕ್!

Diamond Search: ರಸ್ತೆಯಲ್ಲಿ ವಜ್ರದ ಹರಳು ಹುಡುಕಲು ಮುಗಿಬಿದ್ದ ಜನರು…ವಿಡಿಯೋ ವೈರಲ್

Woman Biker: ನಿಯಮ ಉಲ್ಲಂಘನೆ, ತಪ್ಪು ಮಾಡಿಯೂ ಟ್ರಾಫಿಕ್ ಪೊಲೀಸರಿಗೆ ಅವಾಜ್ ಹಾಕಿದ ಯುವತಿ
MUST WATCH
ಹೊಸ ಸೇರ್ಪಡೆ

Ujjain ; ಅತ್ಯಾಚಾರಕ್ಕೊಳಗಾಗಿ ಬೀದಿಯಲ್ಲಿ ಅರೆನಗ್ನ ಸ್ಥಿತಿಯಲ್ಲಿ ನಡೆದ 12ರ ಬಾಲೆ !!

BYJU’s Lay Off: ಆತಂಕದಲ್ಲಿ ಬೈಜೂಸ್ ಉದ್ಯೋಗಿಗಳು…3,500 ನೌಕರರ ಕಡಿತಕ್ಕೆ ಸಿದ್ಧತೆ

India-Canada ಸಂಬಂಧ ಹದಗೆಡಿಸಲು ನಿಜ್ಜರ್ ಪ್ರಕರಣದಲ್ಲಿ ಪಾಕಿಸ್ಥಾನದ ISI ಸಂಚು

Thirthahalli ಮೀನು ಹಿಡಿಯಲು ಹೋದ ಯುವಕ ತುಂಗಾ ನದಿಗೆ ಬಿದ್ದು ಸಾವು !

Manipur ; ಇಡೀ ರಾಜ್ಯವನ್ನು ‘ಪ್ರಕ್ಷುಬ್ಧ ಪ್ರದೇಶ’ ಎಂದು ಘೋಷಿಸಿದ ಸರಕಾರ