ಅಂದು ಖ್ಯಾತ ನಟಿ ಆಗಿದ್ದಾಕೆ ಭಿಕ್ಷೆ ಬೇಡಿ,ಕಳ್ಳತನ ಮಾಡಿ,ಆಸ್ಪತ್ರೆ ಸೇರುವ ಸ್ಥಿತಿಗೆ ಬಂದಳು!
ಸುಹಾನ್ ಶೇಕ್, Oct 26, 2023, 6:33 PM IST
ಬಣ್ಣದ ಲೋಕದಲ್ಲಿ ಎಲ್ಲರೂ ಹೀರೋ, ಹೀರೋಯಿನ್ ಆಗಲು ಸಾಧ್ಯವಿಲ್ಲ. ನಟಿಸಲು ಅವಕಾಶ ಸಿಕ್ಕರೂ ಅವರೆಲ್ಲ ಸ್ಟಾರ್ ಆಗುತ್ತಾರೆ ಎನ್ನಲಾಗದು. ಆದರೆ ಒಂದೊಮ್ಮೆ ಸ್ಟಾರ್ ನಟಿ ಆಗಿದ್ದಾಕೆ, ಬೀದಿಗೆ ಬಿದ್ದು ಬದಕೇ ಬರ್ಬಾತ್ ಆಗಿದೆ.
ಮಿಥಾಲಿ ಶರ್ಮಾ. ಒಂದು ಕಾಲದಲ್ಲಿ ಭೋಜ್ ಪುರಿ ಸಿನಿಮಾರಂಗದಲ್ಲಿ ತನ್ನ ನಟನೆಯಿಂದ ಖ್ಯಾತರಾಗಿ, ನಿರ್ದೇಶಕ, ನಿರ್ಮಾಪಕರ ಮೆಚ್ಚಿನ ಆಯ್ಕೆ ಆಗಿದ್ದರು. ಆದರೆ ಬೇಡಿಕೆಯ ನಟಿಯಾಗಿದ್ದ ವೇಳೆಯೇ ಅವರ ಒಂದಷ್ಟು ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸೋಲಲು ಆರಂಭವಾಗುತ್ತದೆ. ಸತತ ಸೋಲಿನಿಂದ ನಟಿ ಮಿಥಾಲಿ ಅವರ ವೃತ್ತಿ ಜೀವನದ ಮೇಲೆ ಪರಿಣಾಮ ಬೀಳುತ್ತದೆ. ಇದೇ ಕಾಲದಲ್ಲಿ ಅವರು ಅವಕಾಶವನ್ನು ಹುಡುಕಿಕೊಂಡು ಮುಂಬಯಿಗೆ ಹೋಗುತ್ತಾರೆ.
ಆದರೆ ಇದೇ ಅವರ ಜೀವನಕ್ಕೆ ಮುಳ್ಳಾಗುತ್ತದೆ. ಮನೆಯವರ ವಿರೋಧದ ನಡುವೇ ಕನಸಿನ ನಗರಿ ಮುಂಬಯಿ ಹೋದ ಮಿಥಾಲಿ ಅವರು ಒಂದಷ್ಟು ದಿನ ಮಾಡೆಲಿಂಗ್ ಮಾಡಿಕೊಂಡು ದಿನದೂಡುತ್ತಾರೆ. ಒಂದಷ್ಟು ಸಿನಿಮಾಗಳಲ್ಲಿ ನಟಿಸಿ ವೃತ್ತಿ ಜೀವನವನ್ನು ಮುಂದುವರೆಸಲು ಯತ್ನಿಸುತ್ತಾರೆ.
ಮೂಲತಃ ದೆಹಲಿ ಮೂಲದ ಮಿಥಾಲಿ ಮನೆಯವರ ವಿರೋಧದ ನಡುವೆ ಮುಂಬಯಿಗೆ ಹೋಗಿ ಅವಕಾಶ ಸಿಗದೆ ಕಷ್ಟದ ದಿನಗಳನ್ನು ಎದುರಿಸುತ್ತಾರೆ. ಈ ಸಮಯದಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಸ್ಟಾರ್ ನಟಿಯಾಗಿ ಭೋಜ್ ಪುರಿ ಇಂಡಸ್ಟ್ರಿಯಲ್ಲಿ ಮಿಂಚಿದ ಮಿಥಾಲಿ ಅವರಿಗೆ ಎದುರಾಗುತ್ತದೆ. ಈ ಸಮಯದಲ್ಲಿ ಮಿಥಾಲಿ ಅವರ ಮನೆಯವರು ಕೂಡ ಆಕೆಯನ್ನು ದೂರ ಮಾಡುತ್ತಾರೆ.
ದಿನ ಕಳೆದಂತೆ ಮಿಥಾಲಿ ಅವರಿಗೆ ನಟಿಸುವ ಅವಕಾಶವೂ ಸಿಗದ ಸ್ಥಿತಿಯೂ ಬರುತ್ತದೆ. ಇರಲು ಮನೆ, ಮನೆಯ ಬಾಡಿಗೆ ಹೀಗೆ ಕಷ್ಟದ ಸಮಯದಲ್ಲಿ ಅವರು ಕೊನೆಯದಾಗಿ ಆಯ್ದುಕೊಂಡದ್ದು ಮುಂಬೈನಲ್ಲಿರುವ ಲೋಖಂಡವಾಲಾ ರಸ್ತೆಯಲ್ಲಿ ಮಿಥಾಲಿ ಭಿಕ್ಷೆ ಬೇಡುವಂಥ ಪರಿಸ್ಥಿತಿ ಬರುತ್ತದೆ. ಮಾನಸಿಕವಾಗಿ ಕುಗ್ಗಿ, ಖಿನ್ನತೆಗೆ ಒಳಗಾಗಿದ್ದ ಮಿಥಾಲಿ ಅವರು ತಾನೊಬ್ಬ ಸ್ಟಾರ್ ನಟಿ ಎನ್ನುವುದನ್ನು ಕೂಡ ಜನ ಗುರುತಿಸಲು ಆಗದಿರುವ ಮಟ್ಟಕ್ಕೆ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಾರೆ.
ಭಿಕ್ಷೆ ಬೇಡುವ ವೇಳೆ, ಹೆಚ್ಚಿನ ಹಣಕ್ಕಾಗಿ ಅವರು ಕಳ್ಳತನಕ್ಕಿಳಿಯುತ್ತಾರೆ. ಇದೇ ಪ್ರಕರಣದಲ್ಲಿ ಕಳ್ಳತನ ಮಾಡಿದ ಆರೋಪದ ಮೇಲೆ ಮಿಥಾಲಿ ಅವರನ್ನು ಈ ಹಿಂದೆ ಪೊಲೀಸರು ಬಂಧಿಸಲು ಮುಂದಾಗುತ್ತಾರೆ. ಆದರೆ ಪೊಲೀಸರಿಂದ ತಪ್ಪಿಸಿಕೊಳ್ಳುವ ವೇಳೆ ಆಕೆ ಹಲ್ಲೆ ನಡೆಸಿ ಪರಾರಿ ಆಗಲು ಯತ್ನಿಸಿದ್ದರು.
ಬಳಿಕ ಪೊಲೀಸರು ಖಿನ್ನತೆ ಮತ್ತು ಇತರ ಮಾನಸಿಕ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದ ಮಿಥಾಲಿಯನ್ನು ನಂತರ ಥಾಣೆಯಲ್ಲಿರುವ ನಾಗರಿಕ ಮಾನಸಿಕ ಕೇಂದ್ರಕ್ಕೆ ದಾಖಲಿಸಿದ್ದರು. ಆದರೆ ಇಂದು ಮಿಥಾಲಿ ಎಲ್ಲಿದ್ದಾರೆ ಎನ್ನುವುದರ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಅವರು ಮಾನಸಿಕ ಕೇಂದ್ರದಲ್ಲಿದ್ದಾರಾ ಅಥವಾ ಇಲ್ವೋ? ಎನ್ನುವುದರ ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲ ಎಂಬುದು ಪೊಲೀಸರ ಹೇಳಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ