ಭಾರತ: ದೇಶ ಒಂದು ನಾಮ ಹಲವು..!


ದಿನೇಶ ಎಂ, Oct 16, 2022, 5:45 PM IST

thumbnail india name

ದೇಶ, ಭಾಷೆ, ಅಧಿಕಾರ ಮತ್ತು ನೈಸರ್ಗಿಕ ಬದಲಾವಣೆಗಳು ಸ್ಥಳಗಳ ಹೆಸರನ್ನು ಬದಲಾಯಿಸುತ್ತವೆ, ಈ ಎಲ್ಲಾ ಪ್ರಭಾವಗಳನ್ನು ಮೀರಿ ಭಾರತದ ಹಲವು ಪ್ರದೇಶಗಳು ತಮ್ಮ ಮೂಲ ಹೆಸರು, ಇತಿಹಾಸಗಳನ್ನು ಉಳಿಸಿಕೊಂಡಿವೆ. ಆದರೆ, ಕೆಲ ಪ್ರದೇಶಗಳು ತಮ್ಮ ಹೆಸರುಗಳನ್ನು ಮೂಲ ರೂಪದಲ್ಲಿ ಉಳಿಸಿಕೊಳ್ಳದಿದ್ದರೂ ಎಲ್ಲೋ ಒಂದು ಕಡೆ ಮೂಲ ನಿವಾಸಿಗಳಿಗೆ ಅದರ ಮೂಲ ಹೆಸರಿನ ಪರಿಚಯವಿದೆ ಮತ್ತು ಕೆಲವು ಪೌರಾಣಿಕ ದಾಖಲೆಗಳಲ್ಲೂ ಅವುಗಳು ಉಳಿದುಕೊಂಡಿವೆ.

ಭಾರತವು ಇಂತಹ ಹಲವು ನಾಮಧೇಯಗಳನ್ನು ಒಳಗೊಂಡಿವೆ. ಜಂಬೂದ್ವೀಪ ಸಂಸ್ಕೃತದಲ್ಲಿ ‘ಜಂಬೂ ಫಲ’ ಅಂದರೆ ನೇರಳೆ ಹಣ್ಣು. ಪುರಾತನ ಭರತ ಖಂಡದ ನೇರಳೆ ಮರಗಳಲ್ಲಿ ಬೃಹತ್ ಗಾತ್ರದ ನೇರಳೆ ಹಣ್ಣುಗಳು ಬಿಡುತ್ತಿದ್ದರಿಂದ “ಜಂಬೂ ದ್ವೀಪ” ಎಂದು ಕರೆಯುತ್ತಿದ್ದರು ಎನ್ನಲಾಗಿದೆ. ‘ಭಾರತ’ ಅಧಿಕೃತ ಹೆಸರಾಗುವ ಮೊದಲು ಪ್ರಾಚೀನ ಗ್ರಂಥಗಳಲ್ಲಿ ಮತ್ತು ಆಗ್ನೇಯ ಏಷ್ಯಾದ ಅನೇಕ ದೇಶಗಳಲ್ಲಿ ಭಾರತಕ್ಕೆ ಜಂಬೂದ್ವೀಪ ಎಂಬ ಹೆಸರು ಐತಿಹಾಸಿಕ ಪದವಾಗಿ ಬಳಸಲ್ಪಡುತ್ತಿತ್ತು. ವಿಷ್ಣು ಪುರಾಣದಲ್ಲಿ ‘ಸುದರ್ಶನ ದ್ವೀಪ’ ಎಂತಲೂ ಭಾರತವನ್ನು ಕರೆದಿದ್ದಾರೆ.

ಇನ್ನು ಭಾರತವನ್ನು ಸಂಸ್ಕೃತದಲ್ಲಿ “ಆರ್ಯಾವರ್ತ” ಎಂದರೆ ‘ಆರ್ಯರ ವಾಸಸ್ಥಾನ’ ಎಂದು ಕರೆಯಲಾಗುತ್ತಿತ್ತು. ಮನು ಸ್ಮೃತಿ “ಹಿಮಾಲಯ ಮತ್ತು ವಿಂಧ್ಯ ಶ್ರೇಣಿಗಳ ನಡುವಿನ ಪೂರ್ವ, ಬಂಗಾಳಕೊಲ್ಲಿಯಿಂದ ಹಿಡಿದು ಪಶ್ಚಿಮ ಸಮುದ್ರದ ಅಂದರೆ ಅರೇಬಿಯನ್ ಸಮುದ್ರ ವರೆಗಿನ ಭೂಭಾಗಕ್ಕೆ ಆರ್ಯಾವರ್ತ ಎಂದು ಪುರಾಣಗ್ರಂಥಗಳಲ್ಲಿ ಉಲ್ಲೇಖವಾಗಿವೆ.

ಹಿಂದೂಸ್ತಾನ ಎನ್ನುವ ಹೆಸರಿಗೆ ಕಾರಣ, ಪುರಾತನ ಕಾಲದಲ್ಲಿ ಅರಬ್ಬರು ಭಾರತವನ್ನು ‘ಹಿಂದ್’ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಭಾರತದಲ್ಲಿ ಸಿಂಧು ನದಿ ಹರಿಯುತ್ತಿದ್ದರಿಂದ ‘ಸಿಂಧ್’ ಉಚ್ಚರಣೆಯೇ ಅರಬ್ಬರ ಬಾಯಲ್ಲಿ ‘ಹಿಂದ್’ ಎಂದಾಯಿತು. ಸುಮಾರು ಕ್ರಿ. ಶ. ಒಂದನೇ ಶತಮಾನದಿಂದ ಪರ್ಷಿಯನ್ನರು ಒಂದು ಪ್ರದೇಶವನ್ನು ಉಲ್ಲೇಖಿಸಲು ಬಳಸುವ ‘ಸ್ತಾನ್’ ಸೇರಿಸಿ ‘ಹಿಂದೂಸ್ತಾನ’ ಎಂದು ಕರೆಯಲು ಪ್ರಾರಂಭಿಸಿದರು ಎನ್ನಲಾಗಿದೆ. ಭಾರತ ನಮಗೆಲ್ಲ ತಿಳಿದಿರುವಂತೆ ಭರತ ಚಕ್ರವರ್ತಿ ಆಳಿದ ಭೂಮಿಯನ್ನೇ ಭಾರತ ಎಂದು ಕರೆಯುತ್ತಿದ್ದೇವೆ.

ಭಾರತದಲ್ಲಿನ ಅಂತಹ ಕೆಲವು ಪ್ರದೇಶಗಳು, ಮುಖ್ಯವಾಗಿ ದೇವಿಯ ಹೆಸರಿನ ಹಿನ್ನಲೆಗಳೊಂದಿಗೆ ತಳುಕು ಹಾಕಿಕೊಂಡಿರುವ ಸ್ಥಳಗಳು ಬಹಳಷ್ಟಿವೆ, ಅವುಗಳು ದೇವಿಯ ಶಕ್ತಿ ಪೀಠ, ದೇವಾಲಯ, ಜನಾಂಗಗಳ ಆಧಾರದ ಮೇಲೂ ಭಾರತಹ ಹಲವು ನಗರಗಳಿಗೆ ವಿಭಿನ್ನ ಹೆಸರುಗಳು ಬಂದಿವೆ. ಅವುಗಳಲ್ಲಿ ಕೆಲವು ಇಂತಿವೆ.

  • ಚಂಡೀಘಡ: ಪಂಜಾಬ್ – ಹರ್ಯಾಣ ನಗರದ ಹೊರವಲಯದಲ್ಲಿ ಚಂಡೀದೇವಿಯ ದೇವಾಲಯದಿಂದಾಗಿ ಈ ನಗರಕ್ಕೆ ಚಂಡೀಘಡ ಎನ್ನುವ ಹೆಸರು ಬಂದಿದೆ.

 

  • ನೈನಿತಾಲ್ ಉತ್ತರಾಖಂಡ್ : ಉತ್ತರಾಖಂಡ್ ಪ್ರಸಿದ್ದ ಗಿರಿಧಾಮವಾದ ನೈನಿತಾಲ್. ಈ ಪ್ರದೇಶದ ಸುಪ್ರಸಿದ್ಧ ಸ್ಥಳದಲ್ಲಿ ಒಂದಾದ ದುರ್ಗಾ ಮಾತೆಯ ಅವತಾರವಾದ ನೈನಾ ದೇವಿಯ ದೇವಾಲಯದಿಂದಾಗಿ ಈ ನಗರಕ್ಕೆ ನೈನಿತಾಲ್ ಎಂಬ ಹೆಸರನ್ನು ನೀಡಲಾಗಿದೆ.

 

  • ಮುಂಬೈ: ಮಹಾರಾಷ್ಟ್ರ ಮುಂಬೈನ ಮುಂಬಾದೇವಿ ದೇವಾಲಯದಿಂದಾಗಿ ಮುಂಬೈಗೆ ಆ ಹೆಸರು ಬಂದಿದೆ. ಈ ದೇವಾಲಯವನ್ನು ಆರಂಭದಲ್ಲಿ ಐದು ಶತಮಾನಗಳ ಹಿಂದೆ ಅಂಬಾ ದೇವಿಯ ಆರಾಧನೆಗಾಗಿ ನಿರ್ಮಿಸಲಾಯಿತು, ಆದರೆ ಕಾಲಾನಂತರದಲ್ಲಿ, ಈ ಹೆಸರು ಮುಂಬಾ ದೇವಿ ಎಂದು ಬದಲಾಯಿತು ಮತ್ತು ಇದರ ಪರಿಣಾಮವಾಗಿ ನಗರವು ಮುಂಬೈ ಎಂದು ಕರೆಯಲ್ಪಟ್ಟಿತು ಎನ್ನಲಾಗಿದೆ.

 

  • ದೆಹಲಿ: ಮೆಹ್ರೌಲಿ ಜಿಲ್ಲೆಯಲ್ಲಿರುವ ಯೋಗಮಾಯಾ ದೇವಾಲಯದ ಕಾರಣ, ಮೊಘಲರು ಆಗಮಿಸುವ ಮುಂಚೆಯೇ ದೆಹಲಿಯ ಕೆಲವು ಪ್ರದೇಶಗಳನ್ನು ಯೊಗ್ನಿಪುರ ಎಂದು ಕರೆಯಲಾಗುತ್ತಿತ್ತು. ಈ ದೇವಾಲಯವನ್ನು ಸುಮಾರು 5000 ವರ್ಷಗಳ ಹಿಂದೆ ಪಾಂಡವ ಸಹೋದರರಿಂದ ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ.

 

  • ಪಾಟ್ನಾ: ಬಿಹಾರಿನ ರಾಜಧಾನಿ ಮತ್ತು ದೊಡ್ಡ ನಗರವಾಗಿರುವ ಪಾಟ್ನಾದಲ್ಲಿ, ಶಿವ ದೇವರ ಪತ್ನಿ ಸತಿ ದೇವಿಯ ಬಲ ತೊಡೆಯು ಹಳೆಯ ಪಾಟ್ನಾ ಇರುವ ನೆಲದ ಮೇಲೆ ಬಿದ್ದಿದೆ ಎಂದು ಹೇಳಲಾಗುತ್ತದೆ. ಈ ಸ್ಥಳದಲ್ಲಿ ಶಕ್ತಿ ಪೀಠವನ್ನು ಸ್ಥಾಪಿಸಲಾಯಿತು ಮತ್ತು ಇಲ್ಲಿ ದೇವಿಯನ್ನು ಪಟನ್ ದೇವಿ ಎಂದು ಕರೆಯಲಾಗುತ್ತಿತ್ತು. ಈ ಹೆಸರಿನಿಂದಲೇ ಪಾಟ್ನಾ ನಗರಕ್ಕೆ ಈ ಹೆಸರು ಬಂದಿತು ಎನ್ನಲಾಗಿದೆ.

ಇಂತಹ ಹಲವು ಧರ್ಮ, ಜಾತಿ, ಆಚರಣೆ ಮತ್ತು ಹಲವು ಭಾಷೆಗಳ ತವರಾದ ಭಾರತದ ಈ ಭೂ ಭಾಗವನ್ನು ಕೆಲವರು ಪಾಂಡವ ಹಾಗೂ ಕೌರವರ ವಂಶಸ್ಥರಾದ ದುಷ್ಯಂತ ಮತ್ತು ಶಕುಂತಲೆಯರ ಮಗನಾದ ಭರತನು ಆಳುತ್ತಿದ್ದರಿಂದ ಭಾರತ ಎಂಬ ಹೆಸರು ಬಂತೆಂದೂ, ಕೆಲವರು ರಾಮ ಸಹೋದರ ಭರತ ಆಳುತ್ತಿದ್ದರಿಂದಲೂ ಈ ಹೆಸರು ಬಂತೆಂದೂ ಹೇಳುತ್ತಾರೆ. ಇಂಡಿಯಾ ಈ ಹೆಸರು ‘ಇಂಡಸ್’ ಎಂಬ ಪದದಿಂದ ಉತ್ಪತ್ತಿಗೊಂಡಿದೆ. ಇಂಡಸ್ ಅಥವಾ ಸಿಂಧು ನದಿ ಹರಿಯುತ್ತಿದ್ದ ನಾಡನ್ನು ‘ಇಂಡಿಯಾ’ ಎಂದು ಕರೆದರು. ಇವುಗಳು ಭಾರತದ ಮತ್ತು ಇದರ ಕೆಲವು ನಗರಗಳ ಹೆಸರಿನ ಹಿಂದಿನ ಕಾರಣಗಳ ವಿವರ.

ಬರಹ: ದಿನೇಶ ಎಂ.

ಟಾಪ್ ನ್ಯೂಸ್

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.