ಪ್ರೀತಿಯ ಅಜ್ಜನ ಸಾವಿನ ನೋವು…22 ರ ಹರೆಯದಲ್ಲೇ ಸಮಾಜ ಸೇವೆಗಿಳಿದ ಯುವತಿ


Team Udayavani, Mar 18, 2023, 5:40 PM IST

web-suhan

ನಮ್ಮ ಜೀವನದಲ್ಲಿ ಆತ್ಮೀಯರನ್ನು ಕಳೆದುಕೊಂಡ ಸಂದರ್ಭದಲ್ಲಿನ ನೋವು ಬೇರೆ ಯಾವ ಸಂದರ್ಭದಲ್ಲಿ  ಅಷ್ಟಾಗಿ ಆಗದು. ಇವತ್ತು ನಮ್ಮ ಜೊತೆಗಿದ್ದವರು ನಾಳೆ ನಮ್ಮ ನೆನಪಿನಲ್ಲಿ ಮಾತ್ರ ನಮ್ಮನ್ನು ಕಾಡುತ್ತಾರೆ ಎನ್ನುವುದನ್ನು ಅನುಭವಿಸುವಾಗ ಆಗುವ ದುಃಖವಿದೆ ಅಲ್ವಾ ಅದನ್ನು ಅಕ್ಷರ ರೂಪದಲ್ಲಿ ಇಳಿಸಿ ಅರ್ಥೈಸಲು ಸಾಧ್ಯವಾಗದು.

ಈ ಮೇಲಿನ ಮಾತು ಹೇಳಲು ಕಾರಣ  22 ವರ್ಷದ ಖುಷಿ ಪಾಂಡೆ ಎನ್ನುವ ಯುವತಿ. ಉತ್ತರ ಪ್ರದೇಶದ ಲಕ್ನೋ ಮೂಲದ ಖುಷಿ ಪಾಂಡೆ ಸದ್ಯ ಎಲ್ ಎಲ್ ಬಿ ಓದುತ್ತಿದ್ದಾರೆ. ಈ ಸಣ್ಣ ವಯಸಿನಲ್ಲೇ ಅವರು ಜನ ಮೆಚ್ಚುವ ಸಮಾಜ ಸೇವೆಯನ್ನು ಅಳಿಲು ಸೇವೆಯನ್ನಾಗಿ ಮಾಡುತ್ತಿದ್ದಾರೆ. ಭಾರತದಲ್ಲಿ ನಿತ್ಯ ಸಾವಿರಾರು ರಸ್ತೆ ಅಪಘಾತಗಳು ಸಂಭವಿಸುತ್ತವೆ. ನೂರಾರು ಜನರು ತಮ್ಮ ಆತ್ಮೀಯರನ್ನು, ಸ್ನೇಹಿತರನ್ನು ಕಳೆದುಕೊಳ್ಳುತ್ತಾರೆ‌. ಇಂಥದ್ದೇ ಅಪಘಾತ ಒಂದರಲ್ಲಿ ಖುಷಿ ತನ್ನ ಆಪ್ತ ಜೀವವಾಗಿದ್ದ ತನ್ನ ಬಾಲ್ಯದಲ್ಲಿ ಮುದ್ದು ಮಾಡಿದ್ದ ಅಜ್ಜ ( ತಾಯಿಯ ತಂದೆ) ನನ್ನು ಕಳೆದುಕೊಳ್ಳುತ್ತಾರೆ.

ಅದು ಡಿಸೆಂಬರ್ 2022 ರ ಡಿಸೆಂಬರ್ 25 ರ ಮಂಜಿನ ಸಂಜೆಯ ಸಮಯ. ಊರೆಲ್ಲ ಕ್ರಿಸ್ ಮಸ್ ಹಬ್ಬದ ಸಂಭ್ರಮದಲ್ಲಿತ್ತು. ಅಜ್ಜ ಇನ್ನೇನು ಮನೆಗೆ ಬರುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದ ಖುಷಿಗೆ ಅದೊಂದು ಆಘಾತಕಾರಿ ಸುದ್ದಿ ಬರುತ್ತದೆ. ಸೈಕಲ್ ನಲ್ಲಿ ‌ಬರುತ್ತಿದ್ದ ಖುಷಿಯ ಅಜ್ಜನಿಗೆ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಹಿರಿಯ ಅಲ್ಲೇ ಕೊನೆಯುಸಿರೆಳೆದ್ದಾರೆ.

ಅಜ್ಜನ ನಿಧನ ಸುದ್ದಿ ಖುಷಿಗೆ ಮುಂದೆ ಯಾರಿಗೂ ಈ ರೀತಿ ಆಗಬಾರದೆನ್ನುವ ಬದಲಾವಣೆಯ ಯೋಚನೆಯನ್ನು ತರುತ್ತದೆ. ಇದೇ ಕಾರಣದಿಂದ ಖುಷಿ ಸಮಾಜ ಸೇವೆಯನ್ನು ಮಾಡಲು ‌ಮುಂದಾಗುತ್ತಾರೆ.

ಬೈಕ್, ಕಾರುಗಳ ಹಾಗೆ ಸೈಕಲ್ ಸವಾರರು ರಸ್ತೆಯಲ್ಲಿ ಹೋಗುತ್ತಿರುತ್ತಾರೆ. ವೇಗವಾಗಿ ಬಂದು ಸೈಕಲ್ ಸವಾರರಿಗೆ ಢಿಕ್ಕಿಯಾದರೆ ಅಪಘಾತದಲ್ಲಿ ಸವಾರರು ಮೃತಪಡುತ್ತಾರೆ. ಹೀಗಾಗಿ ವಾಹನದಲ್ಲಿ ಇಂಡಿಕೇಟರ್ ಆಗಿ ಅಳವಡಿಸುವ ಕೆಂಪು ಲೈಟನ್ನು ಸೈಕಲ್ ಗಳಿಗೆ ಅಳವಡಿಸಲು ನಿರ್ಧರಿಸಿ ಆರಂಭಿಕವಾಗಿ ಜನವರಿ 13, 2022 ರಂದು ಮೊದಲ ಬಾರಿ ಉಚಿತವಾಗಿ ಸೈಕಲಿನ ಹಿಂಬದಿಗೆ ಲೈಟ್ ಗೆ ಅಳವಡಿಸುತ್ತಾರೆ.

ಈ ಕಾರ್ಯ ನಿಧಾನ ಲಕ್ನೋದಲ್ಲಿ ಗಮನ ಸೆಳೆಯುತ್ತದೆ. ಮಂಜು ಕವಿದ ರಸ್ತೆಯಲ್ಲಿ ಹೋಗುವ ಸೈಕಲ್ ಸವಾರರನ್ನು ನೋಡಿ ಅವರ ಸೈಕಲ್ ಗೆ ರೆಡ್ ಲೈಟ್ ಹಾಕುತ್ತಾರೆ. ನಿಧಾನವಾಗಿ ಹೋಗಿ ಎನ್ನುವ ಹಿತನುಡಿಯನ್ನು ಹೇಳಿ ಮತ್ತೊಂದು ಸೈಕಲ್ ಸವಾರರ ಬಳಿ ಹೋಗುತ್ತಾರೆ.

ಇದುವರೆಗೆ ಖುಷಿ 500 ಕ್ಕೂ ಹೆಚ್ಚಿನ ಸೈಕಲ್ ಗಳಿಗೆ ರೆಡ್ ಲೈಟ್ ಗಳನ್ನು ಅಳವಡಿಸಿದ್ದಾರೆ. ಅಪಘಾತದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಇದಲ್ಲದೇ ಸರ್ಕಾರಿ ಶಾಲಾ‌ ಮಕ್ಕಳಿಗೆ ಋತುಚಕ್ರದ ನೈರ್ಮಲ್ಯ ಕುರಿತ ಕಾರ್ಯಕ್ರಮ, ಆಸಿಡ್ ದಾಳಿಯಿಂದ ಬದುಕುಳಿದವರಿಗೆ ಕೌಶಲ್ಯ-ಆಧಾರಿತ ಕಾರ್ಯಾಗಾರಗಳನ್ನು ಮಾಡುತ್ತಿದ್ದಾರೆ. ಹಿಂದುಳಿದ ಮಕ್ಕಳಿಗಾಗಿ ಶಾಲೆಯನ್ನು ತೆರೆದಿದ್ದಾರೆ. ಇದುವರೆಗೆ ಲಕ್ನೋದ 11 ಹಳ್ಳಿಗಳಿಗೆ ಅಗತ್ಯ ಪಡಿತರವನ್ನು ವಿತರಿಸಿದ್ದಾರೆ. ಮತ್ತು ನಗರ ಸ್ವಚ್ಛ ಯೋಜನೆಗಳಲ್ಲಿ ತಮ್ಮನ್ನು  ತಾವು ತೊಡಗಿಸಿಕೊಂಡಿದ್ದಾರೆ.

ಸುಹಾನ್‌ ಶೇಕ್ 

ಟಾಪ್ ನ್ಯೂಸ್

No Different Rule For MP, MLA, Common People On Suspension Of Conviction’: Supreme Court

ಜನಪ್ರತಿನಿಧಿಗಳಿಗೂ ಜನಸಾಮಾನ್ಯರಿಗೂ ಒಂದೇ ನಿಯಮ; ಸುಪ್ರೀಂ ಕೋರ್ಟ್

“ಜೈ ಶ್ರೀರಾಮ್” ಎಂದು ಹೇಳಿ ರಾಮನವಮಿ ದಿನ ʼಆದಿಪುರುಷ್‌ʼ ಹೊಸ ಪೋಸ್ಟರ್‌ ಹಂಚಿಕೊಂಡ ಪ್ರಭಾಸ್

“ಜೈ ಶ್ರೀರಾಮ್” ಎಂದು ಹೇಳಿ ರಾಮನವಮಿ ದಿನ ʼಆದಿಪುರುಷ್‌ʼ ಹೊಸ ಪೋಸ್ಟರ್‌ ಹಂಚಿಕೊಂಡ ಪ್ರಭಾಸ್

“ಆಡಿದ್ದು ಸಾಕು ಓದು” ಎಂದ ಅಪ್ಪನ ಮಾತಿಗೆ ಮನನೊಂದು ಆತ್ಮಹತ್ಯೆಗೆ ಶರಣಾದ 9 ವರ್ಷದ ಮಗಳು

“ಆಡಿದ್ದು ಸಾಕು ಓದು” ಎಂದ ಅಪ್ಪನ ಮಾತಿಗೆ ಮನನೊಂದು ಆತ್ಮಹತ್ಯೆಗೆ ಶರಣಾದ 9 ವರ್ಷದ ಮಗಳು

2–gadaga

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಚುನಾವಣಾ ಪ್ರಚಾರ ಸಾಮಗ್ರಿ ವಶಕ್ಕೆ

tdy-2ಮಹಾರಾಷ್ಟ್ರ: ರಾಮಮಂದಿರದ ಹೊರಗಡೆ ಗುಂಪು ಘರ್ಷಣೆ; ಪೊಲೀಸ್‌ ವಾಹನಗಳಿಗೆ ಬೆಂಕಿ, ಕಲ್ಲು ತೂರಾಟ

ಮಹಾರಾಷ್ಟ್ರ: ರಾಮಮಂದಿರದ ಹೊರಗಡೆ ಗುಂಪು ಘರ್ಷಣೆ; ಪೊಲೀಸ್‌ ವಾಹನಗಳಿಗೆ ಬೆಂಕಿ, ಕಲ್ಲು ತೂರಾಟ

ಭಾರತದಲ್ಲಿ ಪಾಕ್‌ ಸರ್ಕಾರದ ಟ್ವಿಟರ್‌ ಖಾತೆಗೆ ಮತ್ತೆ ತಡೆ

ಭಾರತದಲ್ಲಿ ಪಾಕ್‌ ಸರ್ಕಾರದ ಟ್ವಿಟರ್‌ ಖಾತೆಗೆ ಮತ್ತೆ ತಡೆ

surya rohith

ಕೆಲವು ಪಂದ್ಯಗಳಿಗೆ ರೋಹಿತ್‌ ರೆಸ್ಟ್‌ : ಸೂರ್ಯಕುಮಾರ್‌ ಯಾದವ್‌ ಉಸ್ತುವಾರಿ ನಾಯಕ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

web-health

ಎಚ್ಚರ…ಬಿಸಿಲ ಬೇಗೆಗೆ ನಿರ್ಜಲೀಕರಣ ಸಮಸ್ಯೆ ಹೆಚ್ಚಳ; ಅಗತ್ಯವಾಗಿ ಈ ಆಹಾರ ಸೇವಿಸಿ

Mumbai to London;ಯೋಗೇಶ್ ಎಂಬ ಅಲೆಮಾರಿ! 100 ದಿನಗಳ ಬೈಕ್ ಪ್ರಯಾಣ…24 ದೇಶಗಳಿಗೆ ಭೇಟಿ…

Mumbai to London;ಯೋಗೇಶ್ ಎಂಬ ಅಲೆಮಾರಿ! 100 ದಿನಗಳ ಬೈಕ್ ಪ್ರಯಾಣ…24 ದೇಶಗಳಿಗೆ ಭೇಟಿ…

ಈ ನಿಗೂಢ ಗುಹೆಯಲ್ಲಿದೆ ಚಿನ್ನದ ಖಜಾನೆ: ಇದರ ರಹಸ್ಯ ಭೇದಿಸಲು ಯಾರಿಗೂ ಸಾಧ್ಯವಾಗಿಲ್ಲವಂತೆ

ಈ ನಿಗೂಢ ಗುಹೆಯಲ್ಲಿದೆ ಚಿನ್ನದ ಖಜಾನೆ: ಇದರ ರಹಸ್ಯ ಭೇದಿಸಲು ಯಾರಿಗೂ ಸಾಧ್ಯವಾಗಿಲ್ಲವಂತೆ

Dark-circle

ಮುಖದ ಅಂದ ಕೆಡಿಸುವ “ಡಾರ್ಕ್ ಸರ್ಕಲ್ಸ್” ನಿವಾರಣೆಗೆ ಈ ಮನೆಮದ್ದು ಬಳಸಿ…

1-sdsa-dsd

ಮಕ್ಕಳಲ್ಲೂ ಹೃದಯ ಸಂಬಂಧಿ ಕಾಯಿಲೆ; ತಾಯಂದಿರು ಎಚ್ಚರ ವಹಿಸಲೇ ಬೇಕು

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

No Different Rule For MP, MLA, Common People On Suspension Of Conviction’: Supreme Court

ಜನಪ್ರತಿನಿಧಿಗಳಿಗೂ ಜನಸಾಮಾನ್ಯರಿಗೂ ಒಂದೇ ನಿಯಮ; ಸುಪ್ರೀಂ ಕೋರ್ಟ್

“ಜೈ ಶ್ರೀರಾಮ್” ಎಂದು ಹೇಳಿ ರಾಮನವಮಿ ದಿನ ʼಆದಿಪುರುಷ್‌ʼ ಹೊಸ ಪೋಸ್ಟರ್‌ ಹಂಚಿಕೊಂಡ ಪ್ರಭಾಸ್

“ಜೈ ಶ್ರೀರಾಮ್” ಎಂದು ಹೇಳಿ ರಾಮನವಮಿ ದಿನ ʼಆದಿಪುರುಷ್‌ʼ ಹೊಸ ಪೋಸ್ಟರ್‌ ಹಂಚಿಕೊಂಡ ಪ್ರಭಾಸ್

“ಆಡಿದ್ದು ಸಾಕು ಓದು” ಎಂದ ಅಪ್ಪನ ಮಾತಿಗೆ ಮನನೊಂದು ಆತ್ಮಹತ್ಯೆಗೆ ಶರಣಾದ 9 ವರ್ಷದ ಮಗಳು

“ಆಡಿದ್ದು ಸಾಕು ಓದು” ಎಂದ ಅಪ್ಪನ ಮಾತಿಗೆ ಮನನೊಂದು ಆತ್ಮಹತ್ಯೆಗೆ ಶರಣಾದ 9 ವರ್ಷದ ಮಗಳು

2–gadaga

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಚುನಾವಣಾ ಪ್ರಚಾರ ಸಾಮಗ್ರಿ ವಶಕ್ಕೆ

tdy-2ಮಹಾರಾಷ್ಟ್ರ: ರಾಮಮಂದಿರದ ಹೊರಗಡೆ ಗುಂಪು ಘರ್ಷಣೆ; ಪೊಲೀಸ್‌ ವಾಹನಗಳಿಗೆ ಬೆಂಕಿ, ಕಲ್ಲು ತೂರಾಟ

ಮಹಾರಾಷ್ಟ್ರ: ರಾಮಮಂದಿರದ ಹೊರಗಡೆ ಗುಂಪು ಘರ್ಷಣೆ; ಪೊಲೀಸ್‌ ವಾಹನಗಳಿಗೆ ಬೆಂಕಿ, ಕಲ್ಲು ತೂರಾಟ