ಲಾಕ್ ಡೌನ್ ನಲ್ಲಿ ಕ್ರೇಜ್ ಹುಟ್ಟಿಸಿದ ಟಾಪ್ ಆನ್ ಲೈನ್ ಗೇಮ್ಸ್ ಗಳ ಮಾಹಿತಿ ಇಲ್ಲಿದೆ !


Team Udayavani, Apr 28, 2020, 5:57 PM IST

ludo

ಲಾಕ್ ಡೌನ್ ಪರಿಣಾಮದಿಂದ ಜನರು ಇಂದು  ತಮ್ಮ ಬೇಸರವನ್ನು ಕಳೆಯಲು ಮನರಂಜನೆಯ ಮೊರೆಹೋಗಿದ್ದಾರೆ. ಸಿನಿಮಾಗಳನ್ನು ವೀಕ್ಷಿಸುವುದು, ಪುಸ್ತಕಗಳನ್ನು ಓದುವುದು ಮುಂತಾದ ಹಲವಾರು ಹವ್ಯಾಸಗಳನ್ನು ರೂಢಿಸಿಕೊಂಡಿದ್ದಾರೆ. ಕೆಲವರು ಅದರಲ್ಲೂ ವಿಶೇಷವಾಗಿ ಯುವಜನಾಂಗ ತಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಆನ್ ಲೈನ್ ಗೇಮಿಂಗ್ ಗಳ ಮೊರೆ ಹೋಗಿದ್ಧಾರೆ. ಇದರಲ್ಲಿ ಹಲವು ಜನರು ಏಕಕಾಲಕ್ಕೆ ಆಡಬಹುದಾದ್ದರಿಂದ ವಿಶೇಷ ಆಕರ್ಷಣೆಯನ್ನು ಪಡೆದಿವೆ.

ಈಗಾಗಲೆ ಲೂಡೋ ಕಿಂಗ್, ಪಬ್ ಜೀ  ಮುಂತಾದ ಗೇಮ್ ಗಳು ಜನರಲ್ಲಿ ಭಾರೀ  ಕ್ರೇಜ್ ಹುಟ್ಟಿಸಿವೆ. ಅವುಗಳೊಂದಿಗೆ ಮತ್ತಷ್ಟು ಹೊಸ ಗೇಮ್‌ಗಳು ಟ್ರೆಂಡ್‌ ಮೂಡಿಸಿವೆ. ಬಹುತೇಕ ಗೇಮ್‌ಗಳು ಸಿಂಗಲ್‌ ಪ್ಲೇಯರ್, ಮಲ್ಟಿಪ್ಲೇಯರ್ ಹಾಗೂ ಆನ್‌ಲೈನ್‌ ಮೂಲಕ ಆಡುವ ಸೌಲಭ್ಯ ಪಡೆದಿವೆ. ಅಂತಹ ಕೆಲವು ಗೇಮ್ ಗಳ ಪರಿಚಯ ಇಲ್ಲಿದೆ.

ಲುಡೊ ಕಿಂಗ್ ಗೇಮ್ ಅಥವಾ ಲೂಡೋ ಕ್ಲಬ್ :  ಲಾಕ್‌ಡೌನ್‌ ಅವಧಿಯಲ್ಲಿ ಭಾರಿ ಜನಪ್ರಿಯವಾದ  ಏಕೈಕ ಆಟವಿದು. ಇದನ್ನು ಎಲ್ಲಾ ವಯೋಮಾನದವರೂ ಆಡಬಹುದಾಗಿದ್ದು ಸಿಂಗಲ್ ಪ್ಲೇಯರ್, ಮಲ್ಟಿಪ್ಲೇಯರ್, ಹಾಗೂ ಆನ್‌ಲೈನ್ ಪ್ಲೇಯರ್ಸ್‌ ಜೊತೆಗೆ ಆಟವನ್ನು ಆಡಬಹುದಾದ ಆಯ್ಕೆಗಳಿವೆ. ಗಮನಿಸಬೇಕಾದ ಅಂಶವೆಂದರೇ ಇದನ್ನು ಚಾಂಪಿಯನ್ ಷಿಪ್ ಮಾದರಿಯಲ್ಲಿ ಆಡಬಹುದು. ಅಂದರೇ ನಿರ್ದಿಷ್ಟ ವ್ಯಕ್ತಿಗಳು ಸಮಯ ನಿಗದಿಪಡಿಸಿಕೊಂಡು  ಕ್ವಾಲಿಫೈಯರ್, ಲೀಗ್, ಸೆಮಿಫೈನಲ್, ಫೈನಲ್ ಎಂಬ ರೀತಿಯಲ್ಲಿ ಆಡಿ ಬಹುಮಾನವನ್ನು ಘೋಷಿಸಿಕೊಳ್ಳಬಹುದು.

ಕ್ಯಾರಮ್ ಪೂಲ್(Carrom Pool): ಮನೆಯಲ್ಲಿ ಕೇರಂ ಆಟವನ್ನು ಆಡಿರುತ್ತೀರಾ.  ಅದೇ ಮಾದರಿಯಲ್ಲಿ  ಮೊಬೈಲ್ ಕೇರಂ ಗೇಮ್ ಇದಾಗಿದ್ದು, ಮಲ್ಟಿಪ್ಲೇಯರ್‌ ಸೇರಿ ಆಡಬಹುದಾಗಿದೆ. ಇಲ್ಲಿ ಮನರಂಜನೆಗೆ ಮತ್ತು ಕುತೂಹಲತೆಗೆ ಯಾವುದೇ ಕೊರತೆಯಿರುವುದಿಲ್ಲ.

ಫಿಫಾ ಸಾಕರ್ (FIFA Soccer):  ಅತ್ಯುತ್ತಮ ಗ್ರಾಫಿಕ್ಸ್ ಮತ್ತು ವಾಸ್ತವಿಕ ಫುಟ್ ಬಾಲ್ ನಂತೆ ಭಾಸವಾಗುವ ರೀತಿಯಲ್ಲಿ ಈ ಗೇಮ್ ರೂಪಿಸಲಾಗಿದೆ.  ಇದು ಮೊಬೈಲ್ ಮತ್ತು ಪಿಸಿ ಎರಡಕ್ಕೂ ಸಪೋರ್ಟ್ ಮಾಡುತ್ತದೆ.  ರಿಯಲ್‌ ಟೈಮ್‌ನಲ್ಲಿ 11 v 11 ಮಲ್ಟಿಪ್ಲೇಯರ್ ಮೋಡ್‌ನಲ್ಲಿ ಭಾಗವಹಿಸಲು ಅನುಮತಿಸುತ್ತದೆ.

ಕ್ಲಾಷ್ ಆಫ್ ಕ್ಲಾನ್ಸ್: ಇದು ಥೇಟ್ ಯುದ್ಧ ಮಾದರಿಯ ಆಟವಾಗಿದ್ದು, ತಮ್ಮ ತಂಡದೊಂದಿಗೆ ಸಾಮ್ರಾಜ್ಯವನ್ನು ನಿರ್ಮಿಸಿ ಮತ್ತು ಅದನ್ನು  ಅದನ್ನು  ಶತ್ರುಗಳಿಂದ ರಕ್ಷಿಸುವ  ತಂತ್ರಭರಿತವಾದ ಆಟವಾಗಿದೆ.

ಇದೇ ಮಾದರಿಯಲ್ಲಿ ಫೋರ್ಟ್ನೈಟ್(Fortnite) ಎಂಬ ಗೇಮ್ ಕೂಡ ಯುದ್ಧದ ರಾಯಲ್ ಪರಿಕಲ್ಪನೆಯನ್ನು ಪರಿಚಯಿಸುತ್ತದೆ.  ಗ್ರಾಫಿಕ್ಸ್, ಸ್ಪರ್ಶ,  ಆಪ್ಟಿಮೈಸ್ಡ್ ನಿಯಂತ್ರಣಗಳು, ನಿಯಮಿತ ಅಪ್‌ಡೇಟ್‌ಗಳು ಆಟದ ಕ್ರೇಜ್‌ ಅನ್ನು ಆಸಕ್ತಿದಾಯಕ ಮಾಡಿವೆ.

ಕಾರ್ಡ್ ಗೇಮ್ ಇಷ್ಟಪಡುವವರಿಗೆ ಯುನೊ ಗೇಮ್‌(UNO):  ಆಟಗಾರರು ತಂಡ ರಚಿಸಿಕೊಳ್ಳಬಹುದು  ಮತ್ತು ಇದು ಸಾಮಾನ್ಯರಿಗೂ ಅರ್ಥವಾಗುವಂತಿದೆ.  ಇದಲ್ಲದೆ ಕಾಲ್ ಆಫ್ ಡ್ಯುಟಿ ಗೇಮ್ ಕೂಡ ಅತೀ ಹೆಚ್ಚಿನ  ಆಕರ್ಷಣೆ ಪಡೆದಿದ್ದು ಇದರಲ್ಲಿ ಟೀಮ್ ಡೆತ್‌ಮ್ಯಾಚ್, ಡೊಮಿನೇಶನ್, ಸರ್ಚ್ ಆಂಡ್ ಡಿಸ್ಟ್ರಾಯ್ ಸೇರಿದಂತೆ ಹಲವು ಗೇಮ್‌ ಮೋಡ್ ಗಳಿವೆ.

-ಸಂಗ್ರಹ

ಟಾಪ್ ನ್ಯೂಸ್

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

1–qwewqe

Ayodhya: ಸೂರ್ಯ ತಿಲಕ ಸಾಧ್ಯವಾಗಿಸಿದ ವಿಜ್ಞಾನಿಗಳಿಗೆ ತಲೆ ಬಾಗುತ್ತೇನೆ: ಅರುಣ್ ಯೋಗಿರಾಜ್

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

11

ಪೊಲೀಸ್‌ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್‌ ಸ್ಟರ್‌ ಆದದ್ದೇಗೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.