ಒಲಿದು ಬಂದ ಪದ್ಮ ಪ್ರಶಸ್ತಿ: ಪ್ರಾಚೀನ ದ್ರಾವಿಡ ಪಂಗಡ…ಇರುಲಾ ಹಾವಾಡಿಗರು…


Team Udayavani, Feb 5, 2023, 5:42 PM IST

irula

ತಮಿಳುನಾಡಿನ ಪ್ರಾಚೀನ ದ್ರಾವಿಡ ಸಮುದಾಯದ ಇರುಲಾ ಪಂಗಡಕ್ಕೆ ಸೇರಿದ ಇಬ್ಬರಿಗೆ ಕೇಂದ್ರ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿದೆ. ಇರುಲಾ ಪಂಗಡದ ಇಬ್ಬರು ಹಾವಾಡಿಗರು ಈ ವರ್ಷದ ಗಣರಾಜ್ಯೋತ್ಸವದಂದು ರಾಷ್ಟ್ರಪತಿಗಳ ಕೈಯಿಂದ ಪದ್ಮ ಪ್ರಶಸ್ತಿ ಸ್ವೀಕರಿಸಿ ಸುದ್ದಿಯಾಗಿದ್ದಾರೆ.

ಯಾರು ಈ ಇರುಲಾ ಮಂದಿ.?
ತಮಿಳುನಾಡಿನ ಪ್ರಾಚೀನ ದ್ರಾವಿಡ ಸಮುದಾಯದಲ್ಲಿ ಇರುಲಾ ಪಂಗಡ ಗುರುತಿಸಿಕೊಂಡಿದೆ. ಹೆಚ್ಚಾಗಿ ತಮಿಳುನಾಡಿನ ಉತ್ತರ ಭಾಗದಲ್ಲಿ ಕಾಣಿಸಿಕೊಳ್ಳುವ ಇರುಲರ ಸಣ್ಣ ಸಣ್ಣ ಗುಂಪುಗಳು ಕರ್ನಾಟಕದ ಕೆಲವು ಭಾಗಗಳಲ್ಲೂ, ಕೇರಳದ ಪಾಲಕ್ಕಾಡ್‌ನಲ್ಲೂ ಗುರುತಿಸಲ್ಪಟ್ಟಿದೆ. ಇಂದಿಗೂ ಸಣ್ಣ ಸಣ್ಣ ಗುಡಿಸಲುಗಳಲ್ಲೇ ಬದುಕುತ್ತಿರುವ ಈ ಇರುಲರು ಬಹಳ ಹಿಂದಿನಿಂದಲೂ ಹಾವು ಹಾಗೂ ಇಲಿಗಳನ್ನು ಹಿಡಿಯುವುದರಲ್ಲಿ ನಿಪುಣರೆಂದು ಪ್ರಸಿದ್ಧರಾಗಿದ್ದಾರೆ. ಪಾರಂಪರಿಕವಾಗಿಯೂ, ತಮ್ಮ ಹವ್ಯಾಸದಂತೆಯೂ ಹಾವು ಹಿಡಿಯುವ ಇರುಲಾ ಜನ ಹಾವು ಹಿಡಿಯುವುದನ್ನು ತಮ್ಮ ಪ್ರವೃತ್ತಿಯಂತೆ ಇಂದಿಗೂ ಕಾಣುತ್ತಿದ್ದಾರೆ ಮತ್ತು ಹಾವುಗಳನ್ನು ಹಿಡಿದು ಸಂರಕ್ಷಿಸುವುದೇ ತಮಗೆ ಅತ್ಯಂತ ಖುಷಿ ಕೊಡುವ ಸಂಗತಿ ಅಂತಲೂ ಹೇಳಿಕೊಂಡು ಬಂದಿದ್ಧಾರೆ. ಅತ್ಯಂತ ಸಲೀಸಾಗಿ ಹಾವು ಹಿಡಿಯುವುದರಲ್ಲಿ ಈ ಇರುಲರು ಎತ್ತಿದ ಕೈ. ವಿಶೇಷವೇನೆಂದ್ರೆ ಕೇವಲ ಇರುಲಾ ಪುರುಷರು ಮಾತ್ರವಲ್ಲ ಮಹಿಳೆಯರೂ ಹಾವು ಹಿಡಿಯುವುದನ್ನು ಕರಗತ ಮಾಡಿಕೊಂಡಿದ್ದಾರೆ. ಇಂದು ಈ ಮಾಡರ್ನ್‌ ಯುಗದಲ್ಲೂ ಹಾವು ಹಿಡಿಯುವುದನ್ನು ಕೈಬಿಡದ ಇರುಲರು ತಮ್ಮದೇ ಆದ ಇರುಲಾ ಕೋ-ಆಪರೇಟೀವ್‌ ಸೊಸೈಟಿ ಸ್ಥಾಪಿಸಿಕೊಂಡಿದ್ದಾರೆ. ಆ ಮೂಲಕ ವೈದ್ಯಕೀಯ ಉದ್ದೇಶಕ್ಕಾಗಿ ವಿಷಕಾರಿ ಹಾವುಗಳನ್ನು ಹಿಡಿದು ಅದರ ವಿಷಗಳನ್ನು ಸಂಗ್ರಹಿಸುತ್ತಾರೆ. ಅಂದ್ರೆ ಧೀರ್ಘಕಾಲದ, ಪರಿಹರಿಸಲು ತೀರಾ ಕಷ್ಟವೆನಿಸುವ ಖಾಯಿಲೆಗಳನ್ನು ಗುಣಮುಖಗೊಳಿಸುವಲ್ಲಿ ಇವರ ಪಾತ್ರ ಮಹತ್ವದ್ದು. ವೈದ್ಯಕೀಯ ಲೋಕದಲ್ಲಿ ಹಾವಿನ ವಿಷವಂತೂ ಬಹುಪಯೋಗಿ. ಇಂತಹದರಲ್ಲಿ ಜೀವವನ್ನೇ ಪಣಕ್ಕಿಡುವ ಹಾವಾಡಿಗರ ಸಾಹಸ ಮೆಚ್ಚಬೇಕಾದ್ದೇ. ಇಡೀ ಭಾರತದಲ್ಲಿ ಸಾವಿರಾರು ಹಾವುಗಳನ್ನು ಸಂರಕ್ಷಿಸಿದ ಮತ್ತು ಲಕ್ಷಾಂತರ ಜನರ ಬದುಕಿಗೆ ಪುನರ್ಜನ್ಮ ನೀಡಿದ ಖ್ಯಾತಿಯೂ ಇವರಿಗೆ ಸಲ್ಲುತ್ತದೆ.

ಅಮೇರಿಕವೂ ಬೇಡಿತ್ತು ಇರುಲರ ಸಹಾಯ..!
2017ರಲ್ಲಿ ಅಮೇರಿಕದ ಫ್ಲೋರಿಡಾದಲ್ಲಿರುವ ಸರ್ಕಾರ ಇರುಲಾ ಪಂಗಡದ ಮಾಸಿ ಮತ್ತು ವಡಿವೇಲ್‌ ಎಂಬವರನ್ನು ಅಮೇರಿಕಕ್ಕೆ ಕರೆಸಿಕೊಂಡು ಹೆಬ್ಬಾವುಗಳನ್ನು ಹಿಡಿಯುವುದಕ್ಕೆ ಬಳಸಿಕೊಂಡಿದ್ರು. ಬರ್ಮೀಸ್‌ ಹೆಬ್ಬಾವುಗಳು ಫ್ಲೋರಿಡಾದಲ್ಲಿ ತಮ್ಮ ಮೂಲವನ್ನು ಹೊಂದಿಲ್ಲವಾದ್ರೂ ಭಾರತದ ಈಶಾನ್ಯ ಭಾಗಗಳಲ್ಲಿ, ಚೀನಾ-ಇಂಡೋನೇಷ್ಯಾದ ಕೆಲವು ಭಾಗಗಳಲ್ಲಿ ಸುಮಾರು ಬರ್ಮೀಸ್‌ ಹೆಬ್ಬಾವುಗಳು ಕಾಣಿಸಿಕೊಂಡಿದೆ. ಈದೇ ಬರ್ಮೀಸ್‌ ಹೆಬ್ಬಾವುಗಳು ಫ್ಲೋರಿಡಾದಲ್ಲಿ ಕೋಲಾಹಲ ಸೃಷ್ಟಿಸಿದಾಗ ಫ್ಲೋರಿಡಾ ಸರ್ಕಾರ ಸುಮಾರು 70,000 ಯು.ಎಸ್‌ ಡಾಲರ್‌ಗಳನ್ನು ಖರ್ಚು ಮಾಡಿ ಮಸಿ ಹಾಗೂ ವಡಿವೇಲ್‌ರನ್ನು ಅಮೇರಿಕಾಕ್ಕೆ ಕರೆಸಿಕೊಂಡಿತು. ಅವರು ಫ್ಲೋರಿಡಾ ಸರ್ಕಾರಕ್ಕೆ ಸಹಾಯವನ್ನು ಮಾಡುವುದರೊಂದಿಗೆ ನಿಟ್ಟುಸಿರು ಬಿಡುವಂತೆ ಮಾಡಿದ್ದರು.

ಕೊನೆಗೂ ಸಂದ ಗೌರವ
ಅಷ್ಟೇನೂ ಫಲಾಪೇಕ್ಷೆಯಿಲ್ಲದೆಯೂ ಹಾವು ಹಿಡಿಯುವುದನ್ನೇ ತಮ್ಮ ಕಸುಬನ್ನಾಗಿಸಿಕೊಂಡಿರುವ ಈ ಇರುಲಾ ಜನ ಎಷ್ಟೋ ಜನರ ಪಾಲಿಗೆ ದೇವತಾ ಸಮಾನರು ಎಂದರೂ ಅದು ಅತಿಶಯೋಕ್ತಿಯಲ್ಲ. ಇದೀಗ ಮಾಸಿ ಮತ್ತು ವಡಿವೇಲ್‌ ಇವರ ಕಾರ್ಯಕ್ಕೆ ಪದ್ಮಶ್ರೀ ಪ್ರಶಸ್ತಿ ಒದಗಿಬಂದಿದ್ದು ಕೇವಲ ಅವರಿಬ್ಬರಿಗಷ್ಟೇ ಅಲ್ಲ ಇಡೀ ಇರುಲಾ ಪಂಗಡಕ್ಕೇ ಸಂದ ಗೌರವ

-ಪ್ರಣವ್‌ ಶಂಕರ್‌

ಟಾಪ್ ನ್ಯೂಸ್

sharad pawar

ಎನ್‌ಸಿಪಿ ಮಾನ್ಯತೆಗೆ ಕುತ್ತು ಸಾಧ್ಯತೆ

tdy-16

ಪರಿಶ್ರಮದ ಕಹಾನಿ: ಮರಳಿ ಯತ್ನವ ಮಾಡು ಛಲವ ಬಿಡದೆ..

1-wqweqeqwe

ಅಪೂರ್ಣ ಮೆಟ್ರೋ ಕಾಮಗಾರಿ; ಪ್ರಧಾನಿ ಉದ್ಘಾಟನೆಗೆ ಕಾಂಗ್ರೆಸ್‌ ಆಕ್ಷೇಪ

ಅನಧಿಕೃತ ನಿರ್ಮಾಣ ಕ್ರಮಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಹಿಂದೇಟು

ಅನಧಿಕೃತ ನಿರ್ಮಾಣ ಕ್ರಮಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಹಿಂದೇಟು

ಉಡುಗೊರೆಗಳ ವಿವರ ಬಹಿರಂಗಕ್ಕೆ ಟ್ರಂಪ್‌ ವಿಫ‌ಲ; ಅಮೆರಿಕ ಸಂಸತ್‌ ಸಮಿತಿ ವರದಿ ಆರೋಪ

ಉಡುಗೊರೆಗಳ ವಿವರ ಬಹಿರಂಗಕ್ಕೆ ಟ್ರಂಪ್‌ ವಿಫ‌ಲ; ಅಮೆರಿಕ ಸಂಸತ್‌ ಸಮಿತಿ ವರದಿ ಆರೋಪ

klasss

ದಕ್ಷಿಣ ಆಫ್ರಿಕಾಕ್ಕೆ 4 ವಿಕೆಟ್‌ ಗೆಲುವು

r ashok 1

ಯಾವ ಮುಖ ಇಟ್ಟುಕೊಂಡು ಚಿಂಚನಸೂರ್‌ ಕಾಂಗ್ರೆಸ್‌ಗೆ ಹೋಗ್ತಾರೆ? : ಆರ್‌.ಅಶೋಕ್‌



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯುಗಾದಿ ಹಬ್ಬದ ಸ್ಪೆಷಲ್ ಸಿಹಿ ಖಾದ್ಯಗಳು!

ಯುಗಾದಿ 2023- ಹಬ್ಬದ ಸ್ಪೆಷಲ್ ಸಿಹಿ ಖಾದ್ಯಗಳು!

web-suhan

ಪ್ರೀತಿಯ ಅಜ್ಜನ ಸಾವಿನ ನೋವು…22 ರ ಹರೆಯದಲ್ಲೇ ಸಮಾಜ ಸೇವೆಗಿಳಿದ ಯುವತಿ

ತುಂಬಾ ಸಿಂಪಲ್ ರೆಸಿಪಿ – ರುಚಿಯಾದ ಪನ್ನೀರ್‌ ಚೀಸ್‌ ಟೋಸ್ಟ್‌….

ತುಂಬಾ ಸಿಂಪಲ್ ರೆಸಿಪಿ – ರುಚಿಯಾದ ಪನ್ನೀರ್‌ ಚೀಸ್‌ ಟೋಸ್ಟ್‌….

anjum chopra

ಭಾರತದ ವನಿತಾ ಕ್ರಿಕೆಟ್‌ಗೆ ಸ್ಟಾರ್‌ ವ್ಯಾಲ್ಯೂ ಕೊಡಿಸಿದ್ದ ಅಂಜುಂ ಚೋಪ್ರಾ

Success Story:ಅಂದು ಸಾ ಮಿಲ್ ಕಾರ್ಮಿಕ, ರೈಲ್ವೆ ನಿಲ್ದಾಣದಲ್ಲಿ ಓದು..ಇಂದು ಐಎಎಸ್ ಅಧಿಕಾರಿ

Success Story:ಅಂದು ಸಾ ಮಿಲ್ ಕಾರ್ಮಿಕ, ರೈಲ್ವೆ ನಿಲ್ದಾಣದಲ್ಲಿ ಓದು..ಇಂದು ಐಎಎಸ್ ಅಧಿಕಾರಿ

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

sharad pawar

ಎನ್‌ಸಿಪಿ ಮಾನ್ಯತೆಗೆ ಕುತ್ತು ಸಾಧ್ಯತೆ

arrested

ವ್ಯಾಪಾರಿಯ 80 ಲಕ್ಷ ರೂ. ದರೋಡೆ: 8 ಮಂದಿ ಬಂಧನ

tdy-16

ಪರಿಶ್ರಮದ ಕಹಾನಿ: ಮರಳಿ ಯತ್ನವ ಮಾಡು ಛಲವ ಬಿಡದೆ..

rape

ಬೆಂಗಳೂರು: ದೂರು ನೀಡಲು ಬಂದ ಯುವತಿಗೆ ಲೈಂಗಿಕ ಕ್ರಿಯೆಗೆ ಇನ್‌ಸ್ಪೆಕ್ಟರ್‌ ಒತ್ತಾಯ !

1-wqweqeqwe

ಅಪೂರ್ಣ ಮೆಟ್ರೋ ಕಾಮಗಾರಿ; ಪ್ರಧಾನಿ ಉದ್ಘಾಟನೆಗೆ ಕಾಂಗ್ರೆಸ್‌ ಆಕ್ಷೇಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.