Beauty Tips: ಕಡಲೆ ಹಿಟ್ಟು ಉಪಯೋಗಿಸಿ.. ತ್ವಚೆಯ ಸೌಂದರ್ಯ ವೃದ್ದಿಸಿಕೊಳ್ಳಿ
Team Udayavani, Dec 29, 2023, 5:06 PM IST
ಕಡಲೆ ಹಿಟ್ಟು .. ಬಜ್ಜಿ ಮಾಡಲು ಪ್ರಮುಖವಾಗಿ ಉಪಯೋಗಿಸುವ ಹಿಟ್ಟುಗಳಲ್ಲಿ ಒಂದು. ಕಡಲೆ ಹಿಟ್ಟು ಎಂದಾಗ ಮೆಣಸಿನಕಾಯಿ ಬಜ್ಜಿ, ಈರುಳ್ಳಿ ಬಜ್ಜಿ ನೆನಪಾಗುವುದು ಸಾಮಾನ್ಯ. ಕಡಲೆಹಿಟ್ಟು ಅಡುಗೆಗೆ ಮಾತ್ರವಲ್ಲದೆ, ಸೌಂದರ್ಯ ವೃದ್ಧಿಸಲೂ ಕೂಡಾ ಉಪಯೋಗಿಸಲಾಗುತ್ತದೆ.
ಹಿಂದಿನ ಕಾಲದಿಂದಲೂ ಕಡಲೆಹಿಟ್ಟನ್ನು ಸೌಂದರ್ಯ ವರ್ಧಕವಾಗಿ ಬಳಸಲಾಗುತ್ತಿತ್ತು. ಸೋಪ್ ಕಂಡುಹಿಡಿಯುವ ಮೊದಲು ಕಡಲೆಹಿಟ್ಟನ್ನು ಸೋಪ್ ನಂತೆ ಉಪಯೋಗಿಸುತ್ತಿದ್ದರು. ಕಡಲೆ ಹಿಟ್ಟಿನಲ್ಲಿರುವ ಕೆಲವೊಂದು ಗುಣಗಳಿಂದಾಗಿ ಇಂದಿನ ದಿನಗಳಲ್ಲೂ ಕಡಲೆಹಿಟ್ಟಿನಿಂದ ತಯಾರಿಸಿದ ಸೋಪ್ ಗಳು ಮಾರುಕಟ್ಟೆಯಲ್ಲಿವೆ.
ಚರ್ಮದಲ್ಲಿ ಉಂಟಾಗುವ ಅಲರ್ಜಿ, ತುರಿಕೆ, ಉರಿಗಳಿಂದ ದೂರವಿಡಲು ಕಡಲೆ ಹಿಟ್ಟು ಉತ್ತಮ ಪರಿಹಾರ. ಕಡಲೆ ಹಿಟ್ಟನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮದ ಕಾಂತಿ ಹೆಚ್ಚಿಸುತ್ತದೆ. ಚರ್ಮ ಸುಕ್ಕುಗಟ್ಟದಂತೆ ತಡೆದು, ಯಾವುದೇ ರೀತಿಯ ಚರ್ಮದ ಕಾಯಿಲೆ ಬರದಂತೆ ತಡೆಯುತ್ತದೆ.
ಸೌಂದರ್ಯದ ದೃಷ್ಟಿಯಿಂದ ನೋಡಿದಾಗಲೂ ಕಡಲೆ ಹಿಟ್ಟು ಹಲವು ವಿಧದಲ್ಲಿ ತ್ವಚೆಗೆ ಉಪಯೋಗಕಾರಿಯಾಗಿದೆ. ಸತತವಾಗಿ ಕಡ್ಲೆ ಹಿಟ್ಟಿನಿಂದ ಮುಖ ತೊಳೆಯುವುದರಿಂದ ಚರ್ಮ ನಯವಾಗಿ ಕಾಣಿಸುತ್ತದೆ. ಕಡಲೆ ಹಿಟ್ಟಿನಿಂದ ಮುಖದ ಕಲೆ ದೂರವಾಗುತ್ತದೆ. ಬಿಸಿಲಿನಿಂದ ತ್ವಚೆ ಕಪ್ಪಗಾಗಿದ್ದರೆ ಅದನ್ನು ಹೋಗಲಾಡಿಸುತ್ತದೆ.
ಯಾವುದೇ ಅಡ್ಡಪರಿಣಾಮವಿಲ್ಲದೇ ಕಡಲೆ ಹಿಟ್ಟು ಉಪಯೋಗಿಸಿ ಸೌಂದರ್ಯ ವೃದ್ಧಿಸಿಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳೋಣ.
ಹೊಳಪಿನ ತ್ವಚೆಗೆ
ಮೊದಲು ಕಡಲೆಹಿಟ್ಟಿಗೆ ಸ್ವಲ್ಪ ಹಾಲು ಬೆರೆಸಿ, ಕೇಸರಿ ಹಾಕಿ ಐದು ನಿಮಿಷ ನೆನೆಯಲು ಬಿಡಿ. ಬಳಿಕ ಪೇಸ್ಟ್ ರೀತಿಯಾಗಿ ಮುಖಕ್ಕೆ ಹಚ್ಚಿಕೊಂಡು 30 ನಿಮಿಷಗಳ ಬಳಿಕ ಮುಖ ತೊಳೆಯಬೇಕು. ಹೀಗೆ ಮಾಡುವುದರಿಂದ ತ್ವಚೆ ಹೊಳಪು ಪಡೆದುಕೊಳ್ಳುವುದನ್ನು ಗಮನಿಸಬಹದು.
ಎರಡು ಚಮಚ ಕಡಲೆಹಿಟ್ಟಿಗೆ ಒಂದು ಚಮಚ ಮಿಲ್ಕ್ ಕ್ರೀಮ್ ಮತ್ತು ಒಂದು ಚಮಚ ಜೇನು ಸೇರಿಸಿ ಮಿಶ್ರಣ ತಯಾರಿಸಿ ಸ್ವಚ್ಛಗೊಳಿಸಿದ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಮುಖ ತೊಳೆಯಿರಿ.
ಮುಖದಲ್ಲಿನ ಕಲೆ ಹೋಗಲಾಡಿಸಲು:
ಮುಖಕ್ಕೆ ಸೋಪ್ ಅಥವಾ ವಿವಿಧ ಫೇಸ್ ವಾಶ್ ಬಳಸುವ ಬದಲು ದಿನನಿತ್ಯ ಕಡ್ಲೆ ಹಿಟ್ಟು ಹಚ್ಚಿ 15 ನಿಮಿಷ ಬಿಟ್ಟು ಮುಖ ತೊಳೆದರೆ ಕಲೆಗಳು ಕಡಿಮೆಯಾಗುತ್ತಾ ಬರುತ್ತದೆ.
ಟೊಮೆಟೊ ರಸ ತೆಗೆದುಕೊಂಡು ಅದಕ್ಕೆ 2-3 ಚಮಚ ಕಡಲೆಹಿಟ್ಟನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಈ ಮಿಶ್ರಣವನ್ನು ಸ್ವಚ್ಛಗೊಳಿಸಿದ ಮುಖ ಹಾಗೂ ಕುತ್ತಿಗೆಗೆ ಹಚ್ಚಿ 15-20 ನಿಮಿಷ ಬಿಟ್ಟು ತೊಳೆಯಿರಿ.
ಎಣ್ಣೆ ತ್ವಚೆ ಹೋಗಲಾಡಿಸಲು:
ಮೊಸರು ಮತ್ತು ಕಡ್ಲೆ ಹಿಟ್ಟಿನ ಫೇಸ್ ಪ್ಯಾಕ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ತೊಳೆದರೆ, ಮುಖದ ಎಣ್ಣೆ ಅಂಶ ಕಡಿಮೆಯಾಗುತ್ತದೆ.
ಮೊಡವೆ ಸಮಸ್ಯೆ ನಿವಾರಣೆಗೆ:
ಮೊಡವೆ ಸಮಸ್ಯೆ ನಿವಾರಿಸಲು ಕಡ್ಲೆಹಿಟ್ಟಿನ ಜೊತೆ ಸ್ವಲ್ಪ ಹಾಲು, ಅರಿಶಿನ ಬೆರೆಸಿ ಮುಖಕ್ಕೆ ಹಚ್ಚಿ. 15-30 ನಿಮಿಷಗಳ ಬಳಿಕ ಮುಖ ತೊಳೆದು ಸ್ವಚ್ಛಗೊಳಿಸಿ. ವ್ಯತ್ಯಾಸ ಗಮನಿಸಿ.
ಒಂದು ಚಮಚ ಕಡಲೆಹಿಟ್ಟಿಗೆ ಗಂಧದ ಹುಡಿ ಮತ್ತು ಹಾಲನ್ನು ಬೆರೆಸಿ ಇದಕ್ಕೆ ನೀರು ಸೇರಿಸಿ ಪೇಸ್ಟ್ ಮಾಡಿಕೊಳ್ಳಬೇಕು. ಇದನ್ನು ನಿಯಮಿತವಾಗಿ ಮುಖಕ್ಕೆ ಹಚ್ಚಿಕೊಳ್ಳಬೇಕು. (ಸ್ವಲ್ಪ ಅರಿಶಿನವನ್ನು ಇದಕ್ಕೆ ಸೇರಿಸಿಕೊಳ್ಳಬಹುದು.)
ಟೊಮೇಟೊ ಹಣ್ಣಿನ ರಸವನ್ನು ಕಡಲೆಹಿಟ್ಟಿನೊಂದಿಗೆ ಬೆರೆಸಿಕೊಂಡು ಇದಕ್ಕೆ ಎರಡು ಚಮಚ ಅಲೊವೇರಾ ಜೆಲ್ ಸೇರಿಸಿಕೊಳ್ಳಬೇಕು. ನಂತರ ಮುಖಕ್ಕೆ ಹಚ್ಚಿ 20 ನಿಮಿಷ ಹಾಗೆಯೇ ಬಿಟ್ಟು ಮುಖ ತೊಳೆಯಬೇಕು.
ತ್ವಚೆಯ ಕಪ್ಪು ಕಲೆ ನಿವಾರಣೆಗೆ:
ಕೈ, ಕುತ್ತಿಗೆ ಕಪ್ಪಾಗಿದ್ದರೆ ಕಡ್ಲೆ ಹಿಟ್ಟಿಗೆ ಮೊಸರು ಮತ್ತು ನಿಂಬೆ ರಸ (ಬೇಕಾದಲ್ಲಿ ಈ ಮಿಶ್ರಣಕ್ಕೆ ಅರಶಿನ ಸ್ವಲ್ಪ ಸೇರಿಸಬಹುದು) ಬೆರೆಸಿ ಹಚ್ಚಬೇಕು. ಕಪ್ಪು ಕಲೆ ನಿವಾರಣೆಯಾಗುವುದರೊಂದಿಗೆ ಮುಖದ ಡೆಡ್ ಸ್ಕಿನ್ ದೂರ ಮಾಡಲು ಸಹಾಯ ಮಾಡುತ್ತದೆ.
ಒಣ ಚರ್ಮ ನಿವಾರಣೆ:
ಕಡಲೆಹಿಟ್ಟು ಮತ್ತು ಹಸಿ ಹಾಲನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ 15-20 ನಿಮಿಷ ಹಾಗೇ ಬಿಟ್ಟು ತೊಳೆಯಿರಿ. ಇದರಿಂದ ಒಣ ಚರ್ಮ ನಿವಾರಣೆ ಮಾಡುವುದು ಮಾತ್ರವಲ್ಲದೆ, ಚರ್ಮಕ್ಕೆ ಪೋಷಣೆ ನೀಡುತ್ತದೆ.
ಚರ್ಮದ ಕಾಂತಿ ಹೆಚ್ಚಿಸಲು:
ಕಡಲೆಹಿಟ್ಟು ಚರ್ಮಕ್ಕೆ ಪೋಷಣೆ ನೀಡುತ್ತದೆ ಹಾಗೂ ಲಿಂಬೆಯಲ್ಲಿ ಇರುವಂತಹ ವಿಟಮಿನ್ ಸಿ ಚರ್ಮದಲ್ಲಿರುವ ಸತ್ತ ಕೋಶಗಳನ್ನು ತೆಗೆಯುತ್ತದೆ ಮತ್ತು ಚರ್ಮದ ಬಣ್ಣ ಬಿಳಿಯಾಗಿಸುವುದರಲ್ಲಿ ಸಹಕರಿಸುತ್ತದೆ. ಒಂದು ಚಮಚ ಕಡಲೆಹಿಟ್ಟಿಗೆ ಕೆಲವು ಹನಿ ಲಿಂಬೆರಸ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ, ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 20 ನಿಮಿಷ ಬಿಟ್ಟು ತೊಳೆಯಬೇಕು.
ಕಡಲೆಹಿಟ್ಟು ಮತ್ತು ಕಿತ್ತಳೆ ಸಿಪ್ಪೆಯ ಹುಡಿ ತಯಾರಿಸುವ ವಿಧಾನ ಈ ಮಾಸ್ಕ್ ಸತ್ತ ಚರ್ಮವನ್ನು ಕಿತ್ತುಹಾಕಿ ಕಾಂತಿಯನ್ನು ನೀಡುವುದು. ಕಿತ್ತಳೆ ಚರ್ಮಕ್ಕೆ ಕಾಂತಿ ನೀಡುವ ಗುಣ ಹೊಂದಿದ್ದು, ಕಡಲೆಹಿಟ್ಟು ಮತ್ತು ಕಿತ್ತಳೆ ಸಿಪ್ಪೆ ಹುಡಿಯಿಂದ ತಯಾರಿಸಿದ ಫೇಸ್ ಮಾಸ್ಕ್ ಉಪಯುಕ್ತ. ಒಂದು ಚಮಚ ಕಿತ್ತಳೆ ಸಿಪ್ಪೆ ಹುಡಿಯನ್ನು ಒಂದು ಚಮಚ ಕಡಲೆಹಿಟ್ಟಿಗೆ ಬೆರೆಸಿಕೊಂಡು ಈ ಮಿಶ್ರಣಕ್ಕೆ 1-4 ಹನಿ ಹಾಲು ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಬೇಕು. ಈ ಮಿಶ್ರಣವನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿ ಮಸಾಜ್ ಮಾಡಬೇಕು. 15 ನಿಮಿಷ ಹಾಗೆ ಬಿಟ್ಟು ತೊಳೆಯಬೇಕು.
ಕಡಲೆಹಿಟ್ಟಿನೊಂದಿಗೆ ಪಪ್ಪಾಯವನ್ನು ಮಿಕ್ಸಿಯಲ್ಲಿ ಅರೆದುಕೊಂಡು ಇದಕ್ಕೆ 1 ಚಮಚ ಕಿತ್ತಳೆ ರಸ ಮತ್ತು ಒಂದು ಚಮಚ ಕಡಲೆಹಿಟ್ಟನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಪೇಸ್ಟ್ ತಯಾರಿಸಿ ಮುಖ ಮತ್ತು ಕತ್ತಿಗೆ ಹಚ್ಚಿ ಮಸಾಜ್ ಮಾಡಿಕೊಂಡು 20 ನಿಮಿಷ ಬಿಟ್ಟ ನಂತರ ಮುಖ ತೊಳೆಯಬೇಕು.
ವಾರಕ್ಕೆರಡು ಸಲ ಮುಖಕ್ಕೆ ಹಚ್ಚಿಕೊಂಡರೆ ಒಳ್ಳೆಯ ಫಲಿತಾಂಶ ಪಡೆದುಕೊಳ್ಳಬಹುದು. ಮುಖದೊಂದಿಗೆ ಕುತ್ತಿಗೆಗೂ ಹಚ್ಚಿದರೆ ಉತ್ತಮ.
*ಕಾವ್ಯಶ್ರೀ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Inheritance Tax: ಸ್ಯಾಮ್ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!
MUST WATCH
ಹೊಸ ಸೇರ್ಪಡೆ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ