![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
IPL 2024: ಮೊದಲ ಪಂದ್ಯದಲ್ಲೇ ಸದ್ದು ಮಾಡಿದ 18ರ ಹುಡುಗ; ಯಾರು ಈ ಆಂಗ್ಕ್ರಿಶ್ ರಘುವಂಶಿ?
ಕೀರ್ತನ್ ಶೆಟ್ಟಿ ಬೋಳ, Apr 4, 2024, 12:53 PM IST
![Who is Angkrish Raghuvanshi?](https://www.udayavani.com/wp-content/uploads/2024/04/raguvamsh-620x342.jpg)
ಐಪಿಎಲ್ 2024ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ 18 ವರ್ಷದ ಹುಡುಗನೊಬ್ಬ ಗಮನ ಸೆಳೆಯುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ವಿಶಾಖಪಟ್ಟಣದಲ್ಲಿ ನಡೆದ ಪಂದ್ಯದಲ್ಲಿ ಚೆಂಡನ್ನು ಮೈದಾನದ ಮೂಲೆ ಮೂಲೆಗೆ ಅಟ್ಟಿದ ಹುಡುಗ ಹೊಸ ಬ್ಯಾಟಿಂಗ್ ಸೆನ್ಸೇಶನ್ ಆಗಿ ಮೂಡಿಬಂದಿದ್ದಾರೆ. ಅವರೇ ಆಂಗ್ಕ್ರಿಶ್ ರಘುವಂಶಿ.
ಡಿಸಿ ವಿರುದ್ಧದ ಪಂದ್ಯದಲ್ಲಿ ರಘುವಂಶಿ ಅದ್ಭುತ ಅರ್ಧಶತಕದ ಮೂಲಕ ಕಿಚ್ಚು ಹಚ್ಚಿದ್ದಾರೆ. ತನ್ನ ಮೊದಲ ಬ್ಯಾಟಿಂಗ್ ಅವಕಾಶದಲ್ಲೇ ತನ್ನ ಬಲವೇನು ಎನ್ನುವುದನ್ನು ಕ್ರಿಕೆಟ್ ವಿಶ್ವಕ್ಕೆ ಗಟ್ಟಿ ದನಿಯಲ್ಲಿ ಹೇಳಿದ್ದಾರೆ ರಘುವಂಶಿ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಘುವಂಶಿ ಐಪಿಎಲ್ ಪದಾರ್ಪಣೆ ಮಾಡಿದ್ದರೂ, ಆ ಪಂದ್ಯದಲ್ಲಿ ಅವರಿಗೆ ಬ್ಯಾಟಿಂಗ್ ಅವಕಾಶ ಸಿಕ್ಕಿರಲಿಲ್ಲ. ಆದರೆ ವಿಶಾಖಪಟ್ಟಣದಲ್ಲಿ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಅಪ್ಪಿಕೊಂಡ ಬಲಗೈ ಬ್ಯಾಟರ್ ಯುವ ತಾರೆಯಾಗಿ ಮೂಡಿ ಬಂದಿದ್ದಾರೆ.
ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಆಂಗ್ಕ್ರಿಶ್ ರಘುವಂಶಿ ಕೇವಲ 27 ಎಸೆತಗಳಲ್ಲಿ 54 ರನ್ ಬಾರಿಸಿದರು. ಇದರಲ್ಲಿ ಅವರು ಐದು ಬೌಂಡರಿ ಮತ್ತು ಮೂರು ಸಿಕ್ಸರ್ ಸಿಡಿಸಿದ್ದರು. ಇದೇ ವೇಳೆ ಸುನಿಲ್ ನರೈನ್ ಜತೆ ಅವರು 104 ರನ್ ಜತೆಯಾಟವನ್ನೂ ಆಡಿದರು. ಇದೇ ವೇಳೆ ಹಲವು ದಾಖಲೆ ಪುಸ್ತಕಗಳಲ್ಲಿ ತನ್ನ ಹೆಸರು ನಮೂದಿಸಿದರು.
ಕೆಕೆಆರ್ಗೆ ಚೊಚ್ಚಲ ಇನ್ನಿಂಗ್ಸ್ನಲ್ಲಿ ಗರಿಷ್ಠ ಸ್ಕೋರ್
158* – ಬ್ರೆಂಡನ್ ಮೆಕಲಮ್ Vs ಆರ್ ಸಿಬಿ, ಬೆಂಗಳೂರು, 2008
64 – ಮನೀಶ್ ಪಾಂಡೆ vs ಮುಂಬೈ, ಅಬುಧಾಬಿ, 2014
58*- ಓವೈಸ್ ಶಾ Vs ಡೆಕ್ಕನ್, ಮುಂಬೈ 2010
54 – ಜೆ ಕಾಲಿಸ್ Vs ಸಿಎಸ್ಕೆ, ಚೆನ್ನೈ, 2011
54 – ಫಿಲ್ ಸಾಲ್ಟ್ Vs ಎಸ್ಆರ್ ಎಚ್ ಕೋಲ್ಕತ್ತಾ, 2024
54 – ಎ ರಘುವಂಶಿ Vs ಡಿಸಿ, ವೈಜಾಗ್, 2024
ಅವರು ಐಪಿಎಲ್ ನಲ್ಲಿ ಅರ್ಧಶತಕ ಗಳಿಸಿದ ಎರಡನೇ ಕಿರಿಯ ಕೆಕೆಆರ್ ಬ್ಯಾಟರ್ ಆಗಿದ್ದಾರೆ, ಶುಭಮನ್ ಗಿಲ್ ಮೊದಲ ಸ್ಥಾನದಲ್ಲಿದ್ದಾರೆ. 18 ವರ್ಷ 237 ದಿನ ವಯಸ್ಸಿನ ಗುಲ್ ಮೊದಲ ಅರ್ಧಶತಕ ಹೊಡೆದಿದ್ದರೆ, 18 ವರ್ಷ 303 ದಿನದ ರಘುವಂಶಿ ಅರ್ಧಶತಕ ಬಾರಿಸಿದ್ದಾರೆ.
ಯಾರು ಈ ರಘುವಂಶಿ
ಆಂಗ್ಕ್ರಿಶ್ ರಘುವಂಶಿ ಅವರು ಜನಿಸಿದ್ದು 2005ರ ಜೂನ್ 5ರಂದು ದಿಲ್ಲಿಯಲ್ಲಿ. ಆದರೆ 11ನೇ ಪ್ರಾಯದಲ್ಲಿ ರಘುವಂಶಿ ಕುಟುಂಬ ಮುಂಬೈಗೆ ಬರುತ್ತದೆ. ಅಲ್ಲಿ ಕ್ರಿಕೆಟ್ ಅಕಾಡೆಮಿಗೆ ಸೇರಿದ ಆಂಗ್ಕ್ರಿಶ್ ರಘುವಂಶಿ ದಿನಾ ಅಭ್ಯಾಸ ಆರಂಭಿಸಿದರು. ಅಭಿಷೇಕ್ ನಾಯರ್ ಮತ್ತು ಓಂಕಾರ್ ಸಾಳ್ವಿ ಅಕಾಡೆಮಿಯಲ್ಲಿ ಅವರು ಕ್ರಿಕೆಟ್ ತರಬೇತಿ ಪಡೆದಿದ್ದಾರೆ.
ಅವರು ದೇಶೀಯ ಕ್ರಿಕೆಟ್ ನಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುತ್ತಾರೆ. ಬ್ಯಾಟಿಂಗ್ ಹೊರತಾಗಿ ಅವರ ಆಲ್ರೌಂಡ್ ಸಾಮರ್ಥ್ಯಕ್ಕಾಗಿ ಅವರು ಹೆಸರುವಾಸಿಯಾಗಿದ್ದಾರೆ. ಅವರು ಎಡಗೈ ಸಾಂಪ್ರದಾಯಿಕ ಬೌಲರ್ ಕೂಡ ಆಗಿದ್ದಾರೆ.
𝗪𝗵𝗼 𝗶𝘀 𝗔𝗻𝗴𝗸𝗿𝗶𝘀𝗵 𝗥𝗮𝗴𝗵𝘂𝘃𝗮𝗻𝘀𝗵𝗶?
What’s his ultimate dream?
How much his family means to him?He shares all this and more post an impressive maiden #TATAIPL 50 👍 👍 – By @ameyatilak
P.S- A special SRK story right there
— IndianPremierLeague (@IPL) April 4, 2024
ಪ್ರತಿಭಾವಂತ ಯುವ ಆಟಗಾರ 2022 ರ U-19 ವಿಶ್ವಕಪ್ನಲ್ಲಿ ಗಮನ ಸೆಳೆದರು, ಅಲ್ಲಿ ಅವರು 278 ರನ್ ಗಳಿಸಿದರು. ಯಶ್ ಧುಲ್ ಅವರ ನಾಯಕತ್ವದಲ್ಲಿ ಭಾರತದ ಪ್ರಶಸ್ತಿ ವಿಜೇತ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು 2023 ರಲ್ಲಿ ತಮ್ಮ ಲಿಸ್ಟ್ ಎ ಮತ್ತು ಟಿ20 ಗೆ ಪದಾರ್ಪಣೆ ಮಾಡಿದ ಅವರು ಸಿ.ಕೆ ನಾಯುಡು ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದರು, ಅಲ್ಲಿ ಅವರು ಒಂಬತ್ತು ಪಂದ್ಯಗಳಲ್ಲಿ 765 ರನ್ ಗಳನ್ನು ಸಿಡಿಸಿದರು. ಐಪಿಎಲ್ ಹರಾಜಿನಲ್ಲಿ 20 ಲಕ್ಷ ರೂ. ಮೂಲಬೆಲೆಗೆ ರಘುವಂಶಿ ಕೆಕೆಆರ್ ತಂಡ ಸೇರಿದರು.
ದೇಶದ ಅನೇಕ ಯುವ ಪ್ರತಿಭೆಗಳಂತೆ, ರಘುವಂಶಿ ಕೂಡಾ ಭಾರತೀಯ ಜೆರ್ಸಿಯನ್ನು ಧರಿಸುವ ಕನಸು ಕಾಣುತ್ತಿದ್ದಾರೆ. ” ಅಂತಿಮ ಗುರಿ ನಿಸ್ಸಂಶಯವಾಗಿ ಭಾರತೀಯ ಜರ್ಸಿಯನ್ನು ಧರಿಸುವುದು. ಆದರೆ ಯಾರೂ ಹಿಂದೆಂದೂ ಮಾಡದ ರೀತಿಯಲ್ಲಿ ಅದನ್ನು ಧರಿಸಬೇಕು. ನನ್ನನ್ನು ಗಮನಿಸುವ ಎಲ್ಲರೂ ನಾನು ವಿಭಿನ್ನವಾಗಿದ್ದೇನೆ ಎಂದು ಹೇಳುತ್ತಾರೆ” ಎಂದರು ರಘುವಂಶಿ.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Kargil War’s@25: ಹಿಮ ಪರ್ವತಗಳಲ್ಲಿ ಪಾಕ್ ಅನ್ನು ತಣ್ಣಗಾಗಿಸಿದ ಬೋಫೋರ್ಸ್ ಹವಿಟ್ಜರ್ ನೆನಪು](https://www.udayavani.com/wp-content/uploads/2024/07/Kargil-150x84.jpg)
Kargil War’s@25: ಹಿಮ ಪರ್ವತಗಳಲ್ಲಿ ಪಾಕ್ ಅನ್ನು ತಣ್ಣಗಾಗಿಸಿದ ಬೋಫೋರ್ಸ್ ಹವಿಟ್ಜರ್ ನೆನಪು
![ಕುಸಿದು ಬಿತ್ತಾ ಗುಜರಾತ್ ಟೈಟಾನ್ಸ್ ಸಾಮ್ರಾಜ್ಯ; ಅದಾನಿ ಪಾಲಾಗುತ್ತಾ ಐಪಿಎಲ್ ತಂಡ?](https://www.udayavani.com/wp-content/uploads/2024/07/GT-main-150x83.jpg)
IPL 2025;ಕುಸಿದು ಬಿತ್ತಾ ಗುಜರಾತ್ ಟೈಟಾನ್ಸ್ ಸಾಮ್ರಾಜ್ಯ; ಅದಾನಿ ಪಾಲಾಗುತ್ತಾ ಐಪಿಎಲ್ ತಂಡ?
![Rani Ki Vav: ನೂರಾರು ವರ್ಷ ಭೂಗತವಾಗಿದ್ದ “ರಾಣಿ ಕೀ ವಾವ್” ಮೆಟ್ಟಿಲು ಬಾವಿಯ ಸ್ವರ್ಗ!](https://www.udayavani.com/wp-content/uploads/2024/07/Beauty01-150x72.jpg)
Rani Ki Vav: ನೂರಾರು ವರ್ಷ ಭೂಗತವಾಗಿದ್ದ “ರಾಣಿ ಕೀ ವಾವ್” ಮೆಟ್ಟಿಲು ಬಾವಿಯ ಸ್ವರ್ಗ!
![6–bamboo-shoot](https://www.udayavani.com/wp-content/uploads/2024/07/6-bamboo-shoot-150x90.jpg)
Bamboo shoot: ಬಿದಿರಿನ ಚಿಗುರಿನ ಆರೋಗ್ಯ ಮಹತ್ವ-ಮಲೆನಾಡಿನ ನೆಚ್ಚಿನ ಖಾದ್ಯ!
![ಪ್ರವಾಸಿ ತಾಣವಾದ ಸ್ಮಶಾನ… ಇಲ್ಲಿ Pre-Wedding, Birthday ಪಾರ್ಟಿ ಕೂಡ ಇಲ್ಲಿ ನಡೆಯುತ್ತೆ](https://www.udayavani.com/wp-content/uploads/2024/07/gujarath-150x84.jpg)
ಪ್ರವಾಸಿ ತಾಣವಾದ ಸ್ಮಶಾನ… ಇಲ್ಲಿ Pre-Wedding Shoot, Birthday ಪಾರ್ಟಿ ಕೂಡ ನಡೆಯುತ್ತೆ
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.