Dravid; ಭಾರತ ತಂಡದ ಕೋಚ್ ಭವಿಷ್ಯದ ಬಗ್ಗೆ ಇನ್ನೂ ಯಾವುದೇ ಚರ್ಚೆ ನಡೆದಿಲ್ಲ
Team Udayavani, Nov 16, 2023, 4:35 PM IST
ಮುಂಬಯಿ : ಭಾರತ ಪುರುಷರ ಕ್ರಿಕೆಟ್ ತಂಡ ವಿಶ್ವಕಪ್ ನಲ್ಲಿ ಸೋಲಿಲ್ಲದ ಸರದಾರನಾಗಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಇದೆ ವೇಳೆ ತಂಡದ ಕೋಚ್ ರಾಹುಲ್ ದ್ರಾವಿಡ್ ಮತ್ತು ಅವರ ನೇತೃತ್ವದ ಸಹಾಯಕ ಸಿಬಂದಿಗಳ ಭವಿಷ್ಯದ ಬಗ್ಗೆ ಬಿಸಿಸಿಐ ಇನ್ನೂ ಚರ್ಚೆಗಳನ್ನು ಪ್ರಾರಂಭಿಸಿಲ್ಲ.
ರಾಹುಲ್ ದ್ರಾವಿಡ್ ಮತ್ತು ಅವರ ಸಹಾಯಕ ಸಿಬಂದಿ ವಿಶ್ವಕಪ್ನವರೆಗೆ ಒಪ್ಪಂದಗಳನ್ನು ಹೊಂದಿದ್ದು, ಕೋಚಿಂಗ್ ತಂಡದ ಮುಂದಿನ ಹಾದಿಯಲ್ಲಿ ಬಿಸಿಸಿಐನಲ್ಲಿ ವಿಭಿನ್ನ ದೃಷ್ಟಿಕೋನಗಳಿವೆ ಎನ್ನಲಾಗಿದೆ. ಮೊದಲು ದ್ರಾವಿಡ್ ಅವರ ಕೋಚಿಂಗ್ ಶೈಲಿಯ ಬಗ್ಗೆ ಬಿಸಿಸಿಐ ಮೇಲಧಿಕಾರಿಗಳಲ್ಲಿ ವಿಭಿನ್ನವಿಚಾರ ಇತ್ತು, ಆದರೆ ತಂಡದ ಇತ್ತೀಚಿನ ಪ್ರದರ್ಶನಗಳು ಆ ಗ್ರಹಿಕೆಗಳನ್ನು ಬದಲಾಯಿಸಿರಬಹುದು ಎನ್ನಲಾಗಿದೆ. ಆದಾಗ್ಯೂ, ದ್ರಾವಿಡ್ ಸ್ವತಃ ಮುಂದುವರಿಯಲು ಆಸಕ್ತಿ ಹೊಂದಿದ್ದಾರೆಯೇ ಎಂಬುದು ಪ್ರಮುಖ ಪ್ರಶ್ನೆಯಾಗಿದೆ.
2021 ರಲ್ಲಿ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡಾಗ, ಅವರು ಇಷ್ಟವಿಲ್ಲದೇ ತರಬೇತುದಾರರಾಗಿದ್ದರು ಎಂಬುದು ಆರಂಭಿಕ ಅನಿಸಿಕೆಯಾಗಿತ್ತು. ತಂಡದ ಪ್ರದರ್ಶನವನ್ನು ಲೆಕ್ಕಿಸದೆ ವಿಶ್ವಕಪ್ ನಂತರ ಅವರು ಸ್ವಯಂಪ್ರೇರಣೆಯಿಂದ ಕೆಳಗಿಳಿಯಬಹುದು ಎಂದು ಅವರ ನಿಕಟವರ್ತಿಯಾಗಿದ್ದ ಕೆಲವರು ಸಲಹೆ ನೀಡಿದ್ದರು.
ದ್ರಾವಿಡ್ ಮುಂದುವರಿಯಲು ನಿರ್ಧರಿಸಲಿ ಅಥವಾ ಇಲ್ಲದಿರಲಿ, ಅವರ ಸಹಾಯಕ ಸಿಬಂದಿ ಸದಸ್ಯರಾಗಿರುವ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಮತ್ತು ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಅವರಿಗೆ ಬಿಸಿಸಿಐ ವಿಸ್ತರಣೆಯನ್ನು ನೀಡುವ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗಿದೆ. ವಿವರಗಳು ವಿಶ್ವಕಪ್ ಫೈನಲ್ ಪಂದ್ಯ ಮುಗಿದ ಕೂಡಲೇ ಹೊರಬರುವ ನಿರೀಕ್ಷೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!