Udupi; ಚೆಕ್ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ
Team Udayavani, Apr 16, 2024, 11:52 PM IST
ಉಡುಪಿ: ಚೆಕ್ ಅಮಾನ್ಯ ಪ್ರಕರಣದಲ್ಲಿ ಆರೋಪಿಗೆ ಜೈಲು ಶಿಕ್ಷೆಯೊಂದಿಗೆ ದಂಡ ವಿಧಿಸಿ ಉಡುಪಿ ನಾಲ್ಕನೇ ದರ್ಜೆ ಹೆಚ್ಚುವರಿ, ಸಿವಿಲ್ ಜಡ್ಜ್ ಹಾಗೂ ಜೆಎಂಎಫ್ಸಿ ನ್ಯಾಯಧೀಶರಾದ ಜೀತು ಆರ್.ಎಸ್. ಅವರು ಆದೇಶಿಸಿದ್ದಾರೆ.
ಕೋ-ಅಪರೇಟಿವ್ ಸೊಸೈಟಿ ಒಂದಕ್ಕೆ ಮೂಡುಬೆಟ್ಟು, ಆದಿಉಡುಪಿ ನಿವಾಸಿಯಾದ ಸತೀಶ್ ಹೆಗ್ಡೆ ಅವರು ಚೆಕ್ ನೀಡಿದ್ದು, ಅದು ಬ್ಯಾಂಕ್ನಲ್ಲಿ ಅಮಾನ್ಯಗೊಂಡಿತ್ತು.
ಅದರಂತೆ ಆರೋಪಿಗೆ ನ್ಯಾಯಾಲಯವು 72,000 ರೂ. ದಂಡ ವಿಧಿಸಿದೆ. ತಪ್ಪಿದ್ದಲ್ಲಿ ಮೂರು ತಿಂಗಳು ಸಾದಾ ಶಿಕ್ಷೆ ನೀಡಲಾಗಿದೆ. ಕೊರಂಗ್ರಪಾಡಿ ಸಿ.ಎ. ಬ್ಯಾಂಕ್ ಪರವಾಗಿ ನ್ಯಾಯವಾದಿ ಬಿ. ಗಿರೀಶ್ ಐತಾಳ್ ಅವರು ವಾದಿಸಿದರು.
ದ್ವಿಚಕ್ರ ವಾಹನ ಕಳವು
ಉಡುಪಿ: ಹಳೆ ತಾಲೂಕು ಕಚೇರಿ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವಾದ ಘಟನೆ ನಡೆದಿದೆ.
ಸ್ಯಾಮುವೆಲ್ ವಿಲ್ಸನ್ ಅಮ್ಮನ್ನ ಅವರು ಎ.3ರಂದು ಹಳೆ ತಾಲೂಕು ಕಚೇರಿ ಬಳಿ ದ್ವಿಚಕ್ರ ವಾಹನ ನಿಲ್ಲಿಸಿ ಮಂಗಳೂರಿಗೆ ಹೋಗಿ ಎ.5ರಂದು ಬಂದು ನೋಡಿದಾಗ ವಾಹನ ಕಳವಾಗಿತ್ತು. ಕಳವಾದ ದ್ವಿಚಕ್ರ ವಾಹನದ ಮೌಲ್ಯ 10 ಸಾವಿರ ರೂ. ಆಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.