ಬಾಪುವನ್ನು ರಕ್ಷಿಸಿದ್ದ ವ್ಯಕ್ತಿ ನಿಧನ
Team Udayavani, Jul 21, 2017, 5:15 AM IST
ಹೊಸದಿಲ್ಲಿ: ಇವರ ಹೆಸರು ಭಿಕು ದಾಜಿ ಭಿಲಾರೆ. ವಯಸ್ಸು 98 ವರ್ಷ. ಇವರು ಬುಧವಾರ ಮಹಾರಾಷ್ಟ್ರ ದಲ್ಲಿ ನಿಧನ ಹೊಂದಿದರು. ಭಿಕು ಅವರ ಸಾವು ಮುಖ್ಯವೆನಿಸಲು ಕಾರಣ- ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಾಗೂ ಭಿಕು ಅವರಿಗಿರುವ ನಂಟು. ಒಂದು ವೇಳೆ ಅಂದು ಭಿಕು ದಾಜಿ ಅವರು ಇಲ್ಲದೇ ಹೋಗಿದ್ದರೆ, ಬಾಪು ನಾಲ್ಕು ವರ್ಷ ಮೊದಲೇ ನಮ್ಮಿಂದ ದೂರಾಗಿರುತ್ತಿದ್ದರು!
1948ರ ಜನವರಿ 30ರಂದು ನಾಥೂರಾಮ್ ಗೋಡ್ಸೆ ಗಾಂಧೀಜಿಯ ವರನ್ನು ಗುಂಡಿಕ್ಕಿ ಕೊಂದ ಎಂಬುದಷ್ಟೇ ನಮಗೆ ಗೊತ್ತು. ಆದರೆ ಈ ಘಟನೆಗೂ ವರ್ಷಗಳ ಹಿಂದೆ ಇದೇ ಗೋಡ್ಸೆ, ಬಾಪುವನ್ನು ಕೊಲ್ಲಲು ಯತ್ನಿಸಿದ್ದ ಎಂಬುದು, ಈ ವೇಳೆ ಭಿಕು ಅವರು ಗೋಡ್ಸೆಯನ್ನು ತಡೆದು ಗಾಂಧೀಜಿಯ ಜೀವ ಉಳಿಸಿದ್ದರು ಎಂಬುದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ.
“ಕ್ವಿಟ್ ಇಂಡಿಯಾ ಚಳವಳಿ ವೇಳೆ ಬ್ರಿಟಿಷರಿಂದ ಬಂಧನಕ್ಕೊಳಗಾಗಿದ್ದ ಮಹಾತ್ಮಾ ಗಾಂಧಿ, ಪುಣೆಯಲ್ಲಿನ ಅಗಾ ಖಾನ್ ಅರಮನೆಯ ಜೈಲಿನಿಂದ ಬಿಡುಗಡೆಯಾದ ಅನಂತರ 1944ರ ಜುಲೈ ತಿಂಗಳಲ್ಲಿ ಪಂಚಗಾನಿಗೆ ಭೇಟಿ ನೀಡಿ, ಅಲ್ಲೇ ತಂಗಿದ್ದರು. ಅಂದು ಸಂಜೆ ಶಾಲೆಯೊಂದರಲ್ಲಿ ಗಾಂಧೀಜಿ ನೇತೃತ್ವದಲ್ಲಿ ಸಭೆ ನಡೆಯಲಿತ್ತು. ಈ ವೇಳೆ ಚೂರಿ ಹಿಡಿದುಕೊಂಡು ತನ್ನ ಸಹಚರರೊಂದಿಗೆ ಗಾಂಧೀಜಿಯತ್ತ ನುಗ್ಗುತ್ತಿದ್ದ ಗೋಡ್ಸೆ ಯನ್ನು 25 ವರ್ಷದ ಯುವಕ ಭಿಕು ತಡೆದಿದ್ದರು. ಜತೆಗೆ ಬಾಪುವನ್ನು ಕೊಲ್ಲುವ ಗೋಡ್ಸೆ ಮತ್ತವನ ಸಹಚರರ ಸಂಚನ್ನು ವಿಫಲಗೊಳಿಸಿದ್ದರು. ಹೀಗೆ ಬಾಪುವನ್ನು ರಕ್ಷಿಸಿದ್ದ ಭಿಕು ಬುಧವಾರ ನಿಧನ ಹೊಂದಿದರು. ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಾಕಷ್ಟು ಜನಪ್ರತಿನಿಧಿಗಳು ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rae Bareli ಯಲ್ಲಿ ಗೆಲ್ಲಲು ಯತ್ನಿಸಿ: ವಿವಾದ ತಂದ ರಷ್ಯಾದ ಕ್ಯಾಸ್ಪರೋವ್ ಸಲಹೆ
Missing ಪುತ್ತೂರು ಮಹಾಲಿಂಗೇಶ್ವರ ದೇಗುಲದ ವಠಾರದಲ್ಲಿದ್ದ ಹೋರಿ ಅಣ್ಣು ನಾಪತ್ತೆ!
Wife ಜತೆ ಅಸ್ವಾಭಾವಿಕ ಲೈಂಗಿಕಕ್ರಿಯೆಯು ರೇಪ್ ಅಲ್ಲ: ಹೈಕೋರ್ಟ್
Karnataka Govt ನೀತಿ ಸಂಹಿತೆ ಸಡಿಲಿಕೆಗೆ ಮನವಿ: ಸರಕಾರ ಚಿಂತನೆ
Dengue Fever; ಚೆನ್ನೈತ್ತೋಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಡೆಂಗ್ಯೂ