ಲಂಡನ್: ಬಾಲಕನ ಕೊಲೆಗೈದ ಭಾರತೀಯ ಮೂಲದ ವ್ಯಕ್ತಿ ಸೆರೆ
Team Udayavani, Mar 20, 2017, 4:03 PM IST
ಲಂಡನ್ : ಉತ್ತರ ಪ್ರದೇಶದ ಫಿನ್ಸ್ಬರಿ ಪಾರ್ಕ್ ಪ್ರದೇಶದಲ್ಲಿ ಒಂದು ವರ್ಷದ ಬಾಲಕನನ್ನು ಕೊಂದು ಆತನ ಅವಳಿ ಸಹೋದರಿಯ ಮೇಲೆ ಹಲ್ಲೆಗೈದ ಆರೋಪದ ಮೇಲೆ ಭಾರತೀಯ ಮೂಲದ, 33 ವರ್ಷ ಪ್ರಾಯದ ವಿದ್ಯಾಸಾಗರ ದಾಸ್ ಎಂಬಾತನನ್ನು ಸ್ಕಾಟ್ಲಂಡ್ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.
ಕೊಲೆ ಆರೋಪಿ ವಿದ್ಯಾ ಸಾಗರ ದಾಸ್ ಕೂಡ ಫಿನ್ಸ್ಬರಿ ಪಾರ್ಕ್ ಪ್ರದೇಶದ ನಿವಾಸಿಯಾಗಿದ್ದಾನೆ. ಹೊಟೇಲ್ ಒಂದರಲ್ಲಿ ರಾತ್ರಿ ಶಿಫ್ಟ್ನಲ್ಲಿ ದುಡಿಯುತ್ತಿದ್ದ ಈತ ಈಚೆಗೆ ತನ್ನ ಉದ್ಯೋಗವನ್ನು ತೊರೆದಿದ್ದ.
ಕೊಲೆ ಕೃತ್ಯದ ಬಳಿಕ ತಲೆಮರೆಸಿಕೊಂಡಿದ್ದ ವಿದ್ಯಾಸಾಗರ್ ದಾಸ್ ಫಿನ್ಸ್ಬರಿಯಿಂದ ಆರು ಕಿ.ಮೀ.ದೂರದ ಹ್ಯಾಕ್ನೇ ಲಂಡನ್ ಬರೋದಲ್ಲಿ ಪತ್ತೆಯಾದ. ಸ್ಕಾಟ್ಲಂಡ್ ಯಾರ್ಡ್ ಪೊಲೀಸರು ಈ ಕೊಲೆ ಪ್ರಕರಣದ ರಹಸ್ಯವನ್ನು ಭೇದಿಸಿದ್ದಾರೆ. ಇದು ಕೌಟುಂಬಿಕ ಕಾರಣದಿಂದ ನಡೆದಿರುವ ಕೊಲೆ ಕೃತ್ಯವೆಂದು ಪೊಲೀಸರು ಹೇಳಿದ್ದಾರೆ.
ಬಾಲಕನ ತಲೆಗೆ ಸುತ್ತಿಗೆಯಿಂದ ಬಲವಾದ ಏಟು ಕೊಟ್ಟು ಸಾಯಿಸಿದ್ದ ಕೊಲೆ ಆರೋಪಿ ವಿದ್ಯಾಸಾಗರ್ ದಾಸ್ ಅನಂತರ ಆ ಬಾಲಕನ ಅವಳಿ ಸಹೋದರಿಯ ಮೇಲೂ ಮಾರಣಾಂತಿಕ ಹಲ್ಲೆ ಎಸಗಿದ್ದ. ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ
China ಹೊಸ ಸಾಹಸ; ಭೂಮಿಗೆ ಕಾಣದ ಚಂದ್ರನ ಭಾಗದ ಮಾದರಿ ಸಂಗ್ರಹ
ಪಾಕ್ಗೆ ರಾಜತಾಂತ್ರಿಕ ಸಭ್ಯತೆ ಇಲ್ಲ: ಭಾರತ ಕಿಡಿ
ಲೇಸರ್ ಸಂವಹನ: ಭೂಮಿಗೆ 14 ಕೋಟಿ ಮೈಲು ದೂರದಿಂದ ಸಂದೇಶ ರವಾನೆ
Boeing aircraft: ಬೋಯಿಂಗ್ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್ ಸಾವು
MUST WATCH
ಹೊಸ ಸೇರ್ಪಡೆ
Vitla: ಚಲಿಸುತ್ತಿದ್ದ ಬಸ್ಸಿನ ಗಾಜು ಹೊಡೆದು ಮೂವರಿಗೆ ಗಾಯ
Congress ಪಕ್ಷವನ್ನು ಎರಡನೇ ಬಾರಿ ತೊರೆದ ಲವ್ಲಿ; ಮತ್ತೆ ಬಿಜೆಪಿ ಸೇರ್ಪಡೆ
Davanagere; ಮೋದಿ ಯಾಕೆ ಬಲಾತ್ಕಾರಕ್ಕೊಳಗಾದ ಮಹಿಳೆಯರ ಬಗ್ಗೆ ಮಾತನಾಡಲ್ಲ: ಪ್ರಿಯಾಂಕಾ ಗಾಂಧಿ
AAP ಚುನಾವಣ ಪ್ರಚಾರ ಹಾಡನ್ನು ಅನುಮೋದಿಸಿದ ಆಯೋಗ; ಕೆಲ ಮಾರ್ಪಾಡು
H.D. Revanna ಬಂಧಿಸಿದ ಎಸ್ ಐಟಿ; ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್