ಸಿಪಿಎಂಗೆ ರಾಜೀನಾಮೆ ನೀಡಿದ ಇಬ್ಬರು ಎನ್ಡಿಎ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ
Team Udayavani, Mar 16, 2021, 7:14 PM IST
ಕಾಸರಗೋಡು : ಸಿಪಿಎಂ ಗೆ ರಾಜೀನಾಮೆ ನೀಡಿದ ಇಬ್ಬರು ಎನ್ಡಿಎ ಅಭ್ಯರ್ಥಿಗಳಾಗಿ ಚುನಾವಣಾ ಕಣದಲ್ಲಿದ್ದಾರೆ.
ಚೇರ್ತಲದ ಪಿ.ಎಸ್.ಜ್ಯೋತಿಷ್ ಮತ್ತು ಮಾವೇಲಿಕ್ಕರದ ಕೆ.ಸಂಜು ಎನ್ಡಿಎ ಅಭ್ಯರ್ಥಿಗಳಾಗಿದ್ದಾರೆ.
ಮಾವೇಲಿಕ್ಕರ ವಿಧಾನಸಭಾ ಕ್ಷೇತ್ರದಲ್ಲಿ ಎನ್.ಡಿ.ಎ. ಅಭ್ಯರ್ಥಿಯಾಗಿ ಸಿಪಿಎಂ ಮುಖಂಡ ಕೆ.ಸಂಜು ಆಯ್ಕೆಯಾಗಿದ್ದಾರೆ.
ಸಿಪಿಎಂ ಚುನಕ್ಕರ ಲೋಕಲ್ ಸಮಿತಿ ಸದಸ್ಯರಾಗಿರುವ ಸಂಜು ಸಿಪಿಎಂಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚುನಕ್ಕರ ಪಂಚಾಯತ್ನ ನಾಲ್ಕನೇ ವಾರ್ಡ್ನಲ್ಲಿ ಸಿಪಿಎಂ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಆರು ವರ್ಷದಿಂದ ಡಿವೈಎಫ್ಐ ಚಾರುಮೂಡ್ ಏರಿಯಾ ಸೆಕ್ರೆಟರಿ ಹಾಗು ಮೂರು ವರ್ಷದಿಂದ ಡಿವೈಎಫ್ಐ ಜಿಲ್ಲಾ ಸಮಿತಿ ಸದಸ್ಯರಾಗಿ ಕಾರ್ಯಚರಿಸಿದ್ದರು. 10 ವರ್ಷದಿಂದ ಸಿಪಿಎಂ ಚುನಕ್ಕರ ಸಮಿತಿ ಸದಸ್ಯರಾಗಿದ್ದರು.
ಇದೇ ವೇಳೆ ಕೆ.ಸಂಜು ಅವರನ್ನು ಸಿಪಿಎಂ ಪಕ್ಷದಿಂದ ವಜಾಗೊಳಿಸಲಾಗಿದೆ ಎಂದು ಚಾರುಮೂಡ್ ಏರಿಯಾ ಕಾರ್ಯದರ್ಶಿ ಬಿ.ಬಿನು ತಿಳಿಸಿದ್ದಾರೆ.
ಇದನ್ನೂ ಓದಿ :ಕೇರಳ : ನೇಮಂ ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ
ಚೇರ್ತಲದ ಪಿ.ಎಸ್.ಜ್ಯೋತಿಷ್ ಸಿಪಿಎಂಗೆ ರಾಜೀನಾಮೆ ನೀಡಿದ್ದು, ಇದೀಗ ಎನ್ಡಿಎ ಅಭ್ಯರ್ಥಿಯಾಗಿದ್ದಾರೆ. ಬಿಡಿಜೆಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP 200 ಸೀಟು ದಾಟುವುದು ಕಷ್ಟ: ಗೋವಾದಲ್ಲಿ ಶಶಿ ತರೂರ್
Prajwal Revanna ವಿದೇಶಕ್ಕೆ ತೆರಳಲು ಕ್ಲಿಯರೆನ್ಸ್ ಕೇಳಿಲ್ಲ: ವಿದೇಶಾಂಗ ಸಚಿವಾಲಯ
ಕಳ್ಳರು & ದರೋಡೆಕೋರರ ಗ್ಯಾಂಗ್ ಚುಚ್ಚಿದ್ದ ವಿಷಕ್ಕೆ ಪೊಲೀಸ್ ಕಾನ್ಸ್ ಟೇಬಲ್ ಮೃತ್ಯು
Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ
Rahul Gandhiಯನ್ನು ಭಾರತದ ಪ್ರಧಾನಿ ಮಾಡಲು ಪಾಕ್ ಉತ್ಸುಕವಾಗಿದೆ: ಪ್ರಧಾನಿ ಮೋದಿ