ಈಶ ಫೌಂಡೇಷನ್‌ನಿಂದ ಇನ್ನರ್‌ ಇಂಜಿನಿಯರಿಂಗ್‌


Team Udayavani, Apr 11, 2021, 3:15 PM IST

ಈಶ ಫೌಂಡೇಷನ್‌ನಿಂದ ಇನ್ನರ್‌ ಇಂಜಿನಿಯರಿಂಗ್‌

ಚಾಮರಾಜನಗರ: ಸದ್ಗುರು ಜಗ್ಗಿ ವಾಸುದೇವ್‌ ಅವರ ಈಶ ಫೌಂಡೇಷನ್‌ನಿಂದ ಇನ್ನರ್‌ಇಂಜಿನಿಯರಿಂಗ್‌ ಎಂಬ 7 ದಿನದ ತರಬೇತಿಯನ್ನುಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಪ್ರಾರಂಭ ಮಾಡಲಿದ್ದು, ಪ್ರಪ್ರಥಮವಾಗಿ ನಗರದಲ್ಲಿ ಆಯೋಜಿಸಲಾಗಿದೆ.

ಇನ್ನರ್‌ ಎಂಜಿನಿಯರಿಂಗ್‌-ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಪ್ರಭಾವಿಸಿರುವ ಈಶಫೌಂಡೇಷನ್ನಿನ ಪ್ರಮುಖ ಕಾರ್ಯಕ್ರಮವಾಗಿದ್ದು,ಪ್ರಪ್ರಥಮ ಬಾರಿಗೆ ಚಾಮರಾಜನಗರದಲ್ಲಿ ಏ.14ರಿಂದ ಏಪ್ರಿಲ್‌ 20 ರವರೆಗೆ ನಡೆಸಲಾಗುತ್ತಿದೆ. ಶಾಂಭವಿ ಮಹಾಮುದ್ರ ಕ್ರಿಯೆಯನ್ನು ಒಳಗೊಂಡಿರುವ ಈ ಕಾರ್ಯಕ್ರಮವನ್ನು ತರಬೇತಿ ಪಡೆದ ಈಶ ಶಿಕ್ಷಕರು ಸಂಪೂರ್ಣವಾಗಿ ಕನ್ನಡದಲ್ಲಿನಡೆಸಲಿದ್ದಾರೆ. ಶಾಂಭವಿ ಮಹಾಮುದ್ರ ಕ್ರಿಯೆಯು ಪುರಾತನ ಮತ್ತು ಶಕ್ತಿಯುತ ಯೋಗವಿಧಾನವಾಗಿದ್ದು, ಇದು ವರ್ಧಿತ ಶಕ್ತಿ ಮಟ್ಟ, ಹೆಚ್ಚಿನಭಾವಾನಾತ್ಮಕ ಸಂತುಲನೆ ಮತ್ತು ಆರೋಗ್ಯದಸುಧಾರಣೆಯಿಂದ ಅಂತರಂಗದ ಯೋಗಕ್ಷೇಮವನ್ನುಉತ್ತೇಜಿಸುತ್ತದೆ. 15 ವರ್ಷ ಹಾಗೂ ಹೆಚ್ಚಿನ ವಯಸ್ಸಿನಯಾರಾದರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸ ಬಹುದು ಎಂದು ಈಶ ಫೌಂಡೇಶನ್‌ನ ಸ್ವಯಂ ಸೇವಕ ವೃಷಭ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶರೀರ, ಮನಸ್ಸು ಮತ್ತು ಪ್ರಾಣಶಕ್ತಿಯನ್ನುಸಂತುಲನಗೊಳಿಸಿ, ಅವುಗಳು ಸಾಮರಸ್ಯದಿಂದ ಕಾರ್ಯಗೈಯುವಂತೆ ಮಾಡಲು ಈಶ ಫೌಂಡೇಷನ್ನಿನಸಂಸ್ಥಾಪಕ ಸದ್ಗುರು ಈ ಇನ್ನರ್‌ ಎಂಜಿನಿಯರಿಂಗ್‌ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿದ್ದಾರೆ. ಇದನ್ನುಜಗತ್ತಿನಾದ್ಯಂತ ಲಕ್ಷಾಂತರ ಈಶ ಸಾಧಕರುಅಭ್ಯಾಸಿಸುವರು. ದೈನಂದಿನ ಅಭ್ಯಾಸದಿಂದ ದೊರಕುವ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಪ್ರಯೋಜನಗಳಿಗೆ ಅನೇಕ ಸಾಧಕರು ಪುಷ್ಟಿ ನೀಡಿದಾರೆ ಎಂದರು.

7 ದಿನದ ಕಾರ್ಯಕ್ರಮವನ್ನು ನಗರದಶಂಕರಪುರದಲ್ಲಿರುವ ಸೇವಾಭಾರತಿ ಕಾಲೇಜುಕ್ಯಾಂಪಸ್‌ನಲ್ಲಿ ಬೆಳಗ್ಗೆ 6 ರಿಂದ 9 ರವರೆಗೆ, ಸಂಜೆ 6ರಿಂದ 9 ರವರೆಗೆ ನಡೆಸಲಾಗುವುದು. ಭಾಗವಹಿಸಲು ಇಚ್ಛಿಸುವವರು ಮೊಬೈಲ್‌ ಸಂಖ್ಯೆ 9886627666ಹಾಗೂ 9739376108 ಸಂಪರ್ಕಿಸಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ಸ್ವಯಂ ಸೇವಕ ನಕುಲ್‌ ಇತರರಿದ್ದರು

ಅಂತರಂಗದ ಯೋಗಕ್ಷೇಮ :

ಯೋಗ ಶಿಕ್ಷಕ ಮನು ಮಾತನಾಡಿ, ಇನ್ನರ್‌ಎಂಜಿನಿಯರಿಂಗ್‌ ಯೋಗದ ಪುರಾತನ ವಿಜ್ಞಾನದಿಂದಪಡೆದ ವಿಧಾನವಾಗಿದ್ದು, ಅಂತರಂಗದಯೋಗಕ್ಷೇಮಕ್ಕಾಗಿ ನಮ್ಮನ್ನು ನಾವು ಎಂಜಿನಿಯರ್‌ ಮಾಡಿಕೊಳ್ಳುವ ಸಾಧನಗಳನ್ನು ನೀಡುತ್ತದೆ. ಇದುಜೀವನದ ಎಲ್ಲ ಆಯಾಮಗಳಿಗೆ ಒಳಗಿನ ಅಡಿಪಾಯಮತ್ತು ಮುಂಗಾಣೆRಯನ್ನು (ವಿಷನ್‌) ಸ್ಥಾಪಿಸಲುಸಹಾಯ ಮಾಡುತ್ತದೆ. ಇಂದು ಎಲ್ಲರೂ ಒತ್ತಡದಜೀವನದಲ್ಲಿದ್ದೇವೆ. ಈ ಒತ್ತಡವನ್ನು ನಿವಾರಿಸಿಕೊಂಡುಜೀವನದಲ್ಲಿ ಶಾಂತಿ, ಪರಮಾನಂದ ಪಡೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ಟಾಪ್ ನ್ಯೂಸ್

Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ

Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ

4-sampaje

Aranthodu: ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ ಗೆ ಢಿಕ್ಕಿ ಹೊಡೆದ ಕಾರು

3-vijayapura

Vijayapura: ಸೀಟಿಗಾಗಿ ಮಹಿಳೆಯರ ಕಿತ್ತಾಟ: ರಸ್ತೆಯಲ್ಲೇ ನಿಂತ ಬಸ್

Lok Sabha Election: ರಾಯ್​ಬರೇಲಿಯಿಂದ ರಾಹುಲ್,​ ಅಮೇಥಿಯಿಂದ ಕೆ.ಎಲ್​. ಶರ್ಮ ಕಣಕ್ಕೆ

Lok Sabha Election: ರಾಯ್​ಬರೇಲಿಯಿಂದ ರಾಹುಲ್,​ ಅಮೇಥಿಯಿಂದ ಕೆ.ಎಲ್​. ಶರ್ಮ ಕಣಕ್ಕೆ

2-blr-crime

Bengaluru: ರಸ್ತೆಯಲ್ಲೇ 10 ಬಾರಿ ಇರಿದು ಪತ್ನಿಯ ಕೊಂದ ಪತಿ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

1-24-friday

Daily Horoscope: ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಆರೋಗ್ಯ ಉತ್ತಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ

Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ

4-sampaje

Aranthodu: ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ ಗೆ ಢಿಕ್ಕಿ ಹೊಡೆದ ಕಾರು

3-vijayapura

Vijayapura: ಸೀಟಿಗಾಗಿ ಮಹಿಳೆಯರ ಕಿತ್ತಾಟ: ರಸ್ತೆಯಲ್ಲೇ ನಿಂತ ಬಸ್

Lok Sabha Election: ರಾಯ್​ಬರೇಲಿಯಿಂದ ರಾಹುಲ್,​ ಅಮೇಥಿಯಿಂದ ಕೆ.ಎಲ್​. ಶರ್ಮ ಕಣಕ್ಕೆ

Lok Sabha Election: ರಾಯ್​ಬರೇಲಿಯಿಂದ ರಾಹುಲ್,​ ಅಮೇಥಿಯಿಂದ ಕೆ.ಎಲ್​. ಶರ್ಮ ಕಣಕ್ಕೆ

2-blr-crime

Bengaluru: ರಸ್ತೆಯಲ್ಲೇ 10 ಬಾರಿ ಇರಿದು ಪತ್ನಿಯ ಕೊಂದ ಪತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.