ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ‘ಬಾರ್’ ಸೀಜ್
Team Udayavani, Apr 21, 2021, 6:54 PM IST
ಜಮಖಂಡಿ: ತಾಲೂಕಿನಲ್ಲಿ ಕೋವಿಡ್ 2ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಬಾರ್ಮತ್ತು ರೆಸ್ಟೊರೆಂಟ್ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದು, ಮಾಸ್ಕ್ ಧರಿಸದೇ ವ್ಯವಹಾರ ನಡೆಸುತ್ತಿರುವುದನ್ನು ಗಮನಿಸಿದ ಉಪವಿಭಾಗಾಧಿಕಾರಿ ಡಾ|ಸಿದ್ದು ಹುಲ್ಲೊಳ್ಳಿ ನಗರದ ಬಾರ್ ಮತ್ತು ರೆಸ್ಟೊರೆಂಟ್ ಒಂದಕ್ಕೆ ಬೀಗ ಜಡಿದರು.
ತಾಲೂಕಿನಲ್ಲಿ ಬಹುತೇಕ ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ಸರ್ಕಾರದ ಕೊರೊನಾ ಮಾರ್ಗಸೂಚಿ ಪಾಲಿಸದೇ ಬೇಕಾಬಿಟ್ಟಿ ವ್ಯವಹಾರ ನಡೆಸುತ್ತಿದ್ದರು. ಗ್ರಾಹಕರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಬಾರ್ ಗಳಲ್ಲಿ ವಿಪರೀತ ಜನಸಂದಣಿ ಸೇರಿಸುವುದನ್ನು ಮಾಹಿತಿ ಸಂಗ್ರಹಿಸಿದ ಗಮನಿಸಿದ ಎಸಿ ಡಾ| ಸಿದ್ದು ಹುಲ್ಲೋಳ್ಳಿ ಹಠಾತ್ ದಾಳಿ ನಡೆಸಿ ಅಲ್ಲಿರುವ ಜನಜಂಗುಳಿಯನ್ನು ವೀಕ್ಷಿಸಿ ದಂಗಾದರು.
ಕೂಡಲೇ ಗ್ರಾಹಕರನ್ನು ಹೊರಹಾಕುವಂತೆ ಸೂಚಿಸಿದರು. ಅಬಕಾರಿ ಅಧಿಕಾರಿ ಸಂಗಮೇಶ ಮುರನಾಳ ಭೇಟಿ ನೀಡಿ, ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಬಾರ್, ಮದ್ಯದ ಅಂಗಡಿಗಳ ಮೇಲೆ ನಿಗಾವಹಿಸುವಂತೆ ಆದೇಶಿಸಿದರು. ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದು, ಸರಕಾರಿ ಇಲಾಖೆಗಳ ಅಧಿಕಾರಿಗಳೇ ನಿಷ್ಕಾಳಜಿ ತೋರಬಾರದು ಎಂದು ಸೂಚಿಸಿದರು.
ವೃತ್ತ ನಿರೀಕ್ಷಕ ಈರಯ್ನಾ ಮಠಪತಿ, ಪಿಎಸ್ಐ ಶಶಿಕುಮಾರ ಕುರಳೆ, ಅಬಕಾರಿ ಅಧಿಕಾರಿ ಸಂಗಮೇಶ ಮುರನಾಳ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BC Road, ಉಪ್ಪಿನಂಗಡಿಯಲ್ಲಿ ಸಂಚಾರ ಸಂಕಷ್ಟ : ಗಂಟೆಗಳ ಕಾಲ ಟ್ರಾಫಿಕ್ ಜಾಮ್
Retail Market; ತಾಪಮಾನ ಏರಿಕೆ: ಮೊಟ್ಟೆ ದರ ಇಳಿಕೆ
Prajwal Revanna Case ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ಡಿಲೀಟ್ ಮಾಡಿಸಲು ಕ್ರಮ: ಪರಂ
Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫಲ್ಯ ಕಾರಣ: ಅಶೋಕ್
Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ