ರಸ್ತೆ ಮಧ್ಯ ಉರುಳಿ ಬಿದ್ದ ಪಿಕ್ಅಪ್ ವಾಹನವನ್ನು ಎಳೆದು ನಿಲ್ಲಿಸಿದ ಸ್ಥಳೀಯ ಆಫ್ ರೋಡರ್ ಟೀಮ್
Team Udayavani, May 11, 2021, 1:21 PM IST
ಕಾವೂರು: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೋಂದೇಲ್ ಜಂಕ್ಷನ್ ನಲ್ಲಿ ರಸ್ತೆ ಮದ್ಯೆಬಿದ್ದಿದ್ದ ಪಿಕ್ಅಪ್ ವಾಹನವನ್ನು ಸ್ಥಳೀಯ ಆಫ್ ರೋಡರ್ ತನ್ನ ಮಹೀಂದ್ರ ಜೀಪ್ನಲ್ಲಿ ಪೊಲೀಸರ ಸಹಾಯದೊಂದಿಗೆ ಎಳೆದು ರಸ್ತೆ ಬದಿ ನಿಲ್ಲಿಸುವ ಮೂಲಕ ಮಾನವೀಯತೆ ಮೆರೆದ ಘಟನೆ ನಡೆದಿದೆ.
ಬೋಂದೇಲ್ ಜಂಕ್ಷನ್ ನಲ್ಲಿ ಪಿಕ್ ಅಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮದ್ಯೆ ಉರುಳಿ ಬಿದ್ದಿದ್ದು ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದ ರಸ್ತೆ ಮದ್ಯೆ ಉರುಳಿಬಿದ್ದ ಕಾರಣ ಪಿಕ್ಅಪ್ ನ ಆಯಿಲ್ ಟ್ಯಾಂಕ್ ಒಡೆದು ರಸ್ತೆ ಸಂಪೂರ್ಣ ಆಯಿಲ್ ಮಯವಾಗಿತ್ತು. ಸ್ಥಳಕ್ಕೆ ಆಗಮಿಸಿದ ಸಂಚಾರ ಉತ್ತರ ಪೊಲೀಸ್ ಠಾಣೆಯ ಪೊಲೀಸರು ಪಿಕ್ ಅಪ್ ರಸ್ತೆ ಬದಿಯಿಂದ ತೆರವು ಮಾಡಲು ಕ್ರೈನ್ ಮಾಲಕರಿಗೆ ದೂರವಾಣಿ ಕರೆ ಮಾಡಲು ಯತ್ನಿಸಿದರೂ ಯಾರೂ ಸಿಕ್ಕಿರಲಿಲ್ಲ.
ಈ ಸಂದರ್ಭದಲ್ಲಿ ಅದೇ ರಸ್ತಯಲ್ಲಿ ತೆರಳುತ್ತಿದ್ದ ಹವ್ಯಾಸಿ ಆಫ್ ರೋಡರ್ ಟೀಮ್ ಮಹೀಂದ್ರದಾ ಸದಸ್ಯ ದಿಶಿತ್ ಶೆಟ್ಟಿ ತನ್ನ ಮಹೀಂದ್ರ ವಾಹನದಲ್ಲಿದ್ದ ರೋಪ್ ಸಹಾಯದಿಂದ ಪಿಕ್ ಅಪ್ ವಾಹನವನ್ನು ರಸ್ತೆಯಿಂದ ತೆರವುಗೊಳಿಸಲು ಸಹಕರಿಸಿದರು. ಬಳಿಕ ಟ್ರಾಫಿಕ್ ಪೊಲೀಸರು ರಸ್ತೆಗೆ ಟ್ಯಾಂಕರ್ ಮೂಲಕ ನೀರು ಹಾಯಿಸಿದರು
ಎಎಸ್ ಐಗಳಾದ ಭಾಸ್ಕರ್ ಓಜಿ ಧರ್ಮೇಂದ್ರ, ಸಿಬ್ಬಂದಿಗಳಾದ ನವೀನ್ ಚಂದ್ರ , ರಾಜೇಂದ್ರ, ಪ್ರಮೋದ್ ಸಹಕರಿಸಿದರು. ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ… ಅತ್ಯಾಚಾರ ಆರೋಪಿ ಕಾಲಿಗೆ ಗುಂಡೇಟು
Bihar: 2025ರ ಚುನಾವಣೆಗೂ ಮುನ್ನ ಬಿಜೆಪಿಯಿಂದ 10 ಲಕ್ಷ ಸರ್ಕಾರಿ ಉದ್ಯೋಗದ ಭರವಸೆ
Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ
Puttur ಅಡಿಕೆಗೂ ಬಿಸಿಲ ತಾಪ: ಉದುರುತ್ತಿವೆ ನಳ್ಳಿ! ಶೇ. 50ರಷ್ಟು ಫಸಲು ನಷ್ಟದ ಭೀತಿ
ಸಿಆರ್ಝಡ್ ಮರಳು ಇನ್ನು ಸದ್ಯಕ್ಕೆ ಮರೀಚಿಕೆ