ಮತ್ತೆ ಗಡಿ ಅತಿಕ್ರಮಿಸಿದ ಚೀನಾ; ಉತ್ತರಾಖಂಡದ ಬಾರಾಹೋತಿಗೆ ಬಂದಿದ್ದ ಸೇನೆ
ಭಾರತದಲ್ಲಿ 3 ಗಂಟೆಯವರೆಗೆ ಠಿಕಾಣಿ ಹೂಡಿದ್ದ ಸೈನಿಕರು
Team Udayavani, Sep 28, 2021, 10:15 PM IST
ನವದೆಹಲಿ: ಗಡಿಯಲ್ಲಿ ಕೆಲ ಕಾಲದಿಂದ ತಂಟೆ ಮಾಡದೇ ಉಳಿದಿದ್ದ ಚೀನಾ ಸೇನೆ, ಮತ್ತೆ ತಂಟೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಆ. 30ರಂದು ಉತ್ತರಾಖಂಡದ ಬಾರಾಹೋತಿಯಲ್ಲಿರುವ ಗಡಿ ಪ್ರದೇಶಕ್ಕೆ ಕುದುರೆಗಳನ್ನೇರಿ ಯೋಧರ ತುಕಡಿ ಆಗಮಿಸಿತ್ತು. ಅಲ್ಲಿ ನಡೆದುಕೊಂಡು ಹೋಗಲು ರಚಿಸಲಾಗಿದ್ದ ಸೇತುವೆಯನ್ನು ಚೀನಾ ಯೋಧರು ಧ್ವಂಸ ಮಾಡಿದ್ದಾರೆ. ಅವರು ಸುಮಾರು ಮೂರು ಗಂಟೆಗಳ ಕಾಲ ಅಲ್ಲಿ ಇದ್ದರು. ಚೀನಾ ಸೈನಿಕರು ಬಂದಿದ್ದ ಬಗ್ಗೆ ಸುದ್ದಿ ತಿಳಿದ ಭೂಸೇನೆಯ ಒಂದು ತುಕಡಿ, ಐಟಿಬಿಪಿ ಯೋಧರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಅವರು ಪರಾರಿಯಾಗಿದ್ದರು.
ಈ ಸಂದರ್ಭದಲ್ಲಿ, ಎರಡೂ ಬದಿಯ ಸೈನಿಕರು ಮುಖಾಮುಖೀಯಾಗುವ ಪ್ರಸಂಗ ನಡೆದಿಲ್ಲ. ಘಟನೆ ಬಗ್ಗೆ ತಮ್ಮ ಸರ್ಕಾರಕ್ಕೆ ಯಾವುದೇ ಮಾಹಿತಿಯಿಲ್ಲ ಎಂದು ಉತ್ತರಾಖಾಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.
ಇದನ್ನೂ ಓದಿ:ಆರ್ಥಿಕ ಸಮಾನತೆಯಿಂದ ಮತಾಂತರ ತಡೆ ಸಾಧ್ಯ: ಪೇಜಾವರ ಸ್ವಾಮೀಜಿ
ಪೂರ್ವ ಲಡಾಖ್ ಪ್ರಾಂತ್ಯದಲ್ಲಿ, 17 ತಿಂಗಳುಗಳಿಂದ ತನ್ನ ಸೈನಿಕರನ್ನು ಅಕ್ರಮವಾಗಿ ಇರಿಸಿರುವ ಚೀನಾ, ಆ ಪ್ರದೇಶದಲ್ಲಿ ತನ್ನ ಸೈನಿಕರಿಗಾಗಿ ಕಂಟೈನರ್ ಆಧಾರಿತ ವಸತಿ ವ್ಯವಸ್ಥೆಯನ್ನು ಕಲ್ಪಿಸಿದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ, ಆಮ್ಲಜಕ ಪೂರೈಕೆ ವ್ಯವಸ್ಥೆ ಹಾಗೂ ಕ್ಷಿಪಣಿ ಉಡಾವಣಾ ವ್ಯವಸ್ಥೆಯೊಂದನ್ನು ಕಲ್ಪಿಸಿಕೊಟ್ಟಿರುವುದಾಗಿ ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Written Statement: ಧರ್ಮಾಧಾರಿತ ಮೀಸಲು ಜಾರಿ ಮಾಡದ ಬಗ್ಗೆ ಲಿಖೀತ ಹೇಳಿಕೆ ಕೊಡಿ: ಮೋದಿ
LS Polls: ಉತ್ತರ ಪ್ರದೇಶದಲ್ಲಿ ಗಾಂಧಿ ಕುಟುಂಬದ ಸ್ಪರ್ಧೆಗೆ ಕಸರತ್ತು
Lok Sabha Election: ವಾರಾಣಸಿಯಲ್ಲಿ ರಿಯಲ್ ಮೋದಿ VS ರೀಲ್ ಮೋದಿ ಫೈಟ್!
GST ಎಪ್ರಿಲ್ನಲ್ಲಿ 2.10 ಲಕ್ಷ ಕೋಟಿ ರೂ. ಜಿಎಸ್ಟಿ ಸಂಗ್ರಹ !
ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI
MUST WATCH
ಹೊಸ ಸೇರ್ಪಡೆ
Written Statement: ಧರ್ಮಾಧಾರಿತ ಮೀಸಲು ಜಾರಿ ಮಾಡದ ಬಗ್ಗೆ ಲಿಖೀತ ಹೇಳಿಕೆ ಕೊಡಿ: ಮೋದಿ
LS Polls: ಉತ್ತರ ಪ್ರದೇಶದಲ್ಲಿ ಗಾಂಧಿ ಕುಟುಂಬದ ಸ್ಪರ್ಧೆಗೆ ಕಸರತ್ತು
Lok Sabha Election: ವಾರಾಣಸಿಯಲ್ಲಿ ರಿಯಲ್ ಮೋದಿ VS ರೀಲ್ ಮೋದಿ ಫೈಟ್!
ಬೆನಕಟ್ಟಿ: SC/ST ಯ 200ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ