ಅದಾನಿ ಭಾರತದ ನಂ.2 ಸಿರಿವಂತ ಉದ್ಯಮಿ; ನಿತ್ಯದ ಗಳಿಕೆ 163 ಕೋಟಿ ರೂಪಾಯಿ
ಕಳೆದೊಂದು ವರ್ಷದಲ್ಲಿ ವಿನೋದ್ ಅವರ ಆದಾಯ ಶೇ. 21.20ಯಷ್ಟು ಏರಿಕೆ
Team Udayavani, Oct 1, 2021, 9:50 AM IST
ಹೊಸದಿಲ್ಲಿ: ದೇಶದ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲೊಬ್ಬರಾದ ಗೌತಮ್ ಅದಾನಿ, ಭಾರತದ 2ನೇ ಅತೀ ದೊಡ್ಡ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
“2021ರ ಐಐಎಫ್ಎಲ್ ವೆಲ್ತ್ ಹೊರೂನ್ ಇಂಡಿಯಾ ರಿಚ್ ಲಿಸ್ಟ್’ ಎಂಬ ಏಷ್ಯಾದ ಸಿರಿವಂತರ ಪಟ್ಟಿ ಯೊಂದು ಬಿಡುಗಡೆಯಾಗಿದ್ದು, ಅದರಲ್ಲಿ ಅದಾನಿ ಮತ್ತು ಕುಟುಂಬ ಕಳೆದ ವರ್ಷ ದಿನಕ್ಕೆ 1,002 ಕೋಟಿ ರೂ. ಆದಾಯಗಳಿಸಿದ್ದಾರೆ. ಈ ಗಳಿಕೆಯಿಂದಾಗಿ ಅವರ ಸಮಸ್ತ ಆಸ್ತಿಯ ಮೌಲ್ಯ 1,40,200 ಕೋಟಿ ರೂ.ಗಳಿಂದ 5,05,900 ಕೋಟಿ ರೂ.ಗಳಿಗೆ ಏರಿಕೆಯಾಗಿದೆ.
ಹಾಗಾಗಿ, ಕಳೆದ ವರ್ಷ ಈ ಪಟ್ಟಿಯ ನಾಲ್ಕನೇ ಸ್ಥಾನದಲ್ಲಿದ್ದ ಗೌತಮ್, ಈ ವರ್ಷ ಟಾಪ್ 2ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಮತ್ತೂಂದು ವಿಶೇಷವೇನೆಂದರೆ, ದುಬಾೖಯಲ್ಲಿ ವಾಸವಾಗಿರುವ ಗೌತಮ್ ಅದಾನಿ ಯವರ ಸಹೋದರ ಹಾಗೂ ಉದ್ಯಮಿ ವಿನೋದ್ ಶಾಂತಿಲಾಲ್ ಅದಾನಿ, ಈ ಪಟ್ಟಿಯ ಟಾಪ್ 10ರಲ್ಲಿ ಕಾಣಿಸಿ ಕೊಂಡಿದ್ದಾರೆ.
ಕಳೆದೊಂದು ವರ್ಷದಲ್ಲಿ ವಿನೋದ್ ಅವರ ಆದಾಯ ಶೇ. 21.20ಯಷ್ಟು ಏರಿಕೆ ಯಾಗಿದ್ದು ಅವರ ಆಸ್ತಿ ಮೌಲ್ಯ 1,31,600 ಕೋಟಿ ರೂ.ಗಳಿಗೆ ಮುಟ್ಟಿದೆ. ಹೀಗಾಗಿ, ಅವರು ಸಿರಿವಂತರ ಪಟ್ಟಿಯಲ್ಲಿ 12 ಸ್ಥಾನಗಳ ಏರಿಕೆ ಕಂಡು, ಸದ್ಯಕ್ಕೆ ಟಾಪ್ 8ರಲ್ಲಿ ಕಾಣಿಸಿಕೊಂಡಿದ್ದಾರೆ.
ಭಾರತದ ಟಾಪ್ 10 ಸಿರಿವಂತರು :
ಸಂ. ಹೆಸರು ಆಸ್ತಿ ಮೌಲ್ಯ
( ಕೋಟಿ ರೂ.ಗಳಲ್ಲಿ) ಏರಿಕೆ (ಶೇ.)
- ಮುಕೇಶ್ ಅಂಬಾನಿ ಮತ್ತು ಕುಟುಂಬ 7,18,000 9
- ಗೌತಮ್ ಅದಾನಿ ಮತ್ತು ಕುಟುಂಬ 5,05,900 261
- ಶಿವ ನಾದಾರ್ ಮತ್ತು ಕುಟುಂಬ 2,36,600 67
- ಎಸ್ಪಿ ಹಿಂದೂಜಾ ಮತ್ತು ಕುಟುಂಬ 2,20,000 53
- ಎಲ್ಎನ್ ಮಿತ್ತಲ್ ಮತ್ತು ಕುಟುಂಬ 1,74,400 187
- ಸೈರಸ್ ಎಸ್ ಪೂನಾವಾಲಾ ಮತ್ತು ಕುಟುಂಬ 1,63,700 74
- ರಾಧಾಕೃಷ್ಣನ್ ದಮನಿ ಮತ್ತು ಕುಟುಂಬ 1,54,300 77
- ವಿನೋದ್ ಶಾಂತಿಲಾಲ್ ಮತ್ತು ಕುಟುಂಬ 1,31,600 212
- ಕುಮಾರ ಮಂಗಳಂ ಬಿರ್ಲಾ ಮತ್ತು ಕುಟುಂಬ 1,22,000 230
- ಜೇ ಚೌಧರಿ 1,21,600 85
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ದಾರಿ ಮಧ್ಯೆ ಹೊತ್ತಿ ಉರಿದ ಟ್ರಕ್… 32 ಲಕ್ಷ ಮೌಲ್ಯದ ಸೊತ್ತು ನಷ್ಟ
Hamida Banu: ಭಾರತದ ಮೊದಲ ಮಹಿಳಾ ಕುಸ್ತಿಪಟು ಹಮೀದಾ ಬಾನುಗೆ ಗೂಗಲ್ ಡೂಡಲ್ ಗೌರವ
Loksabha; ಪ್ರಚಾರಕ್ಕೆ ಸಿಗದ ಹಣಕಾಸು ನೆರವು..: ಟಿಕೆಟ್ ಮರಳಿಸಿದ ಕಾಂಗ್ರೆಸ್ ಅಭ್ಯರ್ಥಿ
Mussoorie: ಭೀಕರ ರಸ್ತೆ ಅಪಘಾತ… 5 ವಿದ್ಯಾರ್ಥಿಗಳ ದುರಂತ ಅಂತ್ಯ, ಓರ್ವಳ ಸ್ಥಿತಿ ಗಂಭೀರ
ಅರವಿಂದ್ ಕೇಜ್ರಿವಾಲ್ಗೆ ಮಧ್ಯಂತರ ಜಾಮೀನು? ಸುಪ್ರೀಂ ಸುಳಿವು
MUST WATCH
ಹೊಸ ಸೇರ್ಪಡೆ
Allu Arjun: ಯೂಟ್ಯೂಬ್ನಲ್ಲಿ ಧೂಳೆಬ್ಬಿಸಿ ದಾಖಲೆ ಬರೆದ ʼಪುಷ್ಪ ಪುಷ್ಪʼ ಹಾಡು
ಗದಗ: ಸಂವಿಧಾನ ಧರ್ಮಗ್ರಂಥ ಎಂದವರು ಮೋದಿ- ಬೊಮ್ಮಾಯಿ
ಚಿನ್ನದ ನಾಡಿನ ಕಲಾವಿದೆ ವಿದ್ಯಾಶ್ರೀ ಪ್ರತಿಭೆ ಅನಾವರಣ-ನೃತ್ಯಗಂಗಾ ಪ್ರದರ್ಶನ
BJP ಕುರುಬ ಸಮುದಾಯಕ್ಕೆ ಒಂದೂ ಟಿಕೆಟ್ ಕೊಟ್ಟಿಲ್ಲ: ಸಿಎಂ ಸಿದ್ದರಾಮಯ್ಯ ಕಿಡಿ
ಅಮಿತಾಭ್ ಟು ಶಾರುಖ್: ಇಂದು ಕೋಟಿ ಕುಳರಾದ ಈ ನಟರ ಮೊದಲ ಸಂಪಾದನೆ ಎಷ್ಟಾಗಿತ್ತು ಗೊತ್ತಾ?