ಇಂದಿನಿಂದ ಭಜರಂಗಿ-2 ಹವಾ ಶುರು: ಪ್ರೇಕ್ಷಕರ ಮುಂದೆ ತೆರೆದುಕೊಳ್ಳಲಿದೆ ಹೊಸ ಲೋಕ


Team Udayavani, Oct 29, 2021, 9:03 AM IST

bhajarangi 2

ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಭಿಮಾನಿಗಳ ಕುತೂಹಲ ಹೆಚ್ಚುತ್ತಲೇ ಇದೆ. ಅದಕ್ಕೆ ಕಾರಣ “ಭಜರಂಗಿ-2′. ಶಿವರಾಜ್‌ ಕುಮಾರ್‌ ನಟನೆಯ “ಭಜರಂಗಿ-2′ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ದೊಡ್ಡ ಗ್ಯಾಪ್‌ನ ನಂತರ ಬಿಡುಗಡೆಯಾಗುತ್ತಿರುವ ಸಿನಿಮಾ ಇದಾಗಿರುವುದರಿಂದ ಸಹಜವಾಗಿಯೇ ಶಿವಣ್ಣ ಫ್ಯಾನ್ಸ್‌ ಈ ಚಿತ್ರವನ್ನು ಅದ್ಧೂರಿಯಾಗಿ ಆಚರಿಸಲು ತಯಾರಿ ನಡೆಸಿದ್ದಾರೆ. ಈ ಮೂಲಕ ಕೋವಿಡ್‌ ಎರಡನೇ ಲಾಕ್‌ಡೌನ್‌ ನಂತರ ಬಿಡುಗಡೆಯಾಗುತ್ತಿರುವ ಅದ್ಧೂರಿ ಸಿನಿಮಾವಾಗಿ “ಭಜರಂಗಿ-2′ ಹೊರಹೊಮ್ಮುತ್ತಿದೆ. ಎ.ಹರ್ಷ ಅವರ ಕನಸಿಗೆ, ನಿರ್ಮಾಪಕ ಜಯಣ್ಣ ಸಾಥ್‌ ನೀಡುವ ಮೂಲಕ ಒಂದು ಫ್ಯಾಂಟಸಿ ಲೋಕವನ್ನು ಸೃಷ್ಟಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್‌, ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿವೆ.

“ಭಜರಂಗಿ-2′ ಚಿತ್ರದ ಕೆಲವು ಹೈಲೈಟ್ಸ್‌ಗಳು ಇಲ್ಲಿವೆ…

ಶಿವರಾಜ್‌ಕುಮಾರ್‌- ಹರ್ಷ ಕಾಂಬಿನೇಶನ್‌ನಲ್ಲಿ ಈ ಹಿಂದೆ “ಭಜರಂಗಿ-2′ ಚಿತ್ರ ಬಂದು, ಹಿಟ್‌ ಆಗಿತ್ತು. ಆದರೆ, “ಭಜರಂಗಿ-2′ ಅದರ ಮುಂದುವರೆದ ಭಾಗವಲ್ಲ. ಸಂಪೂರ್ಣ ಬೇರೆಯೇ ಕಥೆ. ಆ ಚಿತ್ರದ ನೋಡಿರದಂತಹ ಒಂದು ಹೊಸ ಲೋಕವನ್ನು ಇಲ್ಲಿ ಸೃಷ್ಟಿಸಲಾಗಿದೆ. ಚಿತ್ರದ ಟೈಟಲ್‌ ಅಷ್ಟೇ ಇಲ್ಲಿ ಮುಂದುವರೆದಿದೆಯೇ ಹೊರತು ಕಥೆಯಲ್ಲ.

* ಭಜರಂಗಿ-2 ಒಂದು ಫ್ಯಾಂಟಸಿ ಡ್ರಾಮಾ ಸಿನಿಮಾ. ನೀವಿದನ್ನು ಡಿವೋಶನಲ್‌ ಮಾಸ್‌ ಸಿನಿಮಾ ಎಂದು ಕರೆಯಬಹುದು. ಅದಕ್ಕೆ ಕಾರಣ ಚಿತ್ರದಲ್ಲಿ ಕೆಟ್ಟದು-ಒಳ್ಳೆಯದು, ದೇವರು- ರಾಕ್ಷಸರು ಈ ತರಹದ ಒಂದಷ್ಟು ಅಂಶಗಳು ಇರುವುದು. ಜೊತೆಗೆ ಹಾಲಿವುಡ್‌ ಸಿನಿಮಾಗಳಲ್ಲಿ ಕಾಣುವಂತಹ ವಿಚಿತ್ರ ಗೆಟಪ್‌ನ ಪಾತ್ರಗಳು ಈಚಿತ್ರದಲ್ಲಿದ್ದು, ಪ್ರೇಕ್ಷಕರನ್ನು ಹೊಸ ರೀತಿಯಲ್ಲಿ ರಂಜಿಸಲಿವೆ.

* ಚಿತ್ರದಲ್ಲಿ ವೈದ್ಯೋ ನಾರಾಯಣೋ ಹರಿ ಎಂಬ ಹಾಡಿದೆ. ಆ ಹಾಡಿಗೂ ಇಡೀ ಕಥೆಗೂ ಒಂದು ಲಿಂಕ್‌ ಇದೆ. ಚಿತ್ರದ ಟ್ರೇಲರ್‌ನ್ನು ಸೂಕ್ಷ್ಮವಾಗಿ ಗಮನಿಸಿದಾಗ “ವೈದ್ಯೋ ನಾರಾಯಣೋ ಹರಿ’ ಕಾನ್ಸೆಪ್ಟ್ನ ಕೆಲವು ದೃಶ್ಯಗಳು ಕಾಣಸಿಗುತ್ತವೆ.

* ಸಾಮಾನ್ಯವಾಗಿ ಚಿತ್ರದ ಟ್ರೇಲರ್‌ಗಳಲ್ಲಿ ಡೈಲಾಗ್‌ ಇರುತ್ತವೆ. ಆದರೆ, “ಭಜರಂಗಿ-2′ ಚಿತ್ರದ ಟ್ರೇಲರ್‌ನಲ್ಲಿ ಒಂದೇ ಒಂದು ಡೈಲಾಗ್‌ ಇಲ್ಲ. ಅದಕ್ಕೆ ಕಾರಣ, ಮಾತಿಗಿಂತ ಸನ್ನಿವೇಶ ಮುಖ್ಯ ಎಂಬುದು. ಇಡೀ ಚಿತ್ರದ ಮೇಕಿಂಗ್‌, ಹಿನ್ನೆಲೆ ಸಂಗೀತ, ಕಲಾವಿದರ ಮುಖಭಾವದಲ್ಲೇ ಕಥೆ ಹೇಳಬೇಕೆಂಬ ಕಾನ್ಸೆಪ್ಟ್ನಲ್ಲಿ ಈ ಟ್ರೇಲರ್‌ ಕಟ್ಟಿಕೊಡಲಾಗಿದೆ. ಅದರಂತೆ “ಭಜರಂಗಿ-2′ ಟ್ರೇಲರ್‌ ಹಿಟ್‌ ಆಗಿ, ಸಿನಿಮಾದ ಕುತೂಹಲವನ್ನು ಹೆಚ್ಚಿಸಿದೆ. ಜೊತೆಗೆ ಅರ್ಜುನ್‌ ಜನ್ಯಾ ಸಂಗೀತದ ಹಾಡುಗಳು ಈಗಾಗಲೇ ಹಿಟ್‌ಲಿಸ್ಟ್‌ ಸೇರಿ, ಭಜರಂಗಿಯನ್ನು ಮತ್ತೂಂದು ಎತ್ತರಕ್ಕೆ ಕೊಂಡೊಯ್ಯಿದಿದೆ.

* ಈ ಸಿನಿಮಾದ ಹೈಲೈಟ್‌ಗಳಲ್ಲಿ ಸೆಟ್‌ ಕೂಡಾ ಒಂದು. ಸೆಟ್‌ಗಿಂತ ಗ್ರಾಫಿಕ್‌ ಮೊರೆ ಹೋಗುತ್ತಿರುವ ಈ ಸಮಯದಲ್ಲಿ “ಭಜರಂಗಿ-2′ ಚಿತ್ರದ ಬಹುತೇಕ ಚಿತ್ರೀಕರಣ ಸೆಟ್‌ನಲ್ಲೇ ನಡೆದಿದೆ.

*ಒಮ್ಮೆ ಸುಟ್ಟುಹೋದ ಸೆಟ್‌ ಅನ್ನೇ ಚಿತ್ರತಂಡ ಅಷ್ಟೇ ಪ್ರೀತಿಯಿಂದ ಮರು ನಿರ್ಮಾಣ ಮಾಡಿದೆ. ಈ ಮೂಲಕ ತೆರೆಮೇಲೆ ಹೊಸ ಲೋಕವೊಂದು ತೆರೆದುಕೊಳ್ಳಲಿದೆ.

* ಈ ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. ಶಿವರಾಜ್‌ಕುಮಾರ್‌, ಭಾವನಾ, ಶ್ರುತಿ, ಶಿವರಾಜ್‌ ಕೆ.ಆರ್‌.ಪೇಟೆ… ಹೀಗೆ ಸಾಕಷ್ಟು ಮಂದಿ ನಟಿಸಿದ್ದಾರೆ. ಆದರೆ, ಇವರೆಲ್ಲರೂ ವಿಭಿನ್ನ ಪಾತ್ರ ಹಾಗೂ ಗೆಟಪ್‌ನಲ್ಲಿ ಕಾಣಿಸಿಕೊಂಡು ಚಿತ್ರದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

* ದೇಶದಾದ್ಯಂತ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಪರದೆಗಳಲ್ಲಿ ಈ ಚಿತ್ರ ಪ್ರದರ್ಶನ ಕಾಣಲಿದೆ. ಈ ಮೂಲಕ ಎರಡನೇ ಲಾಕ್‌ಡೌನ್‌ ನಂತರ ಕನ್ನಡ ಚಿತ್ರರಂಗದಿಂದ ಬಿಡುಗಡೆಯಾಗುತ್ತಿರುವ ಬಹುನಿರೀಕ್ಷಿತ ಹಾಗೂ ಅದ್ಧೂರಿ ಚಿತ್ರವಾಗಿ “ಭಜರಂಗಿ-2′ ಬಿಡುಗಡೆಯಾಗುತ್ತಿದೆ.

* ಇಡೀ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಈ ಹಿಂದಿನ “ಭಜರಂಗಿ’ ಚಿತ್ರ ಇಂದಿನ “ಭಜರಂಗಿ’ ಚಿತ್ರ ಒಂದು ಫೀಲ್‌ ಕೊಟ್ಟರೆ, “ಭಜರಂಗಿ-2′ ಮತ್ತೂಂದು ಭಜರಂಗಿ-2′ ಮತ್ತೂಂದು ಫೀಲ್‌ ಕೊಡಲಿದೆ.

ಹೊಸದೊಂದು ಫ್ಯಾಂಟಸಿ ಹೊಸದೊಂದು ಫ್ಯಾಂಟಸಿ ಲೋಕವನ್ನು ಇಲ್ಲಿ ಸೃಷ್ಟಿಸಲಾ ಲೋಕವನ್ನು ಇಲ್ಲಿ ಸೃಷ್ಟಿಸಲಾಗಿದೆ. ಸಾಕಷ್ಟು ಅಡೆತಡೆ ದೆ. ಸಾಕಷ್ಟು ಅಡೆತಡೆ ಬಂದರೂ,  ನಿರ್ಮಾಪಕ ಜಯಣ್ಣ ಧೈರ್ಯವಾಗಿ ನಿಂತು ಚಿತ್ರವನ್ನು ಅದ್ಧೂರಿಯಾಗಿ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ.. ನಿರ್ದೇಶಕ ‌ಹರ್ಷ ಶ್ರಮ ತೆರೆಮೇಲೆ ಕಾಣಲಿದೆ.- ಶಿವರಾಜ್‌ ಕುಮಾರ್‌

ರವಿ ಪ್ರಕಾಶ್ ರೈ

ಟಾಪ್ ನ್ಯೂಸ್

1-wewewqe

Bengaluru ತಂಪೆರೆದ ವರುಣ; ಕೆಲವೆಡೆ ಹಾನಿ: 4 ದಿನ ಮುಂದುವರಿಯುವ ಸಾಧ್ಯತೆ

Yadagiri: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ; ಪ್ರಕರಣ ದಾಖಲು

Yadagiri: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ; ಪ್ರಕರಣ ದಾಖಲು

Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್

Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್

 ಸ್ಮೃತಿ ಇರಾನಿ ಎದುರು ಗೆಲುವು ಅಸಾಧ್ಯ ಎಂದು ಗೊತ್ತಾಗಿದೆ: ರಾಹುಲ್‌ ಗೆ ಬಿಜೆಪಿ ತಿರುಗೇಟು

Smriti ಇರಾನಿ ಎದುರು ಗೆಲುವು ಅಸಾಧ್ಯ ಎಂದು ಗೊತ್ತಾಗಿದೆ: ರಾಹುಲ್‌ ಗೆ ಬಿಜೆಪಿ ತಿರುಗೇಟು

ಈ ಬಾರಿ ಚುನಾವಣೆಯಲ್ಲಿ ಸಂವಿಧಾನದ ಅಳಿವು ಉಳಿವಿನ ಪ್ರೆಶ್ನೆಯಾಗಿದೆ: ಟಿ.ಬಿ.ಜಯಚಂದ್ರ

ಈ ಬಾರಿ ಚುನಾವಣೆಯಲ್ಲಿ ಸಂವಿಧಾನದ ಅಳಿವು ಉಳಿವಿನ ಪ್ರೆಶ್ನೆಯಾಗಿದೆ: ಟಿ.ಬಿ.ಜಯಚಂದ್ರ

amit-shah

Belagavi; ನೇಹಾ ಹತ್ಯೆ ಪ್ರಕರಣ ಸಿಬಿಐಗೆ ಕೊಡಿ, ಆರೋಪಿಗಳ ತಲೆ ಕೆಳಗೆ ಮಾಡ್ತೀವಿ: ಶಾ ಗುಡುಗು

Campaign: ಮತದಾರರನ್ನು ಸೆಳೆಯಲು ಪ್ಯಾರಾ ಗ್ಲೈಡರ್ ಮೂಲಕ ಅಭಿಯಾನ

Campaign: ಮತದಾರರನ್ನು ಸೆಳೆಯಲು ಪ್ಯಾರಾ ಗ್ಲೈಡರ್ ಮೂಲಕ ಅಭಿಯಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rishi; ರುದ್ರ ಗರುಡ ಪುರಾಣ ಫಸ್ಟ್ ಲುಕ್ ಬಿಡುಗಡೆ

Rishi; ರುದ್ರ ಗರುಡ ಪುರಾಣ ಫಸ್ಟ್ ಲುಕ್ ಬಿಡುಗಡೆ

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

Kantara-Chapter 1: 600 ಮಂದಿ ಬಡಗಿಗಳು, ಕಳರಿಪಯಟ್ಟು ಕಲಾವಿದರು; ಬೃಹತ್ ಸೆಟ್ ನಿರ್ಮಾಣ

Kantara-Chapter 1: 600 ಮಂದಿ ಬಡಗಿಗಳು, ಕಳರಿಪಯಟ್ಟು ಕಲಾವಿದರು; ಬೃಹತ್ ಸೆಟ್ ನಿರ್ಮಾಣ

Aditya’s kangaroo movie released

Kangaroo; ಥ್ರಿಲ್ಲರ್‌ ಹಾದಿಯಲ್ಲಿ ಆದಿತ್ಯ ಹೆಜ್ಜೆ ಗುರುತು

rangasthala kannada movie

Kannada Cinema; ರಂಗಮಂಟಪ ಸುತ್ತ ‘ರಂಗಸ್ಥಳ’; ಹೊಸ ಚಿತ್ರದ ಟೈಟಲ್‌ ಲಾಂಚ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqe

Bengaluru ತಂಪೆರೆದ ವರುಣ; ಕೆಲವೆಡೆ ಹಾನಿ: 4 ದಿನ ಮುಂದುವರಿಯುವ ಸಾಧ್ಯತೆ

Yadagiri: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ; ಪ್ರಕರಣ ದಾಖಲು

Yadagiri: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ; ಪ್ರಕರಣ ದಾಖಲು

Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್

Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್

12

Hunsur: ಅಂಗನವಾಡಿ ಕೇಂದ್ರ ಅಸಮರ್ಪಕ ನಿರ್ವಹಣೆ, ಬೀಗ ಜಡಿದು ಗ್ರಾಮಸ್ಥರ ಆಕ್ರೋಶ

Rishi; ರುದ್ರ ಗರುಡ ಪುರಾಣ ಫಸ್ಟ್ ಲುಕ್ ಬಿಡುಗಡೆ

Rishi; ರುದ್ರ ಗರುಡ ಪುರಾಣ ಫಸ್ಟ್ ಲುಕ್ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.