ಒಂದೇ ರಾತ್ರಿ 12 ರೈತರ ಕೊಳವೆ ಬಾವಿ ಕೇಬಲ್ ಕಟ್
ಮೂವತ್ತರಿಂದ, ನೂರೈವತ್ತು ಅಡಿಗಳಿಗೂ ಮೀರಿ ಕೇಬಲ್ ಕಳವು ಆಗಿದೆ
Team Udayavani, Mar 31, 2022, 6:32 PM IST
ನಾಗಮಂಗಲ: ಜಮೀನು, ತೋಟಗಳಲ್ಲಿ ರೈತರು ಕೊಳವೆ ಬಾವಿಗೆ ಅಳವಡಿಸಿರುವ ಕೇಬಲ್ ಕದ್ದೊಯ್ದಿರುವ ಘಟನೆ ತಾಲೂಕಿನ ದೇವಲಾಪುರ ಹೋಬಳಿ ಮೈಲಾರಪಟ್ಟಣದ ದಾಖಲೆ ಗ್ರಾಮಗಳಾದ ಬಿಟ ಗೋನಹಳ್ಳಿ ಮತ್ತು ಗೊಗ್ಗನಕೊಪ್ಪಲು ಗ್ರಾಮಗಳಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ನಾಗಮಂಗಲ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಈ ದುಷ್ಕೃತ್ಯ ನಡೆದಿದ್ದು, ಬೆಳಗ್ಗೆ ರೈತರು ತಮ್ಮಕೊಳವೆ ಬಾವಿಯಿಂದ ನೀರು ಹಾಯಿಸಲು ಹೋದಾಗ ಕಳವಿನ ಘಟನೆ ಬೆಳಕಿಗೆ ಬಂದಿದೆ.
ಮೀಟರ್ಗೆ 150 ರೂ.ಗಿಂತ ಹೆಚ್ಚು: ಈ ಕುರಿತು “ಉದಯವಾಣಿ’ಯೊಂದಿಗೆ ತಮ್ಮ ಅಳಲು ತೋಡಿ ಕೊಂಡ ರೈತರಾದ ಲಕ್ಷ್ಮಣ, ಗಿರೀಶ್ ಮತ್ತಿತರರು, ಕೊಳವೆ ಬಾವಿಯಿಂದ ನೀರೆತ್ತಲು ಕೊಳವೆ ಬಾವಿಯ ಮೋಟಾರ್ ಮತ್ತು ಸ್ಟ್ರಾಟರ್ಗೆ ಸಂಪರ್ಕ ಕಲ್ಪಿಸುವ ಕೇಬಲ್ಗಳನ್ನು ಕಳ್ಳರು ತುಂಡರಿಸಿಕೊಂಡು ಹೋಗಿದ್ದಾರೆ. ಮೂವತ್ತರಿಂದ, ನೂರೈವತ್ತು ಅಡಿಗಳಿಗೂ ಮೀರಿ ಕೇಬಲ್ ಕಳವು ಆಗಿದೆ. ಮೀಟರ್ಗೆ 150 ರೂ. ಗಿಂತ ಹೆಚ್ಚು ಬೆಲೆ ಬಾಳುವಕೇಬಲ್ ಇದಾಗಿದ್ದು ರೈತರಿಗೆ ನಷ್ಟ ತುಂಬಿ ಕೊಡುವವರು ಯಾರು ಎಂದು ನೋವನ್ನು ತೋಡಿಕೊಂಡರು.
ಕರೆಂಟ್ ಕಣ್ಣಾಮುಚ್ಚಾಲೆ: ಬೇಸಿಗೆಯಲ್ಲಿ ವಿದ್ಯುತ್ ಕಣ್ಣಮುಚ್ಚಾಲೆ ನಡುವೆ ಕೇಬಲ್ ಕಳವು ಆಗಿದ್ದು ಒಣಗುತ್ತಿರುವ ಗಿಡಗಂಟಿಗಳಿಗೆ ನೀರು ಹಾಯಿಸಲು ತ್ರಾಸ ಪಡುವಂತಾಗಿದೆ. ಪೊಲೀಸರು ಗ್ರಾಮಗಳಲ್ಲಿ ಹೆಚ್ಚು ಗಸ್ತು ಹಾಕುವ ಮೂಲಕ ಇಂಥ ಕಳವು ಪ್ರಕರಣ ತಪ್ಪಿಸಬೇಕೆಂದು ಮನವಿ ಮಾಡಿದ್ದಾರೆ.
ಮಾಹಿತಿ ನೀಡಿ: ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಗ್ರಾಮಗಳಲ್ಲಿ ಅನುಮಾನಾಸ್ಪದವಾಗಿ ತಿರುಗಾಡುವ ವ್ಯಕ್ತಿಗಳ ಬಗ್ಗೆ ಗ್ರಾಮಸ್ಥರು ಎಚ್ಚರಿಕೆ ವಹಿಸಬೇಕು. ಜತೆಗೆ ಅಂಥವರ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
Campaign: ಮತದಾರರನ್ನು ಸೆಳೆಯಲು ಪ್ಯಾರಾ ಗ್ಲೈಡರ್ ಮೂಲಕ ಅಭಿಯಾನ
Gadag; ಬಿಜೆಪಿಗೆ ಹೆಚ್ಚಿನ ಮತ ಹಾಕಿಸಲು ಪ್ರಕೋಷ್ಠಗಳು ಶ್ರಮಿಸಬೇಕು: ಬಸವರಾಜ ಬೊಮ್ಮಾಯಿ
Thirthahalli: ಶಿಕ್ಷಕರ ಚುನಾವಣೆಯಲ್ಲಿ ಶಿಕ್ಷಕರೇ ಸ್ಪರ್ಧೆ ಮಾಡಬೇಕು: ಅರುಣ್ ಹೊಸಕೊಪ್ಪ
Raichur; ಗ್ಯಾರಂಟಿ ಹೆಸರಲ್ಲಿ ದಲಿತರಿಗೆ ಕಾಂಗ್ರೆಸ್ ವಂಚನೆ: ನಾರಾಯಣಸ್ವಾಮಿ
ICC Men’s Test Team Rankings; ಎರಡನೇ ಸ್ಥಾನಕ್ಕೆ ಜಾರಿದ ಟೀಂ ಇಂಡಿಯಾ