ದಲಿತ ಸಿ.ಎಂ ವಿಚಾರದಲ್ಲಿ ಬಂದ್ರೆ ಚಾರಾಣೆ, ಹೋದ್ರೆ ಬಾರಾಣೆ: ರಮೇಶ ಜಿಗಜಿಣಗಿ
Team Udayavani, Feb 6, 2023, 3:35 PM IST
ವಿಜಯಪುರ: ದಲಿತ ಸಿ.ಎಂ. ವಿಷಯದಲ್ಲಿ ನಾನು ಸಾಯುವವರೆಗೂ ಬಯಸುತ್ತಲೇ ಇರುತ್ತೇನೆ. ಆದರೆ ನನಗೇ ಬೇಕೆಂಬ ಆಸೆ ಇಟ್ಟಿಲ್ಲ, ಯಾವುದೇ ಅಧಿಕಾರದ ಹಿಂದೆ ಬಿದ್ದಿಲ್ಲ. ದೇವರೂ ನನ್ನ ಕೈಬಿಟ್ಟಿಲ್ಲ. ಬರುವುದಿದ್ದರೆ ತಾನೇ ಬರುತ್ತದೆ. ಬಂದ್ರೆ ಚಾರಣೆ, ಹೋದ್ರೆ ಬಾರಾಣೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯಾವ ಚೆಲುವ ಏನೇ ಮಾಡಿದರೂ ನನಗೆ ಏನೂ ಆಗಲ್ಲ. ದೇವರ ರಕ್ಷಣೆ ನನಗಿದೆ ಎಂದರು.
ದೇವರು ನನಗೆ ಆನೆಯಂಥಹ ಶಕ್ತಿಕೊಟ್ಟಿದ್ದರೂ ಇರುವೆಯಂತೆ ದುಡಿಯುತ್ತಿದ್ದೇನೆ. ಬಸವನಾಡಿನ ನಾನು ಬಸವೇಶ್ವರ ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ವಚನ ಸಾರದಂತೆ ಜೀವನ ನಡೆಸಿದ್ದೇನೆ ಎಂದರು.
ಇದನ್ನೂ ಓದಿ:ಭಾರತ ತಂಡವನ್ನು ತೆಗೆದು ಹಾಕಿ..: ಐಸಿಸಿಗೆ ಪಾಕ್ ದಿಗ್ಗಜನ ಮನವಿ
ಕುಮಾರಸ್ವಾಮಿ, ದೇವೇಗೌಡ ಮಾತ್ರವಲ್ಲ, ಯಾವನೂ ಯಾವುದೇ ಜಾತಿಯ ಬಗ್ಗೆ ನಿಂದನೆ ಮಾಡಬಾರದು ಎಂದು ಎಚ್.ಡಿ.ಕೆ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.
ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿರುವ ಕುಮಾರಸ್ವಾಮಿ ಬಾಯಲ್ಲಿ ಬ್ರಾಹ್ಮಣರನ್ನು ಸಿ.ಎಂ ಮಾಡುವ ಹುನ್ನಾರ ನಡೆಯುತ್ತಿದೆ ಎಂಬ ಜಾತಿ ನಿಂದನೆ ಮಾತು ನಿರೀಕ್ಷಿತವಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura ಮರ್ಯಾದಾ ಹತ್ಯೆ: ಇಬ್ಬರಿಗೆ ಗಲ್ಲು,ಐವರಿಗೆ ಜೀವಾವಧಿ ಶಿಕ್ಷೆ
ಅನ್ಯ ರಾಜ್ಯದ ಅಪರಿಚಿತ ಶಸ್ತ್ರಧಾರಿಗಳಿಂದ ಜೀವಬೆದರಿಕೆ: ಕಾಂಗ್ರೆಸ್ ವಿಪ ಸದಸ್ಯ ಸುನೀಲಗೌಡ
Vijayapura: ಸೀಟಿಗಾಗಿ ಮಹಿಳೆಯರ ಕಿತ್ತಾಟ: ರಸ್ತೆಯಲ್ಲೇ ನಿಂತ ಬಸ್
BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ
Prajwal Case; ಪಕ್ಷಕ್ಕೆ ಮುಜುಗರ ಆಗಿರುವುದು ಸತ್ಯ: ಅರವಿಂದ ಲಿಂಬಾವಳಿ
MUST WATCH
ಹೊಸ ಸೇರ್ಪಡೆ
Hassan Pen Drive Case ರೇವಣ್ಣಗೆ ಕಿಡ್ನಾಪ್ ಕೇಸ್, ಲುಕ್ಔಟ್ ನೋಟಿಸ್ ಕಂಟಕ
HD Revanna ಫಾರ್ಮ್ ಹೌಸ್ನಲ್ಲಿ ಎಸ್ಐಟಿ ತಂಡ ಪರಿಶೀಲನೆ
Hassan Pen Drive Case; ಹೊಸ ನಿರೀಕ್ಷಣ ಜಾಮೀನು ಅರ್ಜಿ ಸಲ್ಲಿಸಿದ ರೇವಣ್ಣ
Vijayapura ಮರ್ಯಾದಾ ಹತ್ಯೆ: ಇಬ್ಬರಿಗೆ ಗಲ್ಲು,ಐವರಿಗೆ ಜೀವಾವಧಿ ಶಿಕ್ಷೆ
Dharwad; ವಾರಂಟಿ ಇಲ್ಲದ ಕಾಂಗ್ರೆಸ್ ನ ಗ್ಯಾರಂಟಿ ನಂಬಬೇಡಿ: ಅಣ್ಣಾಮಲೈ