BJP MLA: ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರನ್ನು ರಕ್ಷಿಸಿದ ಬಿಜೆಪಿ ಶಾಸಕ
Team Udayavani, Jun 1, 2023, 9:11 AM IST
ಅಹಮದಾಬಾದ್: ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವಕರನ್ನು ಶಾಸಕರೊಬ್ಬರು ರಕ್ಷಣೆ ಮಾಡಿರುವ ಘಟನೆ ಗುಜರಾತಿನ ಪಟ್ವಾ ಗ್ರಾಮದಲ್ಲಿ ನಡೆದಿದೆ.
ಬುಧವಾರ ಮಧ್ಯಾಹ್ನ(ಮೇ.31 ರಂದು) ಪಟ್ವಾ ಗ್ರಾಮದ ಬಳಿಯ ಸಮುದ್ರ ತೀರಕ್ಕೆ ಸ್ನಾನಕ್ಕೆಂದು ಕಲ್ಪೇಶ್ ಶಿಯಾಲ್, ವಿಜಯ್ ಗುಜಾರಿಯಾ, ನಿಕುಲ್ ಗುಜಾರಿಯಾ ಮತ್ತು ಜೀವನ್ ಗುಜಾರಿಯಾ ಎನ್ನುವ ಯುವಕರು ಇಳಿದಿದ್ದಾರೆ. ಈ ವೇಳೆ ಸಮುದ್ರ ಅಲೆಗೆ ಸಿಲುಕಿ ನಾಲ್ವರು ಮುಳುಗಲು ಆರಂಭಿಸಿದ್ದಾರೆ. ಮುಳುಗುತ್ತಿದ್ದಂತೆ ಯುವಕರು ಕಾಪಾಡಿ ಎಂದು ಕಿರುಚಾಡಲು ಶುರು ಮಾಡಿದ್ದಾರೆ.
ಇದೇ ವೇಳೆ ಸ್ಥಳೀಯರು ಸೇರಿದಂತೆ ಅಲ್ಲೇ ಇದ್ದ ಗುಜರಾತ್ನ ರಾಜುಲಾದ ಬಿಜೆಪಿ ಶಾಸಕರಾಗಿರುವ ಹೀರಾ ಸೋಲಂಕಿ ಅವರು ರಕ್ಷಣೆಗೆ ಧಾವಿಸಿದ್ದಾರೆ. ತಾನೊಬ್ಬ ಶಾಸಕ ಎನ್ನುವುದನ್ನು ನೋಡದೇ ನೇರವಾಗಿ ಜೀವ ರಕ್ಷಣೆಗೆ ಹೀರಾ ಸೋಲಂಕಿ ಸಮುದ್ರಕ್ಕೆ ಹಾರಿದ್ದಾರೆ.
ನಾಲ್ವರಲ್ಲಿ ಮೂವರನ್ನು ರಕ್ಷಣೆ ಮಾಡಿದ್ದು, ಒಬ್ಬ ಆಳ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಆತನ ಮೃತದೇಹ ಸಂಜೆಯ ವೇಳೆ ಪತ್ತೆಯಾಗಿದೆ.
યુવકોનો જીવ બચાવવા Rajula ના MLA હીરા સોલંકી કુદી પડ્યા દરિયામાં..! | SHORTS
અમરેલીમાં દરિયાની ખાડીમાં ન્હાવા ગયેલા ચાર યુવકો ફસાયા, ધારાસભ્ય હીરા સોલંકી પણ ઘટનાસ્થળે પહોંચી રેસ્ક્યૂમાં જોડાયા, ત્રણ યુવકોનો આબાદ બચાવ, એકની શોધખોળ ચાલુ#Rajula #hirasolanki #GTVideo pic.twitter.com/0WQSuksyMZ
— Gujarat Tak (@GujaratTak) May 31, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smriti ಇರಾನಿ ಎದುರು ಗೆಲುವು ಅಸಾಧ್ಯ ಎಂದು ಗೊತ್ತಾಗಿದೆ: ರಾಹುಲ್ ಗೆ ಬಿಜೆಪಿ ತಿರುಗೇಟು
Campaign: ಮತದಾರರನ್ನು ಸೆಳೆಯಲು ಪ್ಯಾರಾ ಗ್ಲೈಡರ್ ಮೂಲಕ ಅಭಿಯಾನ
Lok Sabha Election: ಬೃಜ್ ಭೂಷಣ್ ಸಿಂಗ್ ಬದಲಿಗೆ ಪುತ್ರನಿಗೆ ಟಿಕೆಟ್ ನೀಡಿದ ಬಿಜೆಪಿ
ಕಾಂಗ್ರೆಸ್ನಿಂದ ಮತ ಬ್ಯಾಂಕ್ ರಾಜಕಾರಣ; ನೇಹಾ ಹತ್ಯೆ ಲವ್ ಜೆಹಾದ್:ಅಮಿತ್ ಶಾ ಆರೋಪ
ಮಣಿಪುರ ಹಿಂಸಾಚಾರಕ್ಕೆ ವರ್ಷ; ಕುಕಿ ಪತ್ನಿ, ಮೈತೇಯಿ ಪತಿ ವರ್ಷದಿಂದ ಭೇಟಿ ಇಲ್ಲ!
MUST WATCH
ಹೊಸ ಸೇರ್ಪಡೆ
Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’
Prajwal Revanna ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿದ್ದರಾಮಯ್ಯ ಕಿಡಿ
Interview: “ಈ ಭಾಗದಲ್ಲಿ ಶಿಕ್ಷಣ-ಉದ್ಯೋಗಕ್ಕೆ ಹೆಚ್ಚು ಆದ್ಯತೆ ನೀಡುವುದು ಅಗತ್ಯ’
Sandalwood; ‘ಕನ್ನಡ ಮಾಧ್ಯಮ’ದಲ್ಲಿ ಹೊಸಬರ ಕನಸು
ಇಂಡಿಯಾ ಒಕ್ಕೂಟಕ್ಕೆ ನಾಯಕರೂ ಇಲ್ಲ, ನೇತೃತ್ವವೂ ಇಲ್ಲ: ಸಿ.ಟಿ ರವಿ