ಕಣಿಪುರ ಶ್ರೀಗೋಪಾಲಕೃಷ್ಣ ಕ್ಷೇತ್ರ ಜಾತ್ರೆ ಆರಂಭ
Team Udayavani, Jan 15, 2017, 3:45 AM IST
ಕುಂಬಳೆ: ಕುಂಬಳೆ ಸೀಮೆಯ ಪ್ರಥಮ ಜಾತ್ರೆಯಾದ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ಜಾತ್ರೆ ಜ. 14 ಮಕರ ಸಂಕ್ರಮಣದಂದು ವಿಧ್ಯುಕ್ತವಾಗಿ ಆರಂಭಗೊಂಡಿತು.
ಬೆಳಗ್ಗೆ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಧ್ವಜಾರೋಹಣ ನಡೆಯಿತು.
ಕಣಿಪುರ ಶ್ರೀ ಗೋಪಾಲಕೃಷ್ಣ ಸೇವಾ ಸಮಿತಿ ಮತ್ತು ಕುಂಬಳೆ ಗಟ್ಟಿ ಸೇವಾ ಸಮಾಜ ಸಂಘಟನೆಗಳ ವತಿಯಿಂದ ಭಕ್ತರ ಹೊರೆ ಕಾಣಿಕೆ ಸಮರ್ಪಣೆ ನಡೆಯಿತು. ಬಳಿಕ ತುಲಾಭಾರ, ಮಧ್ಯಾಹ್ನ ಮಹಾಪೂಜೆ, ಶ್ರೀ ಬಲಿ ಬಳಿಕ ಅನ್ನದಾನ ನಡೆಯಿತು. ಸಂಜೆ ದೀಪಾರಾಧನೆ, ನೃತ್ಯವೈವಿಧ್ಯ, ರಾತ್ರಿ ಉತ್ಸವ ಬಲಿ ರಂಗಪೂಜೆ ಜರಗಿತು.
ಕ್ಷೇತ್ರದಲ್ಲಿ ಉತ್ಸವ ಜ. 18ರ ತನಕ ಜರಗಲಿದ್ದು, ಇತಿಹಾಸ ಪ್ರಸಿದ್ಧ ಕುಂಬಳೆ ಬೆಡಿ ಜ. 17ರಂದು ರಾತ್ರಿ 9.45ರಿಂದ ನಡೆಯಲಿದೆ.