ಕೈಸೇರದ ರಾ.ಹೆ. ಕಾಮಗಾರಿ ವರದಿ
Team Udayavani, Feb 9, 2017, 3:45 AM IST
ಉಡುಪಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆ ಜಂಟಿಯಾಗಿ ಜಿಲ್ಲಾಧಿಕಾರಿಗೆ ನೀಡಬೇಕಾದ ರಾ.ಹೆ. ಕಾಮಗಾರಿ ಪ್ರಗತಿ ವರದಿಯನ್ನು ಬುಧವಾರ ನೀಡಿಲ್ಲ.
ಫೆ. 4ರಂದು ನಡೆದ ಸಭೆಯಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಅವರು ನಾಲ್ಕು ದಿನಗಳೊಳಗೆ ಶೇ. 90 ಕಾಮಗಾರಿ ಆಗಿದೆಯೆ ಎಂಬ ಕುರಿತು ವರದಿ ಸಲ್ಲಿಸಲು ಸೂಚಿಸಿದ್ದರು.
ತಡೆಯುವಂತಿಲ್ಲ: ಡಿಸಿ
“ಉದಯವಾಣಿ’ಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಟಿ. ವೆಂಕಟೇಶ್, ವರದಿ ಇನ್ನೂ ಕೈಸೇರಿಲ್ಲ. ಗುರುವಾರ ಬರಬಹುದು ಎಂದರು. ಟೋಲ್ ಸಂಗ್ರಹ ಕುರಿತು ಪ್ರಶ್ನಿಸಿದಾಗ, ನಾವು ಟೋಲ್ ಸಂಗ್ರಹ ತಡೆಯುವಂತಿಲ್ಲ. ಆದ ಕಾಮಗಾರಿಯ ಪ್ರಗತಿ ಆಧಾರದಲ್ಲಿ ಟೋಲ್ ಸಂಗ್ರಹ ಮಾಡಲಾಗುತ್ತದೆ. ಕುಂದಾಪುರದ ಕಾಮಗಾರಿ ವಿಳಂಬವಾಗಲು ಎರಡನೇ ಬಾರಿ ಪರಿಷ್ಕೃತವಾದುದು ಕಾರಣ. ಪಡುಬಿದ್ರಿಯಲ್ಲಿ ಮೊದಲು ಬೈಪಾಸ್ ಎಂದಿತ್ತು. ರಾಜ್ಯದಿಂದ ಆದ ನಿರ್ಧಾರದಂತೆ ಪ್ರಸ್ತುತ ಇರುವ ಮಾರ್ಗದಲ್ಲಿಯೇ ಮುಂದುಧಿವರಿಯುತ್ತಿದೆ. ಮಂಗಳೂರಿನಲ್ಲಿ ಟೋಲ್ ಸಂಗ್ರಹಕ್ಕೆ ಜಿಲ್ಲಾಡಳಿತ ಪೊಲೀಸ್ ರಕ್ಷಣೆ ನೀಡಿಯಾಗಿದೆ. ನಾವು ಪೊಲೀಸ್ ರಕ್ಷಣೆ ನೀಡಿದ ಬಳಿಕ ಆರಂಭವಾಗಲಿದೆ ಎಂದರು.
ಗುಂಡ್ಮಿ ಸಾಸ್ತಾನ ಮತ್ತು ಪಡುಬಿದ್ರಿಯಲ್ಲಿ ಟೋಲ್ಗೇಟ್ನಲ್ಲಿ ಬುಧವಾರ ಟೋಲ್ ಸಂಗ್ರಹವಾಗಲಿಲ್ಲ. ಆದರೆ ಸ್ಥಳೀಯ ನಾಗರಿಕ ಸಮಿತಿಯವರು ಟೋಲ್ ಸಂಗ್ರಹದ ವಿರುದ್ಧ ಗುರುವಾರ ಸಂಜೆ 5ಕ್ಕೆ ಸಾಸ್ತಾನ ಶಿವಕೃಪಾ ಸಭಾಭವನದಲ್ಲಿ ಸಭೆ ಕರೆದಿದ್ದಾರೆ. ಪಡುಬಿದ್ರಿಯಲ್ಲಿ ಬುಧವಾರ ಪ್ರಯೋಗಾರ್ಥ ಎರಡು ಮತ್ತು ಮೂರು ಚಕ್ರದ ವಾಹನಗಳನ್ನು ಕೊನೆಯ ಪಥದಲ್ಲಿ ಚಲಿಸಲು ಸೂಚಿಸಿದ್ದಾರೆ.
ತಲಪಾಡಿಯಲ್ಲಿ ಟೋಲ್ ಸಂಗ್ರಹ ಆರಂಭವಾದ ಸುದ್ದಿ ಕೇಳುತ್ತಲೇ ಪಡುಬಿದ್ರಿಯಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅನ್ಯ ರಾಜ್ಯದ ಅಪರಿಚಿತ ಶಸ್ತ್ರಧಾರಿಗಳಿಂದ ಜೀವಬೆದರಿಕೆ: ಕಾಂಗ್ರೆಸ್ ವಿಪ ಸದಸ್ಯ ಸುನೀಲಗೌಡ
Stock Market: ಆರಂಭಿಕ ವಹಿವಾಟಿನಲ್ಲಿ ಮುಗ್ಗರಿಸಿದ ಷೇರುಪೇಟೆ ಸೆನ್ಸೆಕ್ಸ್; ಭಾರೀ ನಷ್ಟ
Pendrive Case; ನಿರೀಕ್ಷಣಾ ಜಾಮೀನು ಅರ್ಜಿ ವಾಪಾಸ್ ಪಡೆದ ರೇವಣ್ಣ
Kantara-Chapter 1: 600 ಮಂದಿ ಬಡಗಿಗಳು, ಕಳರಿಪಯಟ್ಟು ಕಲಾವಿದರು; ಬೃಹತ್ ಸೆಟ್ ನಿರ್ಮಾಣ
Bengaluru: ವಿವಾಹಕ್ಕೆ ಒಪ್ಪದ ಮಹಿಳೆ ಮನೆಗೆ ಬೆಂಕಿ ಹಚ್ಚಿದ