ನಿಟ್ಟೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ: ಯಾವ ದಿನ ಯಾವ ಚಿತ್ರಗಳು…?
Team Udayavani, Apr 23, 2017, 3:38 PM IST
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾಲಯ ಏಪ್ರಿಲ್ 24 ರಿಂದ 4 ದಿನಗಳ ಕಾಲ ‘ನಿಟ್ಟೆ ಅಂತರಾಷ್ಟ್ರೀಯ ಸಿನಿಮೋತ್ಸವ(NIFF)’ ಆಯೋಜಿಸಿದೆ. ಚಲನಚಿತ್ರೋತ್ಸವವು ಏಪ್ರಿಲ್ 24-27 ರವರೆಗೆ ಮಂಗಳೂರಿನ ‘ಭರತ್ ಸಿನಿಮಾಸ್’ ಭರತ್ ಮಾಲ್ನಲ್ಲಿ ಜರುಗಲಿದೆ. ಸುನಿಲ್ ಸುಖ್ತಂಕರ್, ‘ಕಾಸವ್'(2016) ಮರಾಠಿ ಚಿತ್ರದ ನಿರ್ದೇಶಕರು ‘ನಿಟ್ಟೆ ಅಂತರಾಷ್ಟ್ರೀಯ ಸಿನಿಮೋತ್ಸವ’ದ ಉದ್ಘಾಟನೆ ಮಾಡಲಿದ್ದು, 64 ನೇ ಗೋಲ್ಡನ್ ಲೋಟಸ್ ಪ್ರಶಸ್ತಿ ಪಡೆದ ಅತ್ಯುತ್ತಮ ಚಿತ್ರ ‘ಕಾಸವ್’ ಪ್ರದರ್ಶನದ ಮೂಲಕ ಸಿನಿಮೋತ್ಸವ ಆರಂಭವಾಗಲಿದೆ. ಚಲನಚಿತ್ರೋತ್ಸವದಲ್ಲಿ 5 ದೇಶಗಳ ಒಟ್ಟಾರೆ 55 ಸಿನಿಮಾಗಳು ಮತ್ತು ಭಾರತದ ಹಲವು ಭಾಷೆಗಳ ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.
ಇನ್ನೂ ಸಿನಿಮೋತ್ಸವದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರುಗಳಾದ ಪಿ.ಎನ್.ರಾಮಚಂದ್ರ, ಅನಿರುದ್ಧ ರಾಯ್ ಚೌಧರಿ, ಬಿಜಯ ಜೇನ, ಪ್ರದಿಪ್ತ ಭಟ್ಟಾಚಾರ್ಯ ಮತ್ತು ಸಿನಿಮಾ ಕಲಾವಿದರಾದ ಮನೋಹರ್, ಶೃಂಗ, ಪ್ರತಿಕ್ ಗಾಂಧಿ ಹರಿಸ್ರವ, ಹೇಮಂತ್ ಉಪಸ್ಥಿತಿ ಇರಲಿದ್ದಾರೆ. ಚಿತ್ರ ಪ್ರದರ್ಶನ ನಂತರ ಸಂವಾದ ಕಾರ್ಯಕ್ರಮವು ಇರಲಿದ್ದು, ಚಿತ್ರಕಥೆ ಬರವಣಿಗೆ ಕಾರ್ಯಗಾರ ಸಹ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಗಿದೆ.
ಏಪ್ರಿಲ್ 24 ರಂದು ಪ್ರದರ್ಶನವಾಗುವ ಚಿತ್ರಗಳು ‘ಅಂಟು ದಿ ಡಸ್ಕ್’ (ಮಲಯಾಳಂ), ‘ಜೀರೋ ಮೇಡ್ ಇನ್ ಇಂಡಿಯಾ’ (ಕನ್ನಡ), ‘ಕೆಂಡಸಂಪಿಗೆ'(ಕನ್ನಡ), ‘ಹರಿಕಥಾ ಪ್ರಸಂಗ’ (ಕನ್ನಡ), ‘ಹರಿವು'(ಕನ್ನಡ), ‘ಮಸಾನ್’ (ಹಿಂದಿ), ‘ಸೋಗಿಜ'(ಇಂಡೋನೆಷಿಯಾ ಚಿತ್ರ), Visaranai (Tamil), ‘ಹಾಲ್ ಇ-ಕಂಗಾಲ್'(ಹಿಂದಿ), Qissa(ಪಂಜಾಬಿ).
ಏಪ್ರಿಲ್ 25 ರಂದು ಪ್ರದರ್ಶನವಾಗುವ ಚಿತ್ರಗಳು ಕಲಿಯಚನ್'(ಮಲಯಾಳಂ), ‘ಧರವಿ'(ಹಿಂದಿ), ‘ಪಿಂಕ್'(ಹಿಂದಿ), ‘ರಾಂಗ್ ಸೈಡ್ ರಾಜು(ಗುಜರಾತಿ), ‘Bakita Byaktigato'(ಬೆಂಗಾಲಿ), ‘Sanctuary'(ಜರ್ಮನಿ), ‘ಕ್ವೀನ್'(ಹಿಂದಿ), ‘Teenkahon'(ಬೆಂಗಾಲಿ), ‘ಜಾನೆ ಭಿ ದೊ ಯಾರನ್'(ಹಿಂದಿ).
ಏಪ್ರಿಲ್ 26 ರಂದು ಪ್ರದರ್ಶನವಾಗುವ ಚಿತ್ರಗಳು ‘ರೆಡ್ ಬಟರ್ ಫ್ಲೈ ಡ್ರೀಮ್'(ಶ್ರೀಲಂಕ ಚಿತ್ರ೦, ‘ಮದಿಪು'(ತುಳು), ರೈಲ್ವೇ ಚಿಲ್ಡ್ರೆನ್'(ಕನ್ನಡ), ‘ರಾಮಾ ರಾಮಾ ರೇ'(ಕನ್ನಡ), ‘ಅಮರಾವತಿ'(ಕನ್ನಡ), ‘ಹರಿಕಥಾ ಪ್ರಸಂಗ'(ಕನ್ನಡ), ‘ಶುದ್ಧ'(ತುಳು), ‘ಅಭಾಸ್'(ಓಡಿಯಾ), ‘ಪರೋಕ್ಷ್'(ತುಳು), ‘ವೆಂಟಿಲೇಟರ್'(ಮರಾಠಿ).
ಏಪ್ರಿಲ್ 27 ರಂದು ಪ್ರದರ್ಶನವಾಗುವ ಚಿತ್ರಗಳು ‘ಜಟ್ಟಾ'(ಕನ್ನಡ), ‘ಡೆಸ್ಟಿನಿ'(ಚೀನಾ), ‘ರಾಮನ್ ರಾಘವ್ 2.0(ಹಿಂದಿ), ‘Antaheen'(ಬೆಂಗಾಲಿ), ‘ರೈಲ್ವೇ ಚಿಲ್ಡ್ರೆನ್'(ಕನ್ನಡ), ’24 ವೀಕ್ಸ್'(ಜರ್ಮನಿ), ‘ಅಗ್ಲಿ'(ಹಿಂದಿ), ‘ದಾಳಿ'(ಕನ್ನಡ). ‘ರಾಮಾ ರಾಮಾ ರೇ'(ಕನ್ನಡ), ‘ಅಮರಾವತಿ'(ಕನ್ನಡ) ಮರುಪ್ರದರ್ಶನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ; ನಿರ್ವಹಣೆಯಿಲ್ಲದೆ ಸೊರಗಿದ ಮಲ್ಲಿಕಟ್ಟೆ ಪಾರ್ಕ್
ರಂಗ ಸಂಗಾತಿ 16ನೇ ವಾರ್ಷಿಕೋತ್ಸವ; ರಂಗಭಾಸ್ಕರ ಪ್ರಶಸ್ತಿಗೆ ನಟ ನವೀನ್ ಪಡೀಲ್ ಆಯ್ಕೆ
ಆಪತ್ಕಾಲಕ್ಕೆ ಆತಂಕ; “ರಕ್ತ’ ಅಭಾವ- ಬೇಡಿಕೆ ವಿಪರೀತ ಏರಿಕೆ!
Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !
Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!
MUST WATCH
ಹೊಸ ಸೇರ್ಪಡೆ
ಮಣಿಪುರ ಹಿಂಸಾಚಾರಕ್ಕೆ ವರ್ಷ; ಕುಕಿ ಪತ್ನಿ, ಮೈತೇಯಿ ಪತಿ ವರ್ಷದಿಂದ ಭೇಟಿ ಇಲ್ಲ!
Davanagere; ಗಾಯಿತ್ರಿ ಸಿದ್ದೇಶ್ವರ ಪರ ಯದುವೀರ್ ಒಡೆಯರ್ ರೋಡ್ ಶೋ
KEA ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ವಿರುದ್ದ ತನಿಖೆಗೆ ಆಗ್ರಹ
ಅನ್ಯ ರಾಜ್ಯದ ಅಪರಿಚಿತ ಶಸ್ತ್ರಧಾರಿಗಳಿಂದ ಜೀವಬೆದರಿಕೆ: ಕಾಂಗ್ರೆಸ್ ವಿಪ ಸದಸ್ಯ ಸುನೀಲಗೌಡ
Stock Market: ಆರಂಭಿಕ ವಹಿವಾಟಿನಲ್ಲಿ ಮುಗ್ಗರಿಸಿದ ಷೇರುಪೇಟೆ ಸೆನ್ಸೆಕ್ಸ್; ಭಾರೀ ನಷ್ಟ