ಕಾರ್ಮಿಕರ ಉದ್ಯೋಗ ಕಸಿದುಕೊಳ್ಳದಿರಲು ಆಗ್ರಹ
Team Udayavani, Jul 27, 2017, 1:20 PM IST
ಸಂಡೂರು: ತಾಲೂಕಿನಾದ್ಯಂತ ಇರುವ ಚಾಲಕರು, ಕ್ಲಿನರ್ಗಳು, ಗ್ಯಾರೇಜ್ ಕೆಲಸಗಾರರು ಅದಿರು ಸಾಗಾಟವನ್ನೇ ನಂಬಿಕೊಂಡು ಬದುಕುತ್ತಿದ್ದು, ಈಗ ಏಕಾಏಕಿ ಕ್ವೇಯರ್ ಬ್ಯಾಲ್ಟ್ ಹಾಕುವ ಮೂಲಕ ಸಾವಿರಾರು ಕಾರ್ಮಿಕರ
ಉದ್ಯೋಗ ಕಸಿದುಕೊಳ್ಳುವ ಕಾರ್ಯ ನಡೆಯುತ್ತಿದ್ದು ತಕ್ಷಣ ನಿಲ್ಲಿಸಬೇಕೆಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಮಲ್ಲಿಕಾರ್ಜುನ ಒತ್ತಾಯಿಸಿದರು.
ಅವರು ಪಟ್ಟಣದಲ್ಲಿ ತಾಲೂಕು ಲಾರಿ ಮಾಲೀಕರು, ರೈತ ಸಂಘದವರು, ಕರವೇ, ದಸಂಸ, ಹಸಿರುಸೇನೆ, ಆಟೋ ಮಾಲೀಕರ ಸಂಘ, ಪ್ರಜಾಸೇನೆ ಹಾಗೂ ಇತರ ಸಂಘ ಸಂಸ್ಥೆಗಳು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ತಾಲೂಕಿನಾದ್ಯಂತ ಗಣಿಯಿಂದ ಬದುಕುತ್ತಿರುವವರಿಗೆ ಉದ್ಯೋಗ ತಪ್ಪುತ್ತಿದ್ದು ಎಲ್ಲಾ ರೀತಿಯಲ್ಲಿ ಯಾಂತ್ರೀಕರಣ ಮಾಡುತ್ತಿದ್ದಾರೆ. ಕನ್ವೇಯರ್ ಬೆಲ್ಟ್ ಹಾಕುತ್ತಿದ್ದು ಇದರಿಂದ ಸಾವಿರಾರು ಕುಟುಂಬಗಳು
ಬೀದಿಪಾಲಾಗುತ್ತಿದ್ದು ಇವುಗಳನ್ನು ರಕ್ಷಿಸುವ ಕಾರ್ಯ ಮಾಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಸಂಘಗಳ ಅಧ್ಯಕ್ಷರಾದ ಯರ್ರಿಸ್ವಾಮಿ, ಕೊಟ್ರೇಶ್, ಹೆಗಡೆ, ಡಿ.ಎಸ್. ಬಾಬು, ಪರಶುರಾಮ, ಶಿವಲಿಂಗಪ್ಪ, ಕೆ.ಆರ್.
ಕುಮಾರಸ್ವಾಮಿ, ಪಿ.ರಾಜು, ಪಿ.ಜಯಣ್ಣ, ಸತೀಶ್, ಭಾಷಾ, ಪಿ.ಎಸ್. ಧರ್ಮಾನಾಯ್ಕ, ಮಂಜು, ಬಿ.ಎಂ. ಉಜ್ಜಿನಯ್ಯ, ಧರ್ಮಾಪುರ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಎಸ್.ಸಿದ್ದಪ್ಪ, ಖಾಸೀಂ, ಪ್ರಕಾಶ್, ಬದ್ರುದ್ದೀನ್, ಚಿನ್ನಪ್ಪ, ಸಿದ್ದಪ್ಪ, ಮಲ್ಲಿಕಾರ್ಜುನ, ಆಟೋ ಮಾಲೀಕರ ಅಧ್ಯಕ್ಷರು ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ದಲಿತಕೇರಿಯಲ್ಲಿ ಒಡಾಡಿ ಶ್ರೀರಾಮುಲು ಪರ ಮತಯಾಚನೆ ಮಾಡಿದ ಯದುವೀರ್ ಒಡೆಯರ್
ಕೇಂದ್ರದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ದನಿ ಎತ್ತಲು ಕಾಂಗ್ರೆಸ್ ಗೆಲ್ಲಿಸಿ: ರಾಮಲಿಂಗಾರೆಡ್ಡಿ
ಎಸಿ ಗ್ಯಾಸ್ ಸ್ಫೋಟ; ಐವರಿಗೆ ಗಾಯ, ಒಬ್ಬರ ಸ್ಥಿತಿ ಗಂಭೀರ
HDK ಹೇಳುತ್ತಿದ್ದದ್ದು ಪ್ರಜ್ವಲ್ ಪೆನ್ಡ್ರೈವ್ ಇರಬೇಕು: ಜಮೀರ್
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
MUST WATCH
ಹೊಸ ಸೇರ್ಪಡೆ
ಗದಗ: ಸಂವಿಧಾನ ಧರ್ಮಗ್ರಂಥ ಎಂದವರು ಮೋದಿ- ಬೊಮ್ಮಾಯಿ
ಚಿನ್ನದ ನಾಡಿನ ಕಲಾವಿದೆ ವಿದ್ಯಾಶ್ರೀ ಪ್ರತಿಭೆ ಅನಾವರಣ-ನೃತ್ಯಗಂಗಾ ಪ್ರದರ್ಶನ
BJP ಕುರುಬ ಸಮುದಾಯಕ್ಕೆ ಒಂದೂ ಟಿಕೆಟ್ ಕೊಟ್ಟಿಲ್ಲ: ಸಿಎಂ ಸಿದ್ದರಾಮಯ್ಯ ಕಿಡಿ
ಅಮಿತಾಭ್ ಟು ಶಾರುಖ್: ಇಂದು ಕೋಟಿ ಕುಳರಾದ ಈ ನಟರ ಮೊದಲ ಸಂಪಾದನೆ ಎಷ್ಟಾಗಿತ್ತು ಗೊತ್ತಾ?
Panaji: ದಾರಿ ಮಧ್ಯೆ ಹೊತ್ತಿ ಉರಿದ ಟ್ರಕ್… 32 ಲಕ್ಷ ಮೌಲ್ಯದ ಸೊತ್ತು ನಷ್ಟ