ಕಾಲುವೆ ದಡ ಕೊಚ್ಚಿ ನೀರು ಪೋಲು: ಕ್ರಮಕ್ಕೆ ಆಗ್ರಹ
Team Udayavani, Aug 28, 2017, 2:55 PM IST
ಹುಣಸಗಿ: ಸಮೀಪದ ಎಚ್ಬಿಸಿ 2ರ ಕಾಲುವೆ ಅಡಿಯಲ್ಲಿನ ವಿತರಣಾ ಕಾಲುವೆ ಡಿ. 2ರ ನೀರು ಪೋಲಾಗುತ್ತಿದ್ದು, ಕಾಲುವೆ ಪಕ್ಕದ ಹೊಲಗಳಿಗೆ ನೀರು ನುಗ್ಗಿ ಕಾಲುವೆ ಬದಿಯ ಸೇವಾ ರಸ್ತೆ ಕೊಚ್ಚಿ ಹೋಗಿದೆ ಎಂದು ರಾಜನಕೋಳೂರ ಗ್ರಾಮದ ಬಿ.ಸಿ. ಪಾಟೀಲ ತಿಳಿಸಿದ್ದಾರೆ. ಒಂದೆಡೆ ನೀರಿಗಾಗಿ ರೈತರು ಹೋರಾಟ ಮಾಡುತ್ತಿದ್ದು, ನೀರು ವ್ಯರ್ಥವಾಗುವುದನ್ನು ತಡೆಯುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಬೇಕಿದೆ ಎಂದರು. ರಾಜನಕೋಳುರ ಗ್ರಾಮದಿಂದ ರಾಜವಾಳ, ಕಡದರಾಳ ಸೇರಿದಂತೆ ಇತರ ಗ್ರಾಮಗಳ ಜಮೀನುಗಳಿಗೆ ನೀರು ಒದಗಿಸುವ ಕಾಲುವೆ ಇದಾಗಿದ್ದು, ಈ ಕಾಲುವೆ ಕೊಡೇಕಲ್ಲ ಉಪವಿಭಾಗದಡಿ ಬರುತ್ತದೆ. ಶೀಘ್ರ ಅಧಿಕಾರಿಗಳು ಭೇಟಿ ನೀಡಿ ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ. ರಸ್ತೆಯ ಮಾರ್ಗವಾಗಿ ಹೊಲಕ್ಕೆ ತೆರಳುವ ರೈತರು ತೊಂದರೆ ಪಡುವಂತಾಗಿದೆ. ಕೂಡಲೇ ಅಧಿಕಾರಿಗಳು ಭೇಟಿ ನೀಡಿ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ
Prajadhwani 2; ಯಾದಗಿರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರ ಸಮಾವೇಶ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು