ಸಿನಿಮಾ ಮತ್ತು ಸಿನಿಮಾ ಮಾತ್ರ!


Team Udayavani, Sep 26, 2017, 12:37 PM IST

26-ZZ-12.jpg

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ “ಪತ್ತೇದಾರಿ ಪ್ರತಿಭಾ’ ಧಾರಾವಾಹಿಯಲ್ಲಿ ಅದೊಂದು ದಿನ ಮೇಘನಾ ಗಾಂವ್ಕರ್‌ ಕಾಣಿಸಿಕೊಂಡುಬಿಟ್ಟರು. ಶುರುವಾಯ್ತು ನೋಡಿ, ಒಂದರ ಹಿಂದೊಂದು ಸುದ್ದಿಗಳು. ಮೇಘನಾಗೆ ಅವಕಾಶವಿಲ್ಲ ಎಂದು ಕಿರುತೆರೆಗೆ ಹೋದರಂತೆ, ಅವರು ಮತ್ತೆ ಚಿತ್ರಗಳಲ್ಲಿ ನಟಿಸುವುದಿಲ್ಲವಂತೆ, ಅದಂತೆ, ಇದಂತೆ … ಎಂದು ಒಂದರ ಹಿಂದೊಂದು ಸುದ್ದಿಗಳು ಬಂದವು.

ಕೊನೆಗೆ ಮೇಘನಾ ಟ್ವೀಟ್‌ ಮಾಡುವವರೆಗೂ, ಈ ಅಂತೆ-ಕಂತೆಗಳು ನಿಲ್ಲಲಿಲ್ಲ. ಖುದ್ದು ಮೇಘನಾ ಟ್ವೀಟ್‌ ಮಾಡಿ, ತಾವು ಧಾರಾವಾಹಿಯಲ್ಲಿ ನಟಿಸುವುದಕ್ಕೆ ನವೀನ್‌ ಕೃಷ್ಣ ಅವರ ಸ್ನೇಹವೇ ಕಾರಣ, ಅವರು ಬಂದು ಕೇಳಿದ್ದಕ್ಕೆ ಧಾರಾವಾಹಿಯಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡೆ ಮತ್ತು ತನ್ನ ಮೊದಲ ಆದ್ಯತೆ ಯಾವುತ್ತೂ ಸಿನಿಮಾಗೆ ಎಂದು ಹೇಳಿಕೊಳ್ಳುವವರೆಗೂ ಇವೆಲ್ಲಾ ಮುಂದುವರೆದಿತ್ತು. ಈ ಮಧ್ಯೆ ನವೀನ್‌ ಕೃಷ್ಣ ಸಹ ಟ್ವೀಟ್‌ ಮಾಡಿ, ನನ್ನ ಕರೆಗೆ ಓಗುಟ್ಟು ಅವರು ನಟಿಸುವುದಕ್ಕೆ ಒಪ್ಪಿಕೊಂಡರೇ ಹೊರತು, ಬೇರೇನೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲಿಗೆ ಸಿನಿಮಾದಿಂದ ರಿಟೈರ್‌ ಆಗುವ ಮೇಘನಾ ಅವರ ಸುದ್ದಿ ಕ್ರಮೇಣ ಕಡಿಮೆಯಾಯಿತು.

ಇಷ್ಟಕ್ಕೂ ಯಾಕೆ ಇಂಥದ್ದೊಂದು ಸುದ್ದಿ ಹುಟ್ಟಿಕೊಂಡಿತು ಎಂಬುದಕ್ಕೂ ಕಾರಣವಿದ್ದೇ ಇದೆ. ಸುಖಾಸುಮ್ಮನೆ ಈ ರೀತಿ ಆಗುವುದಿಲ್ಲ. ಅದೇನೆಂದರೆ, “ಚಾರ್‌ಮಿನಾರ್‌’ ಚಿತ್ರದ ಯಶಸ್ಸಿನ ನಂತರವೂ, ಮೇಘನಾ ಒಪ್ಪಿದ್ದು ಮತ್ತು ನಟಿಸಿದ್ದು ಒಂದೇ ಒಂದು ಚಿತ್ರದಲ್ಲಿ. ಅದೂ “ಸಿಂಪಲ್ಲಾಗಿನ್ನೊಂದ್‌ ಲವ್‌ಸ್ಟೋರಿ’ ಮಾತ್ರ. ಮಿಕ್ಕಂತೆ ಮೇಘನಾ ಯಾವುದೇ ಚಿತ್ರದಲ್ಲೂ ನಟಿಸಿಲ್ಲ. ಹಾಗಾಗಿ ಮೇಘನಾಗೆ ಅವಕಾಶಗಳು ಕಾಡುತ್ತಿರಬಹುದು ಎಂಬ ಪ್ರಶ್ನೆಗಳು ಮೊದಲು ಶುರುವಾದವು. ಯಾವಾಗ ಅವರು “ಪತ್ತೇದಾರಿ ಪ್ರತಿಭಾ’ ಚಿತ್ರದಲ್ಲಿ ನಟಿಸಿದರೋ, ಅವಕಾಶ ಸಿಗುತ್ತಿಲ್ಲವಾದ್ದರಿಂದಲೇ ಅವರು ಕಿರುತೆರೆಗೆ ಹೋದರು ಎನ್ನುವಂತಹ ಸುದ್ದಿಗಳು ಹುಟ್ಟಿಕೊಂಡವು. ಕೊನೆಗೆ ಇದಕ್ಕೆಲ್ಲಾ ಉತ್ತರಿಸುವ ಮೂಲಕ, ಇಡೀ ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾರೆ.

ಇನ್ನು ಮೇಘನಾ ಖುಷಿಯಾಗಿದ್ದಾರೆ. ಕೆಲವು ತಿಂಗಳುಗಳ ಹಿಂದಷ್ಟೇ ಕಾಶ್ಮೀರಕ್ಕೆ ಹೋಗಿ ತಣ್ಣಗೆ ವಾಪಸ್ಸು ಬಂದಿದ್ದಾರೆ. ಮೇಘನಾ ಕಾಶ್ಮೀರಕ್ಕೆ ಹೋಗಿದ್ದು ಶೂಟಿಂಗ್‌ಗಲ್ಲ. ಅದಕ್ಕೆ ಬೇರೆಯದೇ ಕಾರಣವಿದೆ. ಮೇಘನಾ ಅಲ್ಲಿಗೆ ಹೋಗುವುದಕ್ಕೆ ಮುಖ್ಯ ಕಾರಣ ಹುಟ್ಟುಹಬ್ಬ. ಕಳೆದ ಕೆಲವು ವರ್ಷಗಳಿಂದ, ಪ್ರತಿ ವರ್ಷ ತಮ್ಮ ಹುಟ್ಟುಹಬ್ಬವನ್ನು ಮನೆಯಿಂದ ಬೇರೆ ಸ್ಥಳದಲ್ಲಿ ಆಚರಿಸಿಕೊಳ್ಳುವ ಸಂಪ್ರದಾಯವನ್ನು ಮೇಘನಾ ಹುಟ್ಟುಹಾಕಿದ್ದಾರೆ. ಅದರಂತೆ ಅವರು ಈ ಬಾರಿ ಕಾಶ್ಮೀರದ ಪ್ರವಾಸಕ್ಕೆ ಹೋಗಿ ಬಂದಿದ್ದಾರೆ. ಅಲ್ಲೇ ತಮ್ಮ ಫ್ಯಾಮಿಲಿಯ ಜೊತೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಬಂಾªರೆ.

ಸರಿ ಮುಂದೇನು ಎಂಬ ಪ್ರಶ್ನೆ ಎಲ್ಲರಿಗೂ ಇದ್ದಂತೆ, ಅವರಿಗೂ ಇದೆ. ಅದಕ್ಕೆ ಕಾದು ನೋಡುವುದಕ್ಕೆ ಅವರು ತೀರ್ಮಾನಿಸಿದ್ದಾರೆ. ಒಳ್ಳೆಯ ಕಥೆ ಬಂದ ತಕ್ಷಣ, ಮೇಘನಾ ಇನ್ನೊಂದು ಸಿನಿಮಾ ಒಪ್ಪಿಕೊಳ್ಳುತ್ತಾರಂತೆ. ಆದರೆ, ಆ ಇನ್ನೊಂದು ಒಳ್ಳೆಯ ಕಥೆ ಇರುವ ಸಿನಿಮಾ ಯಾವಾಗ ಬರುತ್ತದೆ ಎಂಬುದು ಮಾತ್ರ ಸದ್ಯಕ್ಕೆ ರಹಸ್ಯವಾಗಿಯೇ ಉಳಿದಿದೆ.

ಟಾಪ್ ನ್ಯೂಸ್

8

ಅಮಿತಾಭ್‌ ಟು ಶಾರುಖ್:‌ ಇಂದು ಕೋಟಿ ಕುಳರಾದ ಈ ನಟರ ಮೊದಲ ಸಂಪಾದನೆ ಎಷ್ಟಾಗಿತ್ತು ಗೊತ್ತಾ?

Panaji: ದಾರಿ ಮಧ್ಯೆ ಹೊತ್ತಿ ಉರಿದ ಟ್ರಕ್… 32 ಲಕ್ಷ ಮೌಲ್ಯದ ಸೊತ್ತು ನಷ್ಟ

Panaji: ದಾರಿ ಮಧ್ಯೆ ಹೊತ್ತಿ ಉರಿದ ಟ್ರಕ್… 32 ಲಕ್ಷ ಮೌಲ್ಯದ ಸೊತ್ತು ನಷ್ಟ

Belagavi; ಭಿಕ್ಷೆ ರೀತಿಯಲ್ಲಿ ಸಿಎಂ ಬರ ಪರಿಹಾರ ನೀಡಿದ್ದಾರೆ: ವಿಜಯೇಂದ್ರ ಆಕ್ರೋಶ

Belagavi; ಭಿಕ್ಷೆ ರೀತಿಯಲ್ಲಿ ಸಿಎಂ ಬರ ಪರಿಹಾರ ನೀಡಿದ್ದಾರೆ: ವಿಜಯೇಂದ್ರ ಆಕ್ರೋಶ

13

Tollywood: ʼಫ್ಯಾಮಿಲಿ ಸ್ಟಾರ್‌ʼ ಸೋಲಿನ ಬಳಿಕ ಹೊಸ ಸಿನಿಮಾ ಅನೌನ್ಸ್‌ ಮಾಡಿದ ದೇವರಕೊಂಡ

11-

Love and Care: ಪ್ರೀತಿ ಹಿಂದಿರುಗಿಸಲು ಅಂಜಿಕೆಯೇಕೆ…

Prajwal R case: ಪ್ರಜ್ವಲ್‌ ವಿರುದ್ಧ ಬ್ಲೂ ಕಾರ್ನರ್‌ ನೋಟಿಸ್‌ ಜಾರಿಗೆ SIT ಮನವಿ: ಏನಿದು?

Prajwal R case: ಪ್ರಜ್ವಲ್‌ ವಿರುದ್ಧ ಬ್ಲೂ ಕಾರ್ನರ್‌ ನೋಟಿಸ್‌ ಜಾರಿಗೆ SIT ಮನವಿ: ಏನಿದು?

9-uv-fusion-2

Eurasian hoopoe: ಚಂದ್ರ ಮಕುಟದ ಸ್ವಪ್ನ ಸುಂದರಿ…..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaatera; ಬರಹಗಾರರಿಗೆ ರಾಕ್‌ಲೈನ್‌ ಕಾರು ಗಿಫ್ಟ್

Kaatera; ಬರಹಗಾರರಿಗೆ ರಾಕ್‌ಲೈನ್‌ ಕಾರು ಗಿಫ್ಟ್

Sandalwood; ‘ಕನ್ನಡ ಮಾಧ್ಯಮ’ದಲ್ಲಿ ಹೊಸಬರ ಕನಸು

Sandalwood; ‘ಕನ್ನಡ ಮಾಧ್ಯಮ’ದಲ್ಲಿ ಹೊಸಬರ ಕನಸು

Rishi; ರುದ್ರ ಗರುಡ ಪುರಾಣ ಫಸ್ಟ್ ಲುಕ್ ಬಿಡುಗಡೆ

Rishi; ರುದ್ರ ಗರುಡ ಪುರಾಣ ಫಸ್ಟ್ ಲುಕ್ ಬಿಡುಗಡೆ

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

Kantara-Chapter 1: 600 ಮಂದಿ ಬಡಗಿಗಳು, ಕಳರಿಪಯಟ್ಟು ಕಲಾವಿದರು; ಬೃಹತ್ ಸೆಟ್ ನಿರ್ಮಾಣ

Kantara-Chapter 1: 600 ಮಂದಿ ಬಡಗಿಗಳು, ಕಳರಿಪಯಟ್ಟು ಕಲಾವಿದರು; ಬೃಹತ್ ಸೆಟ್ ನಿರ್ಮಾಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

8

ಅಮಿತಾಭ್‌ ಟು ಶಾರುಖ್:‌ ಇಂದು ಕೋಟಿ ಕುಳರಾದ ಈ ನಟರ ಮೊದಲ ಸಂಪಾದನೆ ಎಷ್ಟಾಗಿತ್ತು ಗೊತ್ತಾ?

Panaji: ದಾರಿ ಮಧ್ಯೆ ಹೊತ್ತಿ ಉರಿದ ಟ್ರಕ್… 32 ಲಕ್ಷ ಮೌಲ್ಯದ ಸೊತ್ತು ನಷ್ಟ

Panaji: ದಾರಿ ಮಧ್ಯೆ ಹೊತ್ತಿ ಉರಿದ ಟ್ರಕ್… 32 ಲಕ್ಷ ಮೌಲ್ಯದ ಸೊತ್ತು ನಷ್ಟ

Belagavi; ಭಿಕ್ಷೆ ರೀತಿಯಲ್ಲಿ ಸಿಎಂ ಬರ ಪರಿಹಾರ ನೀಡಿದ್ದಾರೆ: ವಿಜಯೇಂದ್ರ ಆಕ್ರೋಶ

Belagavi; ಭಿಕ್ಷೆ ರೀತಿಯಲ್ಲಿ ಸಿಎಂ ಬರ ಪರಿಹಾರ ನೀಡಿದ್ದಾರೆ: ವಿಜಯೇಂದ್ರ ಆಕ್ರೋಶ

13

Tollywood: ʼಫ್ಯಾಮಿಲಿ ಸ್ಟಾರ್‌ʼ ಸೋಲಿನ ಬಳಿಕ ಹೊಸ ಸಿನಿಮಾ ಅನೌನ್ಸ್‌ ಮಾಡಿದ ದೇವರಕೊಂಡ

ಹುನಗುಂದ: ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ

ಹುನಗುಂದ: ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.