ಅಂಧ ಕಲಾವಿದರ ಸಂಗೀತ ಕಾರ್ಯಕ್ರಮ
Team Udayavani, Jan 1, 2018, 12:03 PM IST
ಮೂಲ್ಕಿ : ನಾವು ಅಂಧರಾಗಿರಬಹುದು ನಮಗೆ ನಿಮ್ಮ ಅನುಕಂಪ ಬೇಡ ನಮ್ಮ ಸಾಮರ್ಥ್ಯಕ್ಕೆ ಅನುಗುಣವಾದ
ಅವಕಾಶ ಕೊಡಿ ನಾವು ನಿರುದ್ಯೋಗಿಗಳು ನಮಗೆ ಉದ್ಯೋಗ ಕೊಟ್ಟು ಎಲ್ಲರಂತೆ ಬದುಕುವ ದಾರಿ ಮಾಡಿ ಕೊಡಿ ಎಂದು ಶೃಂಗೇರಿ ಕಾಂಚಿನಗರ ಶ್ರೀ ಶಾರದಾ ಅಂಧರ ಗೀತಾ ಗಾಯನ ಕಲಾ ಸಂಘದ ಅಧ್ಯಕ್ಷ ಯೋಗೀಶ್ ಹೇಳಿದರು.
ಅವರು ಕಾರ್ನಾಡು ಜಂಕ್ಷನ್ನಲ್ಲಿ ಸುಮಾರು ಮೂರು ಗಂಟೆಗಳ ಕಾಲ ತಂಡದ ಅಂಧ ಕಲಾವಿದರ ಮೂಲಕ ನಡೆದ ಸಂಗೀತ ಕಾರ್ಯಕ್ರಮದ ಕೊನೆಯಲ್ಲಿ ಸಹಕರಿಸಿದವರನ್ನು ಅಭಿನಂದಿಸಿ ಮಾತನಾಡಿದರು.
ಸಂಘದಲ್ಲಿ 15 ಮಂದಿ ಸದಸ್ಯರು ಇದ್ದು ನಮ್ಮಲ್ಲಿ ಉತ್ತಮ ಗಾಯಕರಿದ್ದಾರೆ. ಪ್ರತಿಭಾನ್ವಿತ ಇತರ ಸದಸ್ಯರು ಇದ್ದಾರೆ
ಆದರೆ ನಮಗೆ ಕಣ್ಣು ಕಾಣುವುದಿಲ್ಲ ಎಂಬ ಕೊರಗು ಬಿಟ್ಟರೆ ನಮಗೂ ಎಲ್ಲರಂತೆಯೆ ದುಡಿದು ಸ್ವಾಭಿಮಾನದ ಬದುಕು ನಡೆಸುವ ಆಸೆ ಇದೆ. ಸರಕಾರ ಅಥವಾ ಜನ ಪ್ರತಿನಿಧಿಗಳು ನಮಗೆ ದಾರಿ ದೀಪವಾಗಬೇಕು ಎಂದರು.
ಕಾರ್ನಾಡು ರಿಕ್ಷಾ ಚಾಲಕ ಮತ್ತು ಮಾಲಕರ ಸಂಘ, ಉದ್ಯಮಿ ನೂತನ್ ಶೆಟ್ಟಿ ಮತ್ತು ಜಾ. ಜನತಾ ದಳದ ಅಧ್ಯಕ್ಷ ಜೀವನ್ ಶೆಟ್ಟಿ ಮತ್ತು ನವೀನ್ ಶೆಟ್ಟಿ ಅವರು ಅಂದರ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಗೀತ ಕಾರ್ಯಕ್ರಮದ ಅನಂತರ ಕಲಾವಿದರನ್ನು ಸಮ್ಮಾನಿಸಿ, ಗೌರವಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Raichur; ಅಣ್ಣಾಮಲೈ ಸೆಲ್ಫಿಗಾಗಿ ನೂಕುನುಗ್ಗಲು: ವೇದಿಕೆಯಲ್ಲೇ ಲಾಠಿ ಬೀಸಿದ ಪೊಲೀಸರು
MIvsKKR; ಹಲವು ಪ್ರಶ್ನೆಗಳಿವೆ, ಆದರೆ…: ಎಂಟನೇ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?
ಅರವಿಂದ್ ಕೇಜ್ರಿವಾಲ್ಗೆ ಮಧ್ಯಂತರ ಜಾಮೀನು? ಸುಪ್ರೀಂ ಸುಳಿವು
ಬಿಗ್ಬಾಸ್ ವಿಜೇತ ಎಲ್ವಿಶ್ ಯಾದವ್ ವಿರುದ್ಧ ಅಕ್ರಮ ವರ್ಗಾವಣೆ ಕೇಸ್ ದಾಖಲಿಸಿದ ಇ.ಡಿ
T20 World Cup; ಅಮೆರಿಕ ತಂಡದಲ್ಲಿ ಮೂಡಿಗೆರೆಯ ನಾಸ್ತುಷ್ ಕೆಂಜಿಗೆಗೆ ಸ್ಥಾನ