ವಸಾಯಿರೋಡ್ ಜಿಎಸ್ಬಿ ಬಾಲಾಜಿ ಮಂದಿರದಲ್ಲಿ ಪುಣ್ಯತಿಥಿ ಆಚರಣೆ
Team Udayavani, Jan 9, 2018, 3:59 PM IST
ಮುಂಬಯಿ: ವಸಾಯಿರೋಡ್ ಗೌಡ ಸಾರಸ್ವತ ಬ್ರಾಹ್ಮಣ ಜಿಎಸ್ಬಿ ಸಮಾಜದವರ ಬಾಲಾಜಿ ಮಂದಿರದಲ್ಲಿ ಸಮಿತಿಯ ಸ್ಥಾಪಕ ಅಧ್ಯಕ್ಷ ದಿ| ಮಂಜುನಾಥ ಶಿವರಾಯ ನಾಯಕ್ ಅವರ 23ನೇ ಪುಣ್ಯತಿಥಿಯು ಡಿ. 31ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು.
ಈ ಸಂದರ್ಭದಲ್ಲಿ ಸಮಾಜದ ಗಾಯಕಿ ಪಲ್ಲವಿ ಪುರುಷೋತ್ತಮ ಶೆಣೈ ಮತ್ತು ಅಮೇಯ್ ಗಣೇಶ್ ಪೈ ಅವರಿಂದ ಸಂಗೀತ ಕಾರ್ಯಕ್ರಮ ಜರಗಿತು. ಈ ಕಲಾವಿದರು ನಾಟ್ಯ ಸಂಗೀತ, ಭಾವಗೀತೆ ಮತ್ತು ಗಜಲ್ ಗೀತೆಗಳನ್ನು ಹಾಡಿ ಅಲ್ಲಿ ನೆರೆದ ನೂರಾರು ಸಭಿಕರನ್ನು ಆಕರ್ಷಿಸಿದರು.
ಹಿಮ್ಮೇಳ ಹಾರ್ಮೋನಿಯಂನಲ್ಲಿ ನಿಡ್ಡೋಡಿ ಪ್ರಸಾದ್ ಪ್ರಭು, ತಬಲಾದಲ್ಲಿ ರಾಜೇಶ್ ಪೈ, ತಾಳ ಮತ್ತು ಮಂಜಿರಾದಲ್ಲಿ ಗಣೇಶ್ ಲಕ್ಷ್ಮಣ್ ಪೈ ಅವರು ಸಹಕರಿಸಿದರು. ಸ್ಮಿತಾ ಗಣೇಶ್ ಪೈ ಅವರು ಕಾರ್ಯಕ್ರಮ ನಿರ್ವಹಿಸಿದರು.
ವೇ|ಮೂ| ಗಿರಿಧರ ಭಟ್ ಅವರ ಹಸ್ತದಿಂದ ಶ್ರೀ ವೆಂಕಟರಮಣ ಮತ್ತು ಇತರ ಪರಿವಾರ ದೇವರಿಗೆ ಆರತಿ ಬೆಳಗಿಸಲಾಯಿತು. ದಿ| ಮಂಜುನಾಥ ಶಿವರಾಯ ನಾಯಕ್ ಅವರ ಭಾವಚಿತ್ರಕ್ಕೆ ಅವರ ತಮ್ಮ ಸಮಿತಿಯ ಗೌರವಾಧ್ಯಕ್ಷ ವಸಂತ ಶಿವರಾಯ ನಾಯಕ್ ಮತ್ತು ಪುತ್ರ ನಾಗೇಶ್ ಮಂಜುನಾಥ ನಾಯಕ್ ಅವರ ಹಸ್ತದಿಂದ ಆರತಿ ಬೆಳಗಿಸಲಾಯಿತು. ಪ್ರಸಾದ ರೂಪದಲ್ಲಿ ವಸಂತ್ ನಾಯಕ್ ಪರಿವಾರದಿಂದ ಅನ್ನಸಂತರ್ಪಣೆ ನಡೆಯಿತು. ಸಮಿತಿಯ ಗೌರವಾಧ್ಯಕ್ಷ ವಸಂತ ನಾಯಕ್, ಕಾರ್ಯದರ್ಶಿ ಪುರುಷೋತ್ತಮ ಶೆಣೈ, ಕೋಶಾಧಿಕಾರಿ ವೆಂಕಟ್ರಾಯ ಪ್ರಭು, ಸಂಚಾಲಕ ದೇವೇಂದ್ರ
ಭಕ್ತ ಮತ್ತು ಸಮಿತಿಯ ಸದಸ್ಯರ ಉಪಸ್ಥಿತಿಯಲ್ಲಿ ಈ ಧಾರ್ಮಿಕ ಕಾರ್ಯಕ್ರಮವು ಜರಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: “ಕಾಂಗ್ರೆಸ್ಸಿಗರಿಗೆ ಬಡವರೆಂದರೆ ನಾಟಕೀಯ ಪ್ರೀತಿ’: ಗಾಯತ್ರಿ ಸಿದ್ದೇಶ್ವರ್
T20 World Cup; ಕ್ರಿಕೆಟ್ ಮೆಗಾ ಕೂಟಕ್ಕೆ ಪಾಕ್ ಉಗ್ರರಿಂದ ಬೆದರಿಕೆ
Bharamasagara: ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು; ಇಬ್ಬರು ಸ್ಥಳದಲ್ಲೇ ಸಾವು
ಡ್ರಗ್ಸ್ ಕೊಟ್ಟು, ಸಂಸದೆಗೇ ಲೈಂಗಿಕ ಕಿರುಕುಳ ಆರೋಪ; ಆಸ್ಟ್ರೇಲಿಯಾ ಎಂಪಿ
Paris Olympics: ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಭಾರತದ ಮಹಿಳಾ, ಪುರುಷರ ರಿಲೇ ತಂಡ