ಇದು ಎಲ್ಲಾ ವರ್ಗದವರಿಗೂ ಲಾಭದಾಯಕ ಬಜೆಟ್ :ಮೋದಿ ಬಣ್ಣನೆ
Team Udayavani, Feb 1, 2018, 2:42 PM IST
ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿರುವ ಬಜೆಟ್ ಎಲ್ಲಾ ವರ್ಗದವರಿಗೂ ಲಾಭದಾಯಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ಬಜೆಟ್ ಮಂಡನೆಯ ಬಳಿಕ ಮಾತನಾಡಿದ ಪ್ರಧಾನಿ ‘ನಾವು ಎಲ್ಲರ ಅಶಯ,ಅಪೇಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಬಜೆಟ್ ಮಂಡಿಸಿದ್ದು, ಇದು ರೈತ ಮಿತ್ರ, ಸಾಮಾನ್ಯ ಮಿತ್ರ, ವ್ಯವಹಾರ ಮಿತ್ರ ಮತ್ತು ಅಭಿವೃದ್ಧಿ ಪರ ವಾದ ಬಜೆಟ್’ ಎಂದರು.
‘ವ್ಯವಹಾರದ ಜೊತೆ ಉದ್ಯಮ ವರ್ಗದವರಿಗೂ ಲಾಭದಾಯಕ ಬಜೆಟ್ ಆಗಿದ್ದು, 21ನೇ ಶತಮಾನದ ಭಾರತಕ್ಕಾಗಿ, ಆರೋಗ್ಯ ಸುರಕ್ಷೆಯತ್ತ ಹೆಜ್ಜೆ ಇಟ್ಟಿದ್ದೇವೆ’ ಎಂದರು.
‘ರೈತರು ತಮ್ಮ ಉತ್ಪನ್ನಗಳನ್ನು ನೀಡುವ ಮೂಲಕ ದೇಶದ ವಿಕಾಸಕ್ಕೆ ಐತಿಹಾಸಿಕ ಕೊಡುಗೆ ನೀಡಿದ್ದಾರೆ.ಅವರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ನೀಡಿದ್ದೇವೆ’ ಎಂದರು.
‘ಇದು ದಲಿತ ,ಪೀಡಿತ ,ಶೋಷಿತ ಮತ್ತು ವಂಚಿತರಿಗೂ ಸಿಗುವ ಬಜೆಟ್’ ಎಂದರು.
‘ಆಹಾರ ಉತ್ಪನ್ನಗಳಿಂದ ಹಿಡಿದು, ಫೈಬರ್ ಆಪ್ಟಿಕ್ಸ್ , ರಸ್ತೆ, ಸಮುದ್ರಯಾನ, ಯುವಕರಿಂದ ಹಿರಿಯ ನಾಗರಿಕರ ವರೆಗೆ, ಗ್ರಾಮೀಣ ಭಾರತದಿಂದ ಆಯುಷ್ಮಾನ್ ಭಾರತ್, ಡಿಜಿಟಲ್ ಇಂಡಿಯಾ ದಿಂದ ಸ್ಟಾರ್ಟ್ ಅಪ್ ಇಂಡಿಯಾ ವರೆಗೆ ಈ ಬಜೆಟ್ ಕೋಟ್ಯಂತರ ಭಾರತೀಯರ ಆಸೆ ಆಕಾಂಕ್ಷೆಗಳನ್ನು ಗಟ್ಟಿಗೊಳಿಸಲಿದೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tirunelveli; ನಾಪತ್ತೆಯಾಗಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ
POCSO Case: 9ನೇ ತರಗತಿ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿದ ಶಿಕ್ಷಕ; ಪೋಕ್ಸೋ ಕೇಸ್ ದಾಖಲು
ರಾಹುಲ್ ಸಾಮಾನ್ಯ ಜನರ ಕಷ್ಟ ಕೇಳಿದ್ದಾರೆ, ಆದರೆ ಮೋದಿ ಅರಮನೆಯಲ್ಲಿ ಕುಳಿತಿದ್ದಾರೆ:ಪ್ರಿಯಾಂಕಾ
Panaji: ದಾರಿ ಮಧ್ಯೆ ಹೊತ್ತಿ ಉರಿದ ಟ್ರಕ್… 32 ಲಕ್ಷ ಮೌಲ್ಯದ ಸೊತ್ತು ನಷ್ಟ
Hamida Banu: ಭಾರತದ ಮೊದಲ ಮಹಿಳಾ ಕುಸ್ತಿಪಟು ಹಮೀದಾ ಬಾನುಗೆ ಗೂಗಲ್ ಡೂಡಲ್ ಗೌರವ
MUST WATCH
ಹೊಸ ಸೇರ್ಪಡೆ
H.D. Revanna ಎಸ್ ಐಟಿ ವಶಕ್ಕೆ ; ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್
Tirunelveli; ನಾಪತ್ತೆಯಾಗಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ
POCSO Case: 9ನೇ ತರಗತಿ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿದ ಶಿಕ್ಷಕ; ಪೋಕ್ಸೋ ಕೇಸ್ ದಾಖಲು
ಬೆಲೆ ಏರಿಕೆ ಪ್ರಧಾನಿ ಮೋದಿ ಕೊಡುಗೆ: ಶಿವರಾಜ್ ತಂಗಡಗಿ
Belagavi; ಶೆಟ್ಟರ್ ಅವರಿಗೆ ಆಶೀರ್ವಾದ ಮಾಡಿದ ವಿವಿಧ ಮಠಾಧೀಶರು