ದಿಢೀರ್ ಶ್ರೀಮಂತರಿವರು: ಅರುಣಾಚಲ ಪ್ರದೇಶದ ಹಳ್ಳಿಯ ಕತೆಯಿದು
Team Udayavani, Feb 9, 2018, 8:15 AM IST
ಇಟಾನಗರ್: ನಂಬಿದ್ರೆ ನಂಬಿ, ಬಿಟ್ರೆ ಬಿಡಿ. ಅರುಣಾಚಲದ ಬೊಮ್ಜಾ ಎಂಬ ಹಳ್ಳಿಯ ಕುಟುಂಬಗಳೆಲ್ಲಾ ಒಂದೇ ದಿನದಲ್ಲಿ ಕೋಟ್ಯಧಿಪತಿ ಕುಟುಂಬಗಳಾಗಿವೆ! ಪ್ರತಿಯೊಂದು ಕುಟುಂಬ 1 ಕೋಟಿ ರೂ.ಗಳಿಗೂ ಹೆಚ್ಚು ಹಣ ಪಡೆದಿದ್ದು ಈ ಹಳ್ಳಿ ಅನಧಿಕೃತವಾಗಿ ಏಷ್ಯಾದ ಅತಿ ಶ್ರೀಮಂತ ಹಳ್ಳಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಲ್ಲಿ ಹಣದ ಮಳೆ ಸುರಿಯಿತಾ ಅಂತ ಕೇಳಬೇಡಿ. 5 ವರ್ಷಗಳ ಹಿಂದೆ, ಸೇನೆ ಯೋಜನೆಗೆ ರೈತರಿಂದ ವಶಪಡಿಸಿಕೊಂಡಿದ್ದ 200 ಎಕರೆ ಭೂಮಿಗೆ ಒಟ್ಟು 40.8 ಕೋಟಿ ರೂ. ಪರಿಹಾರ ಹಣ ವಿತರಿಸಲಾಗಿದೆ. ಸಿಎಂ ಪೆಮಾ ಖಂಡು ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ, ಹಳ್ಳಿಯ ಕುಟುಂಬಗಳಿಗೆ ಪರಿಹಾರ ವಿತರಿಸಲಾಗಿದೆ. ಅದರಂತೆ, ಅತಿ ಹೆಚ್ಚು ಭೂಮಿ ನೀಡಿದ್ದ ಕುಟುಂಬ 6.73 ಕೋಟಿ ರೂ. ಪಡೆದಿದ್ದರೆ, ಮತ್ತೂಂದು ಕುಟುಂಬ 2.45 ಕೋಟಿ ರೂ. ಗಳಿಸಿದೆ. ಇತರ ಕುಟುಂಬಗಳು ತಲಾ 1.09 ಕೋಟಿ ರೂ. ಪಡೆದುಕೊಂಡಿವೆ.
ರೈತರಿಗೆ ಸಿಗಬೇಕಿದ್ದ ಪರಿಹಾರವನ್ನು ಕೊಡಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ಗೆೆ ಧನ್ಯವಾದ. ರಾಜ್ಯದ ಇತರೆಡೆಯೂ ಆಗಿರುವ ಭೂಸ್ವಾಧೀನದ ಪರಿಹಾರದ ಮೊತ್ತ ಬೇಗನೇ ಸಿಗಲಿದೆ ಎಂದು ಸಿಎಂ ಪೆಮಾ ಖಂಡು ಹೇಳಿದ್ದಾರೆ.
200 ಎಕರೆ ಸ್ವಾಧೀನವಾಗಿದ್ದ ಒಟ್ಟು ಭೂಮಿ
40.8 ಕೋಟಿ ರೂ. ಹಂಚಿಕೆಯಾದ ಒಟ್ಟು ಪರಿಹಾರ
6.73 ಕೋಟಿ ರೂ. ಗರಿಷ್ಠ ಪರಿಹಾರ
1.06 ಕೋಟಿ ರೂ. ಕನಿಷ್ಠ ಪರಿಹಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ