ಶಿಲುಬೆ ತೆರವು: ಹುಡಗಿ ಗ್ರಾಪಂಗೆ ಮುತ್ತಿಗೆ
Team Udayavani, Feb 23, 2018, 12:11 PM IST
ಹುಮನಾಬಾದ: ಹುಡಗಿ ಗ್ರಾಮದಲ್ಲಿ ಪ್ರತಿಷ್ಟಾಪಿಸಿದ್ದ ಶಿಲುಬೆಯನ್ನು ಬುಧವಾರ ತೆರವುಗೊಳಿಸಿರುವುದನ್ನು ಖಂಡಿಸಿ ಗ್ರಾಮದ ಕ್ರೈಸ್ತ ಸಮುದಾಯದ ಜನರು ಗುರುವಾರ ಹುಡಗಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಅನೇಕ ವರ್ಷಗಳಿಂದ ಅಲ್ಲಿ ಶಿಲುಬೆ ಸ್ಥಾಪಿಸಲಾಗಿದೆ. ಆದರೆ ಕೆಲವರು ಉದ್ದೇಶಪೂರ್ವಕವಾಗಿ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ತೆರವುಗೊಳಿಸಿದ್ದಾರೆ. ಅದೇ ದಲಿತ ಬಡಾವಣೆಯಲ್ಲಿ ಕಳೆದ ಕೆಲ ವರ್ಷಗಳ ಹಿಂದೆ ಮರಗ್ಯಮ್ಮ ದೇವಸ್ಥಾನವನ್ನು ರಸ್ತೆಮೇಲೆ ಸ್ಥಾಪಿಸಿದರೂ ಕೂಡ ಧಾರ್ಮಿಕ ವಿಷಯವೆಂದು ಯಾರೂ ಆಕ್ಷೇಪಣೆ ಸಲ್ಲಿಸಿಲ್ಲ. ಇದೀಗ ಶಿಲುಬೆ ಸ್ಥಾಪನೆ ವಿಷಯದಲ್ಲಿ ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿ ಮಾಡಿ ಎರಡು ಗುಂಪುಗಳ ಮಧ್ಯೆ ಜಗಳ ಹಚ್ಚುವ ಹುನ್ನಾರು ನಡೆಯುತ್ತಿವೆ ಎಂದು ಸಮುದಾಯದ ಜನರು ಆರೋಪಿಸಿದರು. ಶಿಲುಬೆ ಸ್ಥಾಪಿಸಿರುವುದು ಅನಧಿಕೃತವಾಗಿದ್ದರೆ ರಸ್ತೆಯಲ್ಲಿನ ದೇವಸ್ಥಾನಗಳು, ವೃತ್ತಗಳನ್ನು ಕೂಡ ತೆರವುಗೊಳಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಆಗ್ರಹಿಸಿದರು.
ಯಾವುದೇ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ಯಾರೂ ಮಾಡಬಾರದು. ಸ್ಥಳೀಯ ಪಿಡಿಒ ಕೆಲ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಪೊಲೀಸ್ ಠಾಣೆಗೆ ದೂರುನೀಡಿ ಶಿಲುಬೆ ತೆರವಿಗೆ ಮುಂದಾಗಿದ್ದಾರೆ. ಕಾರಣ ಕೂಡಲೆ ಪಿಡಿಒ ವರ್ಗಾವಣೆಗೊಳಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಮರಗ್ಯಮ್ಮ ದೇವಸ್ಥಾನ ತೆರವುಗೊಳಿಸಬೇಕು. ಈ ಘಟನೆ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿದ್ದು, ಅವರ ವಿರುದ್ಧ ಕೂಡ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಪಂಚಾಯತ ಹಾಗೂ ಕಂದಾಯ ಅಧಿಕಾರಿಗಳಿಗೆ ದೂರು ಸಲ್ಲಿಸಿದರು.
ಪ್ರತಿಭಟನಾಕಾರರು ಗ್ರಾಮ ಪಂಚಾಯಿತಿಗೆ ಬಂದಾಗ ಪಿಡಿಒ ಇಲ್ಲದನ್ನು ಗಮನಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೆಲ ಹೊತ್ತು ಗ್ರಾಮದಲ್ಲಿ ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು. ಜನರ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಿದ ಪೊಲೀಸ್ ಅಧಿಕಾರಿಗಳು ಹೆಚ್ಚಿನ ಬಂದೊ ಬಸ್ತ್ಗಾಗಿ ಬೇರೆ ಠಾಣೆಯ ಸಿಬ್ಬಂದಿಯನ್ನು ಕರೆಸಿಕೊಂಡರು.
ಸಿಪಿಐ ಜೆ. ನ್ಯಾಮೆಗೌಡರ್ ಅವರು ಉದ್ರಿಕ್ತರ ಮನವೊಲಿಸುವ ಕೆಲಸ ಮಾಡಿದರು. ಕಾನೂನು ಪ್ರಕಾರ ಪರವಾನಗಿ ಪಡೆದು ಶಿಲುಬೆ ಸ್ಥಾಪಿಸಿಕೊಳ್ಳಿ. ಅಲ್ಲದೇ ಬೇರೆ ಯಾವುದೇ ಸಮಸ್ಯೆಗಳು ಇದ್ದರೂ ಕೂಡ ಲಿಖೀತ ರೂಪದಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ದೂರು ಸಲ್ಲಿಸಿ. ನಾವುಗಳು ಕೂಡ ಬಂದೋಬಸ್ತ್ ಮಾಡುತ್ತೇವೆ ಎಂದರು.
ಕ್ರೈಸ್ತ ಸಮುದಾಯದ ಮುಖಂಡರಾದ ಶಂಕರಾವ್ ಲಕಲಕ, ಕ್ರಿಸ್ತಾನಂದ ಚಿಟಗುಪ್ಪಾ, ಸಿಮಾನ ಸೂನಿ, ಸಂಪತಕುಮಾರ
ದರ್ಗೆ, ಶಾಮವಿಲ್ ಸೂನಿ, ಮೋಹನ್ ಬಸನಳ್ಳಿ, ಅರುಣ ಕೊಟೆ, ಬಾಬುರಾವ್ ಕೊಟೆ, ಅರ್ಜುನ, ರಾಜು ಬಿರನಳ್ಳಿ, ಶ್ರೀಮಂತ, ಅಶೋಕ ಭಿಮನ್, ಬಸವರಾಜ ಕನಾ, ಸಂಜು, ಸಂತೋಷ ಖನ್ನ, ಪ್ರಕಾಶ ಚಳಕಪುರ, ಸುಂದರ, ಶ್ರೀದೇವಿ ಮೇತ್ರಿ, ಜಗದೇವಿ ಕಾಲನಾಯಕ, ಜೇಮ್ಸ್, ಅನಿತಾ, ಸಂಗೀತಾ ವಿನೊಂದ, ರೀನಾ ಎಸ್., ಕಮಲಮ್ಮಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ
Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್ ರೇವಣ್ಣನಂಥವರಾ?; ಜಿಗ್ನೇಶ್
Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ
Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು
MUST WATCH
ಹೊಸ ಸೇರ್ಪಡೆ
H.D. Revanna ಎಸ್ ಐಟಿ ವಶಕ್ಕೆ ; ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್
Tirunelveli; ನಾಪತ್ತೆಯಾಗಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ
POCSO Case: 9ನೇ ತರಗತಿ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿದ ಶಿಕ್ಷಕ; ಪೋಕ್ಸೋ ಕೇಸ್ ದಾಖಲು
ಬೆಲೆ ಏರಿಕೆ ಪ್ರಧಾನಿ ಮೋದಿ ಕೊಡುಗೆ: ಶಿವರಾಜ್ ತಂಗಡಗಿ
Belagavi; ಶೆಟ್ಟರ್ ಅವರಿಗೆ ಆಶೀರ್ವಾದ ಮಾಡಿದ ವಿವಿಧ ಮಠಾಧೀಶರು