ಸಂತ್ರಸ್ತರಿಗೆ ಪರಿಹಾರ ದೇಶಕ್ಕೆ ಮಾದರಿ: ಸೊರಕೆ


Team Udayavani, May 10, 2018, 6:00 AM IST

14.jpg

ಕಾಪು: ಉಡುಪಿ ಜಿಲ್ಲೆಯ ಪಾದೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಐಎಸ್‌ಪಿಆರ್‌ಎಲ್‌ ಕಚ್ಚಾ ತೈಲ ಶೇಖರಣಾ ಘಟಕಕ್ಕೆ ಮಂಗಳೂರಿನ ತೋಕೂರಿನಿಂದ ಪಾದೂರಿನವರೆಗೆ ಸುಮಾರು 24 ಗ್ರಾಮಗಳ ರೈತರ ಭೂಮಿಯ ಮಧ್ಯೆ ಹಾದು ಹೋಗುವ ಪೈಪ್‌ಲೈನ್‌ ಯೋಜನೆಯಿಂದ ರೈತರಿಗೆ ಸೂಕ್ತ ಪರಿಹಾರ ಒದಗಿಸುವಲ್ಲಿ ದಿಟ್ಟ ನಿರ್ಧಾರ ತೆಗೆದುಕೊಂಡ ಕಾರ್ಯ ದೇಶಕ್ಕೆ ಮಾದರಿ ಎಂದು ಕಾಪು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನಯ್‌ ಕುಮಾರ್‌ ಸೊರಕೆ ಪತ್ರಿಕಾಗೋಷ್ಠಿ ಯಲ್ಲಿ ಹೇಳಿದ್ದಾರೆ. ಕಾಪು ಮೂಬೂರು ಉಳಿಯಾರ ಗೋಳಿಯಲ್ಲಿ ನಡೆದ ಪಂಚಾಯತ್‌ ಮಟ್ಟದ ಮತ ಪ್ರಚಾರ ಮತ್ತು ಮನೆಮನೆ ಮತಪ್ರಚಾರ ಸಂದರ್ಭ ಅವರು ಮಾತನಾಡಿದರು. 

ಹೋರಾಟಕ್ಕೆ ಸಂದ ಜಯ: ಉಭಯ ಜಿಲ್ಲೆಗಳ 24 ಗ್ರಾಮಗಳ ಜನರನ್ನು ರಾಜಕೀಯ ರಹಿತವಾಗಿ ಸಂಘಟಿಸಿ ಪೈಪ್‌ಲೈನ್‌ ಯೋಜನೆಯಿಂದ ರೈತರಿಗಾಗುವ ಅನ್ಯಾಯದ ವಿರುದ್ಧ ಜನಜಾಗೃತಿ ಮಾಡಲಾಗಿತ್ತು. ಕೇಂದ್ರ ಸರಕಾರದ 1962 ಪೈಪ್‌ಲೈನ್‌ ಕಾಯ್ದೆ ಅನ್ವಯ ರೈತರಿಗೆ ಭೂಮಿಯ ಸರಕಾರಿ ಮೌಲ್ಯದ ಕೇವಲ ಶೇ.10 ಮಾತ್ರ ಪರಿಹಾರ ನೀಡಲಾಗುವುದೆಂದು ಸೂಚಿಸಿದ್ದರು. ಆದರೆ ಇದನ್ನು ವಿರೋಧಿಸಿ ಬೃಹತ್‌ ಹೋರಾಟ  ಆಯೋಜಿಸಲಾಗಿತ್ತು. ನಮ್ಮಲ್ಲಿ ಸಣ್ಣ ಹಿಡುವಳಿದಾರರೇ ಹೆಚ್ಚಿರುವುದರಿಂದ ಭೂಮಿ ಎರಡು ಹೋಳಾಗಲಿದ್ದು, ನಿಷ್ಪ್ರಯೋಜಕವಾಗಲಿದೆ. ನಮ್ಮ ಭೂಮಿಗೆ ಸೂಕ್ತ ಪರಿ ಹಾರ ನೀಡಬೇಕೆಂಬ ಬೇಡಿಕೆ ಸಲ್ಲಿಸ ಲಾಗಿತ್ತು. ನಾನು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಈ ಬಗ್ಗೆ ಹೋರಾಟ ನಡೆಸಿ ನ್ಯಾಯ ಒದಗಿಸಲಾಗಿದೆ ಎಂದು ಅವರು ಹೇಳಿದರು.

ಇದು ರಾಷ್ಟ್ರೀಯ ಭದ್ರತೆ ಹಿತದೃಷ್ಟಿಯಿಂದ ಅನುಷ್ಠಾನಗೊಳ್ಳು ವುದರಿಂದ ನಮ್ಮ ರೈತಪರವಾದ ಹೋರಾಟ ಸಮಿತಿ ರೈತರ ಅನುಕೂಲಕ್ಕಾಗಿ ಕೆಲವು ಸರಳ ಬೇಡಿಕೆಗೆ ಸ್ಪಂದಿಸುವಂತೆ ಒತ್ತಾಯಿ ಸಿತ್ತು. ಕೇಂದ್ರ ಸರಕಾರಿ ಸ್ವಾಮ್ಯದ ಯೋಜನೆ ಇದಾಗಿರುವುದರಿಂದ ಬಲಾತ್ಕಾರದಿಂದ ಹೋರಾಟ ಮಾಡಿ ರಾಜ್ಯ ಸರಕಾರದ ಅತೀ ಹೆಚ್ಚು ಪರಿಹಾರ ಮಾರುಕಟ್ಟೆ ಮೌಲ್ಯಧಾರಣೆ ಮೂಲಕ ರೈತರಿಗೆ ಮತ್ತು ಸಂತ್ರಸ್ತರಿಗೆ ಕೊಡಿಸಿದ ಪರಿಹಾರ ಕಾರ್ಯ ದೇಶಕ್ಕೆ ಮಾದರಿಯಾಗಿದೆ ಎಂದು ಸೊರಕೆ ಹೇಳಿದರು.

ಸಂತ್ರಸ್ತರ ಬೇಡಿಕೆ: ಪೈಪ್‌ಲೈನ್‌ ಹಾದುಹೋಗುವ ಕೃಷಿಭೂಮಿಗೆ 2014ರ ಡಿ. 31ರ ವರೆಗೆ ಅತೀ ಹೆಚ್ಚು ಮಾರಾಟವಾಗಿರುವ ಮೌಲ್ಯ ನಿಗದಿಪಡಿಸಬೇಕು. ಪೈಪ್‌ಲೈನ್‌ ಅಳವಡಿಸಿದ ಅನಂತರ ಎರಡು ಬದಿಗಳಲ್ಲೂ ಭೂಪರಿವರ್ತ ನೆಗೆ ಲಿಖೀತ ಅನುಮತಿ ನೀಡಬೇಕು. ಪೈಪ್‌ಲೈನ್‌ ಕಾಮಗಾರಿ ನಡೆಸುವ ಸಂದರ್ಭ ಗಡಿಗುರುತು ಗೊತ್ತು ಪಡಿಸಿದ ಭೂಮಿ ಹೊರತುಪಡಿಸಿ ಕೃಷಿ ನಾಶವಾದರೆ, ನೀರಾವರಿ ತೋಡುಗಳು ಮುಚ್ಚಿದರೆ ಮತ್ತೆ ಸರಿಪಡಿಸಿ ಕೃಷಿಯ ಪರಿಹಾರ ಒದಗಿಸಬೇಕು. 10ರಿಂದ 15 ಸೆಂಟ್ಸ್‌ ಜಾಗ ಅಥವಾ ಹೆಚ್ಚುವರಿ ಭೂಮಿಗಳ ಮಧ್ಯ ಭಾಗದಲ್ಲಿ ಹಾದುಹೋಗ ದಂತೆ ರೈತರಿಗೆ ಅನುಕೂಲವಾಗುವಂತೆ ಸಹಕರಿಸುವ ಬಗ್ಗೆ ವಿನಯ್‌ ಕುಮಾರ್‌ ಸೊರಕೆಯವರ ಮಧ್ಯಸ್ಥಿಕೆ ಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸ ಲಾಗಿತ್ತು. ಪ್ರಚಾರ ಸಭೆಯಲ್ಲಿ ಕಾಂಗ್ರೆಸ್‌ ಮುಖಂಡರಾದ ದಿವಾಕರ ಶೆಟ್ಟಿ, ಪ್ರಭಾಕರ, ಫ‌ಝಾìನ, ಸೌಮ್ಯಾ, ರೇಶ್ಮಾ, ಸಾಧಿಕ್‌ ಮಲ್ಲಾರು ಉಪಸ್ಥಿತ ರಿದ್ದರು

ಟಾಪ್ ನ್ಯೂಸ್

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

1——asdsad

IPL ರೋಚಕ ಪಂದ್ಯ:ರಾಜಸ್ಥಾನ್‌ ವಿರುದ್ಧ ಹೈದರಾಬಾದ್ ಗೆ 1 ರನ್ ಜಯ

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

1-asdsad

Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Road mishap: ಮಿನಿ ಟೆಂಪೋ ಚಾಲಕನಿಗೆ ಅಪರಿಚಿತ ವಾಹನ ಢಿಕ್ಕಿ; ತೀವ್ರ ಗಾಯ

Road mishap: ಮಿನಿ ಟೆಂಪೋ ಚಾಲಕನಿಗೆ ಅಪರಿಚಿತ ವಾಹನ ಢಿಕ್ಕಿ; ತೀವ್ರ ಗಾಯ

Udupi ಬಿಸಿಲಲ್ಲಿ ಬಿಸಿಯೂಟ ಸೇವಿಸಲು ವಿದ್ಯಾರ್ಥಿಗಳ ನಿರಾಸಕ್ತಿ

Udupi ಬಿಸಿಲಲ್ಲಿ ಬಿಸಿಯೂಟ ಸೇವಿಸಲು ವಿದ್ಯಾರ್ಥಿಗಳ ನಿರಾಸಕ್ತಿ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

rahul gandhi (2)

ನಾನು ರಾಹುಲ್‌ ಫಿಟ್ನೆಸ್‌ ಅಭಿಮಾನಿ: ಶಿವರಾಜ್‌ಕುಮಾರ್‌

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

Exam 2

ಕೆಸೆಟ್‌: ತಾತ್ಕಾಲಿಕ ಅಂಕ ಪ್ರಕಟ

35

Siddaramaiah: ಚುನಾವಣೆ ಬಂದಾಗ ಮೋದಿಗೆ ರಾಜ್ಯದ ನೆನಪು; ಸಿದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.