ಏರ್ಸೆಲ್: ಜೂ.5ರ ವರೆಗೆ ಚಿದಂಬರಂ ವಿರುದ್ದ ಬಲವಂತದ ಕ್ರಮ ಇಲ್ಲ
Team Udayavani, May 30, 2018, 11:24 AM IST
ಹೊಸದಿಲ್ಲಿ : ಏರ್ಸೆಲ್ ಮ್ಯಾಕ್ಸಿಸ್ ಹಣ ದುರುಪಯೋಗ ಕೇಸಿಗೆ ಸಂಬಂಧಿಸಿ ಸಂಭವನೀಯ ಬಂಧನದಿಂದ ತನಗೆ ರಕ್ಷಣೆ ನೀಡಬೇಕು ಎಂದು ಕೋರಿ ದಿಲ್ಲಿ ನ್ಯಾಯಾಲಯವನ್ನು ಸಂಪರ್ಕಿಸಿರುವ ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಅವರಿಗೆ ನ್ಯಾಯಾಲಯ ಜೂನ್ 5ರ ವರೆಗೆ ರಕ್ಷಣೆ ನೀಡಿದೆ.
ಚಿದಂಬರಂ ಅವರ ಅರ್ಜಿಯನ್ನು ಪರಿಗಣಿಸಿ ನ್ಯಾಯಾಲಯ ಜಾರಿ ನಿರ್ದೇಶನಾಲಯಕ್ಕೆ ನೊಟೀಸ್ ಜಾರಿ ಮಾಡಿದ್ದು ಜೂನ್ 5ರ ಒಳಗೆ ಉತ್ತರಿಸುವಂತೆ ಮತ್ತು ಅಲ್ಲಿಯ ವರೆಗೆ ಚಿದಂಬರಂ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಆದೇಶಿಸಿದೆ.
2 ಜಿ ತರಂಗಾಂತರ ಕೇಸುಗಳಿಗೆ ಸಂಬಂಧಿಸಿದಂತೆ ಏರ್ಸೆಲ್ ಮ್ಯಾಕ್ಸಿಸ್ ವಿಷಯದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ದಾಖಲಿಸಿರುವ ಎರಡು ಕೇಸುಗಳಲ್ಲಿ ದಿಲ್ಲಿ ನ್ಯಾಯಾಲಯ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಜುಲೈ 10ರ ವರೆಗಿನ ಅವಧಿಗೆ ಮಧ್ಯಾವಧಿ ರಕ್ಷಣೆಯನ್ನು ನೀಡಿತ್ತು.
ಏರ್ಸೆಲ್ ಕಂಪೆನಿಯಲ್ಲಿ ಹೂಡಿಕೆಗಾಗಿ ಗ್ಲೋಬಲ್ ಕಮ್ಯುನಿಕೇಶನ್ ಹೋಲ್ಡಿಂಗ್ ಸರ್ವಿಸಸ್ ಲಿಮಿಟೆಡ್ಗೆ ವಿದೇಶಿ ಹೂಡಿಕೆ ಪ್ರೋತ್ಸಾಹನ ಮಂಡಳಿಯ ಅನುಮತಿ ಮಂಜೂರಾತಿಗೆ ಸಂಬಂಧಪಟ್ಟಿರುವ ವಿಷಯ ಇದಾಗಿದೆ. 2015ರ ಸೆಪ್ಟಂಬರ್ನಲ್ಲಿ ಸಿಬಿಐ ಈ ವಿಷಯಕ್ಕೆ ಸಂಬಂಧಿಸಿ ತಾಜಾ ಸ್ಥಿತಿಗತಿ ವರದಿಯನ್ನು ಸಲ್ಲಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smriti ಇರಾನಿ ಎದುರು ಗೆಲುವು ಅಸಾಧ್ಯ ಎಂದು ಗೊತ್ತಾಗಿದೆ: ರಾಹುಲ್ ಗೆ ಬಿಜೆಪಿ ತಿರುಗೇಟು
Campaign: ಮತದಾರರನ್ನು ಸೆಳೆಯಲು ಪ್ಯಾರಾ ಗ್ಲೈಡರ್ ಮೂಲಕ ಅಭಿಯಾನ
Lok Sabha Election: ಬೃಜ್ ಭೂಷಣ್ ಸಿಂಗ್ ಬದಲಿಗೆ ಪುತ್ರನಿಗೆ ಟಿಕೆಟ್ ನೀಡಿದ ಬಿಜೆಪಿ
ಕಾಂಗ್ರೆಸ್ನಿಂದ ಮತ ಬ್ಯಾಂಕ್ ರಾಜಕಾರಣ; ನೇಹಾ ಹತ್ಯೆ ಲವ್ ಜೆಹಾದ್:ಅಮಿತ್ ಶಾ ಆರೋಪ
ಮಣಿಪುರ ಹಿಂಸಾಚಾರಕ್ಕೆ ವರ್ಷ; ಕುಕಿ ಪತ್ನಿ, ಮೈತೇಯಿ ಪತಿ ವರ್ಷದಿಂದ ಭೇಟಿ ಇಲ್ಲ!
MUST WATCH
ಹೊಸ ಸೇರ್ಪಡೆ
Yadagiri: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ; ಪ್ರಕರಣ ದಾಖಲು
Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್
Hunsur: ಅಂಗನವಾಡಿ ಕೇಂದ್ರ ಅಸಮರ್ಪಕ ನಿರ್ವಹಣೆ, ಬೀಗ ಜಡಿದು ಗ್ರಾಮಸ್ಥರ ಆಕ್ರೋಶ
Rishi; ರುದ್ರ ಗರುಡ ಪುರಾಣ ಫಸ್ಟ್ ಲುಕ್ ಬಿಡುಗಡೆ
Smriti ಇರಾನಿ ಎದುರು ಗೆಲುವು ಅಸಾಧ್ಯ ಎಂದು ಗೊತ್ತಾಗಿದೆ: ರಾಹುಲ್ ಗೆ ಬಿಜೆಪಿ ತಿರುಗೇಟು