ಉಡುಪಿ ಸಿಟಿ ಬಸ್ ನಿಲ್ದಾಣ: ಕತ್ತಲೆಯಿಂದ ಮುಕ್ತಿಯತ್ತ…
Team Udayavani, Jun 4, 2018, 6:35 AM IST
ಉಡುಪಿ: ಉಡುಪಿ ನಗರಸಭೆಯ ಅಧೀನದಲ್ಲಿ ನಿರ್ವಹಣೆ ಯಲ್ಲಿರುವ ಉಡುಪಿ ಸಿಟಿ ಬಸ್ ನಿಲ್ದಾಣ ದಲ್ಲಿದ್ದ ಹೈಮಾಸ್ಟ್ ದೀಪವು ಕೆಟ್ಟು ಹೋಗಿ ಸುಮಾರು ಒಂದು ತಿಂಗಳ ಬಳಿಕ ರಿಪೇರಿ ಕಾರ್ಯ ನಡೆದಿದ್ದು ಕತ್ತಲೆಯಿಂದ ಮುಕ್ತಿ ಸಿಕ್ಕುವ ಹಂತದಲ್ಲಿದೆ.
ಸಿಟಿ ಬಸ್ ನಿಲ್ದಾಣದ ಮಧ್ಯಭಾಗದಲ್ಲಿ ಹೈಮಾಸ್ಟ್ ಕಂಬವಿದ್ದು, ಇದರಲ್ಲಿ 6 ಉರಿಯುವ ವಿದ್ಯುತ್ ದೀಪಗಳಿದೆ. ಮೊದಲು ಎಲ್ಲ ದೀಪಗಳು ಉರಿಯುತ್ತ ಲಿದ್ದು, ಕ್ರಮೇಣ ಒಂದೊಂದೇ ದೀಪ ಹಾಳಾಗುತ್ತಾ ಹೋಗಿದೆ. ಕಳೆದೊಂದು ತಿಂಗಳಿನಿಂದ ರಾತ್ರಿಯಾದ ಬಳಿಕ ಸೂಕ್ತ ವಾದ ಬೆಳಕಿನ ವ್ಯವಸ್ಥೆ ಇಲ್ಲಿಲ್ಲದೆ ಬಸ್ಗಾಗಿ ಕಾಯುವ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದವು.
ನಗರಸಭೆ ಗಮನಕ್ಕೆ ತಂದರೂ, ತಡವಾಗಿ ಎಚ್ಚೆತ್ತುಕೊಂಡಿದ್ದಾರೆ ಎಂದು ಪರಿಸರದ ವ್ಯಾಪಾರಸ್ಥರೊಬ್ಬರು ತಿಳಿಸಿದ್ದಾರೆ.
ದಾರಿದೀಪ, ಚರಂಡಿ ನಿರ್ವಹಣೆಯಲ್ಲಿ ನಗರಸಭೆ ಆಡಳಿತವು ಸಂಪೂರ್ಣ ವಿಫಲವಾಗಿದೆ. ನಗರದಲ್ಲಿ ಈ ಬಾರಿಯ ಮಳೆಗಾಲದ ಆರಂಭದಲ್ಲಾದ ಅವಘಡ ಕಣ್ಣ ಮುಂದಿದೆ. ಇನ್ನು ಮಳೆಗಾಲಕ್ಕೆ ದಾರಿದೀಪ ಕೈಕೊಡುವುದು ಸಾಮಾನ್ಯ ವಾಗಿದೆ. ಅದನ್ನು ಕೂಡಲೇ ಸರಿಪಡಿಸುವುದು ನಗರಸಭೆಯ ಕರ್ತವ್ಯ. ಇಲ್ಲದಿದ್ದರೆ ಕಳ್ಳರು ಕೈಚಳಕ ತೋರಿಸುತ್ತಾರೆ, ನಡೆದಾಡು ವವರಿಗೂ ಪರದಾಟ ತಪ್ಪಿದ್ದಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Harekala Hajabba: ಕೋಟಿ ಒಡೆಯನಲ್ಲ, ಆದರೂ ಈತ ಕೋಟಿಗೊಬ್ಬ
LokSabha Election; ಪ್ರಹ್ಲಾದ ಜೋಶಿಯವರಿಂದ ಲಿಂಗಾಯತರ ತುಳಿಯುವ ಹುನ್ನಾರ: ವಿನಯ ಕುಲಕರ್ಣಿ
CSKvsPBKS; ”ಇದು ಟೀಮ್ ಗೇಮ್….”: ಧೋನಿ ನಡೆಗೆ ಇರ್ಫಾನ್ ಪಠಾಣ್ ಟೀಕೆ
Rahul Gandhiಯನ್ನು ಭಾರತದ ಪ್ರಧಾನಿ ಮಾಡಲು ಪಾಕ್ ಉತ್ಸುಕವಾಗಿದೆ: ಪ್ರಧಾನಿ ಮೋದಿ
Brahmavara-ಉಡುಪಿ ಟ್ರಾಫಿಕ್ ಜಾಮ್ ಸಮಸ್ಯೆ: ಸವಾರರು ಸುಸ್ತೋ ಸುಸ್ತು