ಬಂಟ್ಸ್ ನ್ಯಾಯ ಮಂಡಳಿ: ಕನ್ನಡಿಗ ಎಂ.ಡಿ.ಶೆಟ್ಟಿ ಅವರಿಗೆ ಸಮ್ಮಾನ
Team Udayavani, Jun 21, 2018, 3:00 PM IST
ಮುಂಬಯಿ: ಬಂಟ್ಸ್ ನ್ಯಾಯ ಮಂಡಳಿ ಮುಂಬಯಿ ವತಿಯಿಂದ ಸಮಾಜ ಪ್ರೇಮಿ, ಹಿರಿಯ ಕನ್ನಡಿಗ ಎಂ. ಡಿ. ಶೆಟ್ಟಿ ಅವರಿಗೆ ಅಭಿನಂದನ ಕಾರ್ಯಕ್ರಮವು ಕುರ್ಲಾ ಪೂರ್ವದ ಬಂಟರ ಭವನ ಸಂಕುಲದ ಎನೆಕ್ಸ್ ಕಟ್ಟಡದ ಸಭಾಗೃಹದಲ್ಲಿ ನಡೆಯಿತು.
ಬಂಟ್ಸ್ ನ್ಯಾಯ ಮಂಡಳಿಯ ಗೌರವಾಧ್ಯಕ್ಷ ಎಂ. ಡಿ. ಶೆಟ್ಟಿ ಅವರು ಇತ್ತೀಚೆಗೆ 90 ಸಂವತ್ಸರಗಳನ್ನು ಪೂರೈಸಿದ್ದು, ಅದರ ಸಲುವಾಗಿ ನ್ಯಾಯ ಮಂಡಳಿಯ ವತಿಯಿಂದ ಪದಾಧಿಕಾರಿಗಳು ಪುಷ್ಪಗುತ್ಛವನ್ನಿತ್ತು ಅಭಿನಂದಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಬಂಟ್ಸ್ ನ್ಯಾಯ ಮಂಡಳಿಯ ಅಧ್ಯಕ್ಷ ರವೀಂದ್ರ ಎಂ. ಅರಸ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ನ್ಯಾಯವಾದಿ ಪ್ರಕಾಶ್ ಎಲ್. ಶೆಟ್ಟಿ, ನ್ಯಾಯವಾದಿ ಅಶೋಕ್ ಶೆಟ್ಟಿ, ನ್ಯಾಯವಾದಿ ಸುಭಾಷ್ ಶೆಟ್ಟಿ, ಪಿ. ಧನಂಜಯ ಶೆಟ್ಟಿ, ನ್ಯಾಯವಾದಿ ಶೇಖರ್ ಶೆಟ್ಟಿ, ಪಾಂಡು ಶೆಟ್ಟಿ, ಜ್ಯೋತಿ ಶೆಟ್ಟಿ, ಡಾ| ಪ್ರಭಾಕರ ಶೆಟ್ಟಿ ಬಿ., ಕೃಷ್ಣ ವೈ. ಶೆಟ್ಟಿ, ಸಂಜೀವ ಎಂ. ಶೆಟ್ಟಿ, ಶ್ಯಾಮ ಎನ್. ಶೆಟ್ಟಿ, ಎನ್. ಸಿ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು ಎಂ. ಡಿ. ಶೆಟ್ಟಿ ಅವರನ್ನು ಅಭಿನಂದಿಸಿ ಶುಭಹಾರೈಸಿದರು.