ವೇತನ ಪಾವತಿಗಾಗಿ ದಿನಗೂಲಿ ಪೌರ ಕಾರ್ಮಿಕರ ಧರಣಿ
Team Udayavani, Jun 23, 2018, 5:20 PM IST
ರೋಣ: ಕಳೆದ 8 ತಿಂಗಳಿನಿಂದ ವೇತನ ಪಾವತಿಸುವಲ್ಲಿ ಪುರಸಭೆ ವಿಳಂಬ ಮಾಡಿದ್ದನ್ನು, ಖಂಡಿಸಿ ಹಾಗೂ ಕೂಡಲೇ ವೇತನ ಪಾವತಿಗೆ ಆಗ್ರಹಿಸಿ ದಿನಗೂಲಿ ಕಾರ್ಮಿಕರು ಪುರಸಭೆಯ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಪುರಸಭೆ ಸದಸ್ಯ ಮಂಜುನಾಥ ಹಾಳಕೇರಿ ಮಾತನಾಡಿ, ಗುತ್ತಗೆ ಆಧಾರದ ಮೇಲೆ ನೇಮಕಗೊಂಡ ದಿನಗೂಲಿ ಕಾರ್ಮಿಕರಿಗೂ ಪುರಸಭೆ ನೇರವಾಗಿ ವೇತನ ಪಾವತಿಸುವಂತೆ ಕಳೆದ ಡಿಸೆಂಬರ್ ನಲ್ಲಿ ಜಿಲ್ಲಾ ಯೋಜನಾ ನಿರ್ದೇಶಕರು ಪುರಸಭೆ ಮುಖ್ಯಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ. ಆದರೂ ಈವರೆಗೆ ವೇತನ ಪಾವತಿಸುವಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ದಿನಗೂಲಿ ನೌಕರರಿಗೆ ತೀವ್ರ ತೊಂದರೆಯಾಗಿದ್ದು, ನಿತ್ಯ ಬದುಕು ಸಾಗಿಸುವುದು ದುಸ್ತರವಾಗಿದೆ. ಕೂಡಲೇ ಮುಖ್ಯಾಧಿಕಾರಿಗಳು ಈ ಕುರಿತು ಗಮನ ಹರಿಸಿ, ಸರ್ಕಾರೇತರ ಸಂಸ್ಥೆ ಮೂಲಕ ವೇತನ ಪಾವತಿಸುವ ಬದಲು, ನೇರವಾಗಿ ಸರ್ಕಾರದಿಂದ ವೇತನ ಪಾವತಿಯಾಗುವಂತೆ ಕೂಡಲೇ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಧರಣಿಯನ್ನು ಅನಿರ್ಧಿಷ್ಟಾವಧಿ ಮುಂದುವರಿಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರಣಿ ನಿರತ ಸ್ಥಳಕ್ಕಾಗಮಿಸಿದ ಪುರಸಭೆ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಧರಣಿ ನಿರತರೊಂದಿಗೆ ಮಾತನಾಡಿ, ಏಪ್ರಿಲ್ ಮತ್ತು ಮೇ ತಿಂಗಳ ವೇತನವನ್ನು ಈ ಕೂಡಲೇ ಪಾವತಿಸಲಾಗುವುದು ದಯವಿಟ್ಟು ಧರಣಿಯಿಂದ ಹಿಂದೆ ಸರಿಯುವಂತೆ ಮನವೊಲಿಸಲು ಯತ್ನಿಸಿದರು. ಇದಕ್ಕೊಪ್ಪದ ಪ್ರತಿಭಟನಾರರು, ಸರ್ಕಾರ ಮತ್ತು ಜಿಲ್ಲಾ ಯೋಜನಾಧಿಕಾರಿಗಳ ನಿರ್ದೇಶನದಂತೆ ಕಳೆದ ಡಿಸೆಂಬರ್ನಿಂದ ಈವರೆಗೆ ವೇತನ ಪಾವತಿಸಿದಲ್ಲಿ ಮಾತ್ರ ಧರಣಿ ಕೈ ಬಿಡುತ್ತೇವೆ. ಇಲ್ಲವಾದರೆ ಮುಂದುವರಿಸುತ್ತೇವೆ ಎಂದು ಪಟ್ಟು ಹಿಡಿದರು.
ಈ ವೇಳೆ ಮಾತನಾಡಿದ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ, ಡಿಸೆಂಬರ್ನಿಂದಲೇ ವೇತನವನ್ನು ಈ ದಿನವೇ ಪಾವತಿಸುವಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಪೌರ ಕಾರ್ಮಿಕರು ಪ್ರತಿಭಟನೆ ಕೈಬಿಟ್ಟರು.
ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯರಾದ ಮಂಜುನಾಥ ಹಾಳಕೇರ, ಬಸನಗೌಡ ಪಾಟೀಲ, ವಿರೋಧ ಪಕ್ಷದ ನಾಯಕ
ಬಸವರಾಜ ಬಸನಗೌಡ್ರ, ದಿನಗೂಲಿ ಪೌರ ಕಾರ್ಮಿಕರಾದ ರವಿ ಜೊಗಣ್ಣವರ, ಬಸವರಾಜ ಚಲವಾದಿ, ಮಲ್ಲಪ್ಪ ಮುದೇನಗುಡಿ, ಹನಮಂತ ತೆಗ್ಗಿನಮನಿ, ಜಯವ್ವ ಹಾದಿಮನಿ, ಮಂಜವ್ವ ಪೂಜಾರ, ಗಂಗವ್ವ ಹಲಗಿ, ಪ್ರೇಮವ್ವ ದೊಡ್ಡಮನಿ, ಬಸವ್ವ ಪೂಜಾರ, ಮಂಜುನಾಥ ಹಾದಿಮನಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ
Dharwad; ಗುಜರಾತ್ ನಿಂದ ಓಡಿ ಹೋದ 12 ಉದ್ಯಮಿಗಳ ಬಗ್ಗೆ ಮಾತನಾಡಿ: ಮೋದಿಗೆ ಲಾಡ್ ಸವಾಲು
LokSabha Election; ಪ್ರಹ್ಲಾದ ಜೋಶಿಯವರಿಂದ ಲಿಂಗಾಯತರ ತುಳಿಯುವ ಹುನ್ನಾರ: ವಿನಯ ಕುಲಕರ್ಣಿ
Hubli; ಕಾಂಗ್ರೆಸ್ ಯಾಕೆ ದಲಿತರಿಗೆ ಗ್ಯಾರಂಟಿ ನೀಡಲಿಲ್ಲ: ಛಲವಾದಿ ನಾರಾಯಣ ಸ್ವಾಮಿ
Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ