ಬ್ಯಾಗ್ ಬಿಟ್ಟು ಶಾಲೆಗೆ ಬಂದರು ಚಿಣ್ಣರು
Team Udayavani, Jul 1, 2018, 6:00 AM IST
ಕುಂದಾಪುರ: ದಿನ ಬೆಳಗಾದರೆ ಮಣಭಾರದ ಬ್ಯಾಗ್ ಹೊತ್ತು ಶಾಲೆಗೆ ಬರುತ್ತಿದ್ದ ಮಕ್ಕಳ ಬೆನ್ನಲ್ಲಿ ಈ ದಿನ ಬ್ಯಾಗ್ ಇರಲಿಲ್ಲ. ಬಣ್ಣ- ಬಣ್ಣದ ಡ್ರೆಸ್ ಧರಿಸಿ, ಕೈಯಲ್ಲೊಂದು ಕೊಡೆ, ಡ್ರಾಯಿಂಗ್, ರಂಗೋಲಿ ಬಿಡಿಸಲು ಬೇಕಾದ ಪರಿಕರಗಳನ್ನು ಕೈಯಲ್ಲಿ ಹಿಡಿದುಕೊಂಡು ಬಂದ ಚಿಣ್ಣರು ನಲಿದು ಖುಷಿ ಪಟ್ಟರು.
ಉಡುಪಿ ಜಿಲ್ಲೆಯಾದ್ಯಂತ ಪ್ರತಿ ತಿಂಗಳ ಕೊನೆಯ ಶನಿವಾರ ಪಠ್ಯ ಹಾಗೂ ಬ್ಯಾಗಿನ ಹೊರೆ ತಪ್ಪಿಸಲು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕುಂದಾಪುರ ತಾಲೂಕಿನ ಎಲ್ಲ ಶಾಲೆಗಳಲ್ಲಿ ಬ್ಯಾಗ್ ರಹಿತ ದಿನ ಕಂಡು ಬಂದ ಚಿತ್ರಣವಿದು.
ವಿವಿಧ ಚಟುವಟಿಕೆಗಳು
“ಈ ದಿನ ನಮಗೆ ಬ್ಯಾಗಿಲ್ಲ.. ನಲಿಯುತ ಕಳೆವೆವು ದಿನವೆಲ್ಲ..’ ಎನ್ನುವ ಘೋಷ ವಾಕ್ಯದಡಿ ಬ್ಯಾಗ್ ರಹಿತ ದಿನದಂಗವಾಗಿ ಕುಂದಾಪುರ ಹಾಗೂ ಬೈಂದೂರು ವಲಯದ ಎಲ್ಲ ಶಾಲೆಗಳಲ್ಲಿ ಪಾಠವನ್ನು, ಹೊರತುಪಡಿಸಿ, ಪಠ್ಯಕ್ಕೆ ಪೂರಕವೆನ್ನುವಂತೆ ವಿವಿಧ ಪಠ್ಯೇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಹೀಗಿತ್ತು ದಿನಚರಿ
ಕೆಲವು ಶಾಲೆಗಳಲ್ಲಿ ವಿಭಿನ್ನ ರೀತಿಯ ಚಟುವಟಿಕೆಗಳನ್ನು ಶಿಕ್ಷಕರು ನಡೆಸಿದರು. ಶಾಲಾ ಕೈತೋಟ (ಕಿರು ತೋಟ) ರಚನೆ, ಇಂಗ್ಲಿಷ್ ಹಾಡು, ಸಂಭಾಷಣೆ, ಚಿತ್ರ ಪ್ರದರ್ಶನ, ಚಿತ್ರಕಲೆ ಸ್ಪರ್ಧೆ, ಚೀಟಿ ಎತ್ತಿ ಮಾತನಾಡು, ನಗೆ ಹನಿಗಳ ಸಿಂಪಡಿಕೆ, ನೃತ್ಯ ಪ್ರದರ್ಶನ, ರಂಗೋಲಿ ಸ್ಪರ್ಧೆ, ಕ್ರಾಫ್ಟ್ ತಯಾರಿಗಳನ್ನು ನಡೆಸಲಾಯಿತು.
ಸಾಂಪ್ರದಾಯಿಕ ಉಡುಗೆ
ಕುಂದಾಪುರ ವಡೇರಹೋಬಳಿಯ ವಿ.ಕೆ. ಆರ್. ಆಂಗ್ಲ ಮಾಧ್ಯಮ ಶಾಲೆ ಸೇರಿದಂತೆ ಕೆಲವು ಶಾಲೆಗಳ ವಿದ್ಯಾರ್ಥಿಗಳು ಪಂಚೆ, ಧೋತಿ ಧರಿಸಿ ಸಾಂಪ್ರದಾಯಿಕ ಉಡುಗೆಯೊಂದಿಗೆ ಆಗಮಿಸಿದ್ದು ಗಮನ ಸೆಳೆಯುವಂತಿತ್ತು. ಮಧ್ಯಾಹ್ನ ಸಿಹಿಯೂಟವನ್ನು ವಿದ್ಯಾರ್ಥಿಗಳಿಗೆ ಬಡಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಇನ್ನೂ ನಡೆಯದ ಟೆಂಡರ್ ಪ್ರಕ್ರಿಯೆ; ರಾಜ್ಯದಲ್ಲಿ ಅಗ್ನಿಶಾಮಕ ವಾಹನ ಕೊರತೆ
Road Mishap ಮಣಿಪಾಲ: ಕಾರು ಢಿಕ್ಕಿಯಾಗಿ ಪಾದಚಾರಿ ಸಾವು
Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು
Theme Park Karkala ಅವಶೇಷ ತೆರವಿಗೆ ಕೋರ್ಟ್ ಆದೇಶ; ಜಿಲ್ಲಾಧಿಕಾರಿ ತಡೆ!
Parashurama Theme Park; ಕೊನೆಯ ಸಾಕ್ಷ್ಯವೂ ನಾಶಕ್ಕೆ ಯತ್ನ: ಉದಯ ಕುಮಾರ್ ಶೆಟ್ಟಿ ಆರೋಪ
MUST WATCH
ಹೊಸ ಸೇರ್ಪಡೆ
ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ… ಅತ್ಯಾಚಾರ ಆರೋಪಿ ಕಾಲಿಗೆ ಗುಂಡೇಟು
Bihar: 2025ರ ಚುನಾವಣೆಗೂ ಮುನ್ನ ಬಿಜೆಪಿಯಿಂದ 10 ಲಕ್ಷ ಸರ್ಕಾರಿ ಉದ್ಯೋಗದ ಭರವಸೆ
Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ
Puttur ಅಡಿಕೆಗೂ ಬಿಸಿಲ ತಾಪ: ಉದುರುತ್ತಿವೆ ನಳ್ಳಿ! ಶೇ. 50ರಷ್ಟು ಫಸಲು ನಷ್ಟದ ಭೀತಿ
ಸಿಆರ್ಝಡ್ ಮರಳು ಇನ್ನು ಸದ್ಯಕ್ಕೆ ಮರೀಚಿಕೆ