ರಾಜಾ ಬಾಗ ಸವಾರ್ ದರ್ಗಾ ಉರುಸ್
Team Udayavani, Jul 10, 2018, 12:10 PM IST
ಬಸವಕಲ್ಯಾಣ: ನಗರದ ಸುಪ್ರಸಿದ್ಧ ರಾಜಾ ಬಾಗ ಸವಾರ್ ದರ್ಗಾದಲ್ಲಿ ಹಜರತ್ ಶೇರ್ ಎ ಸವಾರ್ ರಾಜಾ ಬಾಗ ಸವಾರ್ (ರಹ) ಅವರ 640ನೇ ಉರುಸ್ ನಿಮಿತ್ತ ರವಿವಾರ ರಾತ್ರಿ ನಾಗಪುರದ ಅಬ್ದುಲ್ ಹಬೀಬ್ ಆಜಮೀರಿ ಹಾಗೂ ತಂಡದಿಂದ ಕವ್ವಾಲಿ ಕಾರ್ಯಕ್ರಮ ಜರುಗಿತು.
ತಡ ರಾತ್ರಿ 11ರ ಸುಮಾರು ಆರಂಭವಾಗಿ ಬೆಳಗಿನ ಜಾವದ ವರೆಗೆ ನಡೆದ ಕಾರ್ಯಕ್ರಮದಲ್ಲಿ ನಗರ ಸೇರಿದಂತೆ, ರಾಜ್ಯ, ಹೊರ ರಾಜ್ಯಗಳಿಂದ ಆಗಮಿಸಿದ ಸಾವಿರಾರು ಜನರು ಪಾಲ್ಗೊಂಡಿದ್ದರು.
ದರ್ಗಾದ ಸಜ್ಜಾದ ನಶೀನ್ ವ ಮುತವಲ್ಲಿ ಹಜರತ್ ಖಾಜಾ ಜಿಯಾ ಉಲ್ ಹಸನ್ ಜಾಗೀರದಾರ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಬಿ.ನಾರಾಯಣರಾವ್, ನಗರಸಭೆ ಅಧ್ಯಕ್ಷ ಮೀರ ಅಜರಲಿ ನವರಂಗ, ಖಾಜಾ ಮೈನೋದ್ದಿನ್ಸಾಬ ಇಂಜಿನಿಯರ್, ಸೈಯದ್ ಜಾವೀದ ನಿಜಾಮಿ, ತಾಜೋದ್ದಿನ್ ಸಾಬ್ ನಿಜಾಮಿ, ಮುದಸ್ಸಿರ ನಿಜಾಮಿ, ಸೈಯದ ಅಕ್ಸರ್ ನಿಜಾಮಿ, ಡಾ|ಖದೀರೋದ್ದಿನ್
ಹಾಗೂ ಇನ್ನಿತರರು ಭಾಗವಹಿಸಿದ್ದರು.
ಶುಕ್ರವಾರ ರಾತ್ರಿ ಸಂದಲ್ (ಗಂಧದ) ಮೆರವಣಿಗೆ ನಡೆದರೆ, ಶನಿವಾರ ಕೋಟೆಯಿಂದ ಮುಖ್ಯ ರಸ್ತೆಯ ಮಾರ್ಗವಾಗಿ ದರ್ಗಾದ ವರೆಗೆ ಝೇಲಾ ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ಮಧ್ಯ ರಾತ್ರಿಯಿಂದ ಬೆಳಗಿನ ವರೆಗೆ ನಡೆದ ಮೆರವಣಿಗೆಯಲ್ಲಿ ಯುವಕರಿಂದ ನಡೆದ ನೃತ್ಯ ಗಮನ ಸೆಳೆಯಿತು.
ಮೆರವಣಿಗೆಗ ಚಾಲನೆ: ಕೋಟೆಯ ಬಳಿ ಮೆರವಣಿಗೆಗೆ ಚಾಲನೆ ನೀಡಿದ ಶಾಸಕ ಬಿ.ನಾರಾಯಣರಾವ್ ಮಾತನಾಡಿ, ಪರಸ್ಪರ ವಿಶ್ವಾಸ, ಶಾಂತಿ-ಸೌಹಾರ್ದತೆ ನೆಲೆಸಬೇಕು ಎನ್ನುವುದೇ ತಮ್ಮ ಆಶಯವಾಗಿದೆ ಎಂದರು.
ನಗರದ ರಸ್ತೆಗಳು ಹದಗೆಟ್ಟಿವೆ. ನಡೆಯಲು ಬಾರದ ಸ್ಥಿತಿ ಹಲವೆಡೆ ನಿರ್ಮಾಣವಾಗಿದೆ. ಇದೆಲ್ಲವೂ ತಮ್ಮ ಗಮನದಲ್ಲಿದೆ. ರಸ್ತೆ ನಿರ್ಮಾಣ, ಶುದ್ಧವಾದ ಕುಡಿಯುವ ನೀರು ಸೇರಿದಂತೆ ಎಲ್ಲ ಕೆಲಸಗಳನ್ನು ಒಂದು ವರ್ಷದ ಅವಧಿಯಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ನಗರದ ಕೋಟೆ ಪ್ರದೇಶದಲ್ಲಿ ಹೆರಿಗೆ ಆಸ್ಪತ್ರೆ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಝೇಲಾ ಕಮೀಟಿಯಿಂದ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಶಾಸಕರು, ಆಸ್ಪತ್ರೆ ನಿರ್ಮಾಣಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಝೇಲಾ ಕಮೀಟಿ ಕಚೇರಿ ನಿರ್ಮಾಣಕ್ಕೆ ಅಗತ್ಯ ಅನುದಾನ
ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಝೇಲಾ ಕಮೀಟಿ ಅಧ್ಯಕ್ಷ ಆಶೀಫ್ ಹಾಜಿ ಸೇರಿದಂತೆ ಪ್ರಮುಖರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ
Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್ ರೇವಣ್ಣನಂಥವರಾ?; ಜಿಗ್ನೇಶ್
Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ
Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು
MUST WATCH
ಹೊಸ ಸೇರ್ಪಡೆ
Subramanya: ಸಿಡಿಲು ಬಡಿದು ನವವಿವಾಹಿತ ಸಾವು: ವಿವಿಧೆಡೆ ಸಿಡಿಲು ಸಹಿತ ಮಳೆ
Rain ಸುಬ್ರಹ್ಮಣ್ಯ, ಸುಳ್ಯ ಸಹಿತ ಹಲವೆಡೆ ಗುಡುಗು-ಮಳೆ
Sea ಹಠಾತ್ ಉಬ್ಬರ ಸಾಧ್ಯತೆ: ರೆಡ್ ಅಲರ್ಟ್ ಘೋಷಣೆ
Dakshina Kannada ಕುಡಿಯುವ ನೀರು ಸಮಸ್ಯೆಯಾಗದಂತೆ ಕ್ರಮ: ಜಿಲ್ಲಾಧಿಕಾರಿ ಸೂಚನೆ
Sullia ವಿವಿಧೆಡೆ ಕಾಡಾನೆಗಳಿಂದ ಕೃಷಿ ಹಾನಿ : ಅರಣ್ಯ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ