ಹುಣ್ಸೆಮಕ್ಕಿ: ಬಾವಿಗೆ ಬಿದ್ದ ಚಿರತೆ ರಕ್ಷಣೆ
Team Udayavani, Aug 11, 2018, 10:26 AM IST
ಕುಂದಾಪುರ: ಹೊಂಬಾಡಿ ಮಂಡಾಡಿ ಗ್ರಾ. ಪಂ. ವ್ಯಾಪ್ತಿಯ ಹುಣ್ಸೆಮಕ್ಕಿಯಲ್ಲಿ ಗುರುವಾರ ತಡರಾತ್ರಿ ಬಾವಿಗೆ ಬಿದ್ದ ಚಿರತೆಯನ್ನು ಶುಕ್ರವಾರ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ. ರಾತ್ರಿಯೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದು, ಕೂಡಲೇ ಆಗಮಿಸಿದರು. ಆದರೆ 15 ಅಡಿ ಆಳದಿಂದ ಚಿರತೆಯನ್ನು ಮೇಲೆತ್ತುವ ಕಾರ್ಯಾಚರಣೆ ರಾತ್ರಿ ನಡೆಸುವುದು ಸಾಧ್ಯವಾಗಿರಲಿಲ್ಲ. ಚಿರತೆ ಬಾವಿಗೆ ಅಳವಡಿಸಿದ ರಿಂಗ್ನಲ್ಲಿ ಸುರಕ್ಷಿತವಾಗಿ ಇದ್ದ ಕಾರಣ ಬೆಳಗಾದ ಬಳಿಕ ಕಾರ್ಯಾಚರಣೆ ನಡೆಸಲು ನಿರ್ಧರಿಸಿದರು.
ಬೆಳಗ್ಗೆ ಹಗ್ಗ ಕಟ್ಟಿ ಬೋನನ್ನು ಬಾವಿಗೆ ಇಳಿಬಿಟ್ಟು ಚಿರತೆ ಅದರೊಳಗೆ ಕೂರುವಂತೆ ಮಾಡಿ ಮೇಲಕ್ಕೆತ್ತಲಾಯಿತು. ಚಿರತೆ ಆರೋಗ್ಯವಾಗಿದ್ದು, ಮೂಕಾಂಬಿಕಾ ಅಭಯಾರಣ್ಯಕ್ಕೆ ಬಿಡಲಾಯಿತು. ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ, ಉಪ ವಲಯ ಅರಣ್ಯಾಧಿಕಾರಿ ಉದಯ್, ಸಂತೋಷ್, ಅರಣ್ಯ ರಕ್ಷಕರಾದ ವಿ. ಮಂಜು, ಶಂಕರ್, ಸಂತೋಷ್, ಶಿವು, ಬಂಗಾರಪ್ಪ, ಚಾಲಕ ಅಶೋಕ್ ಪಾಲ್ಗೊಂಡಿದ್ದರು.
ನಾಯಿಯ ಬೆನ್ನಟ್ಟಿ ಬಂದಿತ್ತು
ಹುಣ್ಸೆಮಕ್ಕಿಯ ಬಾಬಿ ಕುಲಾಲ್ ಮನೆಯ ನಾಯಿಯನ್ನು ಹಿಡಿ ಯಲು ಚಿರತೆ ಬಂದಿದ್ದು, ಬೆನ್ನಟ್ಟುವಾಗ ನಾಯಿ ಸಹಿತ ಬಾವಿಗೆ ಬಿದ್ದಿತ್ತು. ಚಿರತೆಯ ಗರ್ಜನೆ ಕೇಳಿ ಮನೆಯವರಿಗೆ ಎಚ್ಚರವಾಯಿತು. ಬಾವಿಗೆ ಇಣುಕಿದಾಗ ನಾಯಿ ಹಾಗೂ ಚಿರತೆ ಇರುವುದು ಕಂಡುಬಂತು. ಬುಟ್ಟಿ ಇಳಿಬಿಟ್ಟು ನಾಯಿಯನ್ನು ತತ್ಕ್ಷಣ ಮೇಲೆತ್ತಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
KLE ಸಂಸ್ಥೆ ಬೆಳೆದಿದ್ದು ದಾನಿಗಳಿಂದ, ಕಾಂಗ್ರೆಸ್ನಿಂದ ಅಲ್ಲ: ಪ್ರಭಾಕರ ಕೋರೆ
Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…
Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…
Bidar; ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ
Bengaluru ತಂಪೆರೆದ ವರುಣ; ಕೆಲವೆಡೆ ಹಾನಿ: 4 ದಿನ ಮುಂದುವರಿಯುವ ಸಾಧ್ಯತೆ