ಗ್ರಾಮ ಕಚೇರಿಗಳಲ್ಲಿ ಕೆಟ್ಟುಹೋಗಿರುವ  ಧ್ವನಿವರ್ಧಕಗಳು !


Team Udayavani, Sep 22, 2018, 6:35 AM IST

21-kbl-1.jpg

ಕುಂಬಳೆ: ಕಾಸರಗೋಡು ಜಿಲ್ಲೆಯ ಕರಾವಳಿ ಪ್ರದೇಶದ ಕಂದಾಯ ಗ್ರಾಮ ಕಚೇರಿಗಳ ಮುಂದೆ ಮೈಕ್‌ ಅಳವಡಿಸಿರುವುದನ್ನು ಕಾಣಬಹುದು. ಯಾವುದೇ ಸಭೆ ಸಮಾರಂಭಕ್ಕಾಗಿ ಇದನ್ನು ಅಳವಡಿಸಲಾಗಿಲ್ಲ. 2004 ಡಿಸೆಂಬರ್‌ 26ರಂದು ಕೇರಳ,ತಮಿಳ್ನಾಡು,ಆಂದ್ರ ಪ್ರದೇಶಗಳಿಗೆ ಅಪ್ಪಳಿಸಿದ ಸುನಾಮಿಯ ಭೀಕರ ದುರಂತದ ಬಳಿಕ ರಾಜ್ಯದ ಕರಾವಳಿಯಲ್ಲಿರುವ ವಿಲೇಜ್‌ ಆಫೀಸ್‌ಗಳ ಮುಂದೆ ಸರಕಾರದ ವತಿಯಿಂದ ಮೈಕ್‌ಗಳನ್ನು ಅಳವಡಿಸಲಾಗಿದೆ. ಸುನಾಮಿಯ ಸಂಭಾವ್ಯ ದುರಂತದ ಮುಂಜಾಗ್ರತಾ ಸಂದೇಶವನ್ನು 2 ಕಿ.ಮೀ.ಸುತ್ತಳತೆಯ ವ್ಯಾಪ್ತಿಯಲ್ಲಿ ವಾಸಿಸುವ ಕುಟುಂಬಗಳಿಗೆ ತಿಳಿಸುವ ಯೋಜನೆಯಲ್ಲಿ ಈ ಮೈಕ್‌ಗಳನ್ನು ಅಳವಡಿಸದಾಗಿದೆ.

ಸರಕಾರದ ಅರ್ಲಿ ವಾರ್ನಿಂಗ್‌ ಸಿಸ್ಟಮ್‌ ಯೋಜನೆಯಡಿ ಮಂಜೇಶ್ವರ ತಾಲೂಕು ಕಚೇರಿಯ ಅಧೀನದ ಕುಂಜತ್ತೂರು,ಹೊಸಬೆಟ್ಟು,ಉಪ್ಪಳ,ಇಚ್ಲಂಗೋಡು,ಬಂಬ್ರಾಣ,ಕೊಯಿಪ್ಪಾಡಿ ಗ್ರೂಪ್‌ನ ಆರು ಗ್ರಾಮ ಕಚೇರಿಗಳಲ್ಲಿ ಮೈಕ್‌ಗಳನ್ನು ಅಳವಡಿಸಲಾಗಿದೆ.ಅದೇ ರೀತಿ ರಾಜ್ಯದ ಕರಾವಳಿ ಪ್ರದೇಶದ ಗ್ರಾಮ ಕಚೇರಿಗಳಲ್ಲಿ ಮೈಕ್‌ ಅಳವಡಿಸಲಾಗಿದೆ.ಆದರೆ ದೇವರ ದಯದಿಂದ ಮೈಕ್‌ ಅಳವಡಿಸಿದ ಬಳಿಕ ಸುನಾಮಿ ಅಪ್ಪಳಿಸಿಲ್ಲ.ಆದರೆ ಈ ಬೆಲೆ ಬಾಳುವ ಮೈಕ್‌ ಸೆಟ್‌ಗಳನ್ನು ಕೇಳುವವರಿಲ್ಲದೆ ಅನಾಥವಾಗಿದೆ. ಕೆಲವು ಕಚೇರಿಯ ಮೈಕ್‌ಗಳು ಕಾಣದಂತೆ ಮಾಯವಾಗಿದೆ.ಉಳಿದ ಧ್ವನಿವರ್ಧಕಗಳು ತುಕ್ಕು ಹಿಡಿದು ಉಪಯೋಗ ಶೂನ್ಯವಾಗಿದೆ.ಸ್ಥಾಪಿಸಿದ ಬಳಿಕ ಮೈಕ್‌ ಸೆಟ್ಟಿನ ಸರ್ವೀಸ್‌ ನಡೆಸಲಾಗಲಿ ಅಳಿದಿದೆಯೋ ಉಳಿದಿದೆಯೋ ಎಂಬುದಾಗಿ ಈ ತನಕ ಯಾರೂ ವಿಚಾರಿಸಿಲ್ಲ ವೆನ್ನುತ್ತಾರೆ ಗ್ರಾಮ ಕಚೇರಿಯ ನೌಕಕರು.

ಇದರಿಂದ ಗ್ರಾಮ ಕಚೇರಿಯ 2.ಕಿ.ಮೀ.ದೂರಕ್ಕೆ ದುರಂತದ ಸಂದೇಶ ಶಬ್ದ ಕೇಳಲು ಸಾಧ್ಯವೇ ? ತಾಂತ್ರಿಕರಿಲ್ಲದೆ ಇದರ ನಿರ್ವಹಣೆ ಹೇಗೆ ಸಾಧ್ಯ?ನೆ ಎಂಬ ಅಭಿಪ್ರಾಯ ಕೆಲವು ಕಂದಾಯ ಉದೋÂಗಿಗಳದ್ದು.     

ಮಾಹಿತಿ ಇಲ್ಲ
ಗ್ರಾಮ ಕಚೇರಿಗಳಲ್ಲಿ ಮೈಕ್‌ ಅಳವಡಿಸಿದ ಬಳಿಕ ಇದರ ಕುರಿತು ಯಾರೂ ವಿಚಾರಿಸಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಇದರ ಕಡತಗಳು ಇರುವುದರಿಂದ ಈ ಕುರಿತು ಹೆಚ್ಚಿನ ಯಾವುದೇ ಮಾಹಿತಿ ಇಲ್ಲ ಎಂದು ಮಂಜೇಶ್ವರ ತಾಲೂಕು ಕಚೇರಿಯ ಪೃಕೃತಿ ವಿಕೋಪ ನಿಗ್ರಹ ವಿಭಾಗದ ಉದೋÂಗಿ ಅನಸ್‌ ಹೇಳಿದರು.

ನಿರ್ವಹಣೆ ತರಗತಿಗೆ ವಿಘ್ನ
2010ರ  ಮೇ 22 ರಂದು ಕಾಸರಗೋಡಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗ್ರಾಮ ಕಚೇರಿಗಳ ಕೆಲವು ನೌಕರರನ್ನು ಮೈಕ್‌ಗಳ ತಾಂತ್ರಿಕ ನಿರ್ವಹಣೆಯ ತರಗತಿಗಾಗಿ ಕರೆದಿದ್ದರಂತೆ.ಆ ದಿನ ಮಂಗಳೂರು ಕೆಂಜಾರಿನಲ್ಲಿ ವಿಮಾನ ದುರಂತ ನಡೆದು ಪರಿಹಾರಕ್ಕೆ ತತ್‌ಕ್ಷಣ ತೆರಳುವಂತೆ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದರಂತೆ.ತರಗತಿಗೆ ಆಗಮಿಸಿದ ಹೆಚ್ಚಿನವರೆಲ್ಲರೂ ಮಂಗಳೂರಿಗೆ ಅನಿವಾರ್ಯವಾಗಿ ತೆರಳಬೇಕಾಯಿತು. ಬಳಿಕ ಈ ತನಕ ತರಗತಿ ನಡೆದಿಲ್ಲ  
– ದೇವದಾಸ
ಸಹಾಯಕ ತಹಶಿಲ್ದಾರ್‌ ,ಮಂಜೇಶ್ವರ ತಾಲೂಕು ಹೆಡ್‌ಕಾÌರ್ಟರ್

ಟಾಪ್ ನ್ಯೂಸ್

Dharmasthala ಸಂಸ್ಕಾರವಂತ ಬದುಕು ನಮ್ಮದಾಗಲಿ: ಚಿತ್ರ ನಟ ದೊಡ್ಡಣ್ಣ ಕಳಕಳಿ

Dharmasthala ಸಂಸ್ಕಾರವಂತ ಬದುಕು ನಮ್ಮದಾಗಲಿ: ಚಿತ್ರ ನಟ ದೊಡ್ಡಣ್ಣ ಕಳಕಳಿ

Kasaragod ಚಿಗುರುಪಾದೆಯಲ್ಲಿ ಬಿದ್ದ ವಿಮಾನ ಮಾದರಿ ಡ್ರೋನ್‌!

Kasaragod ಚಿಗುರುಪಾದೆಯಲ್ಲಿ ಬಿದ್ದ ವಿಮಾನ ಮಾದರಿ ಡ್ರೋನ್‌!

Speed ​​Boat ಹೊರಟದ್ದು ಅಳಸಮುದ್ರಕ್ಕೆ; ತಲುಪಿದ್ದು ತೀರಕ್ಕೆ!

Speed ​​Boat ಹೊರಟದ್ದು ಅಳಸಮುದ್ರಕ್ಕೆ; ತಲುಪಿದ್ದು ತೀರಕ್ಕೆ!

BC Road, ಉಪ್ಪಿನಂಗಡಿಯಲ್ಲಿ ಸಂಚಾರ ಸಂಕಷ್ಟ : ಗಂಟೆಗಳ ಕಾಲ ಟ್ರಾಫಿಕ್‌ ಜಾಮ್‌

BC Road, ಉಪ್ಪಿನಂಗಡಿಯಲ್ಲಿ ಸಂಚಾರ ಸಂಕಷ್ಟ : ಗಂಟೆಗಳ ಕಾಲ ಟ್ರಾಫಿಕ್‌ ಜಾಮ್‌

Temperature Increase: ಮೊಟ್ಟೆ ದರ ಇಳಿಕೆ

Retail Market; ತಾಪಮಾನ ಏರಿಕೆ: ಮೊಟ್ಟೆ ದರ ಇಳಿಕೆ

Prajwal Revanna Case ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ಡಿಲೀಟ್‌ ಮಾಡಿಸಲು ಕ್ರಮ: ಪರಂ

Prajwal Revanna Case ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ಡಿಲೀಟ್‌ ಮಾಡಿಸಲು ಕ್ರಮ: ಪರಂ

Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫ‌ಲ್ಯ ಕಾರಣ: ಅಶೋಕ್‌

Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫ‌ಲ್ಯ ಕಾರಣ: ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod ಚಿಗುರುಪಾದೆಯಲ್ಲಿ ಬಿದ್ದ ವಿಮಾನ ಮಾದರಿ ಡ್ರೋನ್‌!

Kasaragod ಚಿಗುರುಪಾದೆಯಲ್ಲಿ ಬಿದ್ದ ವಿಮಾನ ಮಾದರಿ ಡ್ರೋನ್‌!

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dharmasthala ಸಂಸ್ಕಾರವಂತ ಬದುಕು ನಮ್ಮದಾಗಲಿ: ಚಿತ್ರ ನಟ ದೊಡ್ಡಣ್ಣ ಕಳಕಳಿ

Dharmasthala ಸಂಸ್ಕಾರವಂತ ಬದುಕು ನಮ್ಮದಾಗಲಿ: ಚಿತ್ರ ನಟ ದೊಡ್ಡಣ್ಣ ಕಳಕಳಿ

Kasaragod ಚಿಗುರುಪಾದೆಯಲ್ಲಿ ಬಿದ್ದ ವಿಮಾನ ಮಾದರಿ ಡ್ರೋನ್‌!

Kasaragod ಚಿಗುರುಪಾದೆಯಲ್ಲಿ ಬಿದ್ದ ವಿಮಾನ ಮಾದರಿ ಡ್ರೋನ್‌!

Speed ​​Boat ಹೊರಟದ್ದು ಅಳಸಮುದ್ರಕ್ಕೆ; ತಲುಪಿದ್ದು ತೀರಕ್ಕೆ!

Speed ​​Boat ಹೊರಟದ್ದು ಅಳಸಮುದ್ರಕ್ಕೆ; ತಲುಪಿದ್ದು ತೀರಕ್ಕೆ!

BC Road, ಉಪ್ಪಿನಂಗಡಿಯಲ್ಲಿ ಸಂಚಾರ ಸಂಕಷ್ಟ : ಗಂಟೆಗಳ ಕಾಲ ಟ್ರಾಫಿಕ್‌ ಜಾಮ್‌

BC Road, ಉಪ್ಪಿನಂಗಡಿಯಲ್ಲಿ ಸಂಚಾರ ಸಂಕಷ್ಟ : ಗಂಟೆಗಳ ಕಾಲ ಟ್ರಾಫಿಕ್‌ ಜಾಮ್‌

Temperature Increase: ಮೊಟ್ಟೆ ದರ ಇಳಿಕೆ

Retail Market; ತಾಪಮಾನ ಏರಿಕೆ: ಮೊಟ್ಟೆ ದರ ಇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.