ಕೂಡ್ಲು ಗ್ರಾಮ ಕಚೇರಿಯಲ್ಲಿ ನೌಕರರ ಕೊರತೆ; ಜನರಿಗೆ ಸಂಕಷ್ಟ


Team Udayavani, Sep 28, 2018, 6:00 AM IST

27ksde4.jpg

ಕನಿಷ್ಠ 9 ಮಂದಿ ಅಧಿಕಾರಿಗಳು ಇರಬೇಕಾಗಿದ್ದ ಇಲ್ಲಿ ಈಗ ಇರುವುದು ಕೇವಲ ಮೂರು ಮಂದಿ ಮಾತ್ರ. ರೆವೆನ್ಯೂ ರಿಕವರಿ ನೋಟಿಸ್‌, ಕಟ್ಟಡ ತೆರಿಗೆ, ಆಡಂಬರ ತೆರಿಗೆ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ , ರೀ ಸರ್ವೇ, ಆರ್‌ಡಿಒ ಕಚೇರಿ ೆಗಳಿಂದ ಅಸಂಖ್ಯಾಕ ನೋಟಿಸುಗಳು ಈ ಗ್ರಾಮ ಕಚೇರಿಗೆ ಬರುತ್ತಿರುತ್ತವೆ. ಆದರೆ ಇದರ ವಿಳಾಸ ಪತ್ತೆಹಚ್ಚಿ  ಸಂಬಂಧಪಟ್ಟವರಿಗೆ ನೋಟೀಸು ರೂಪದಲ್ಲಿ ನೀಡಲು ಕೂಡ ಈಗ ಇಲ್ಲಿ  ಅಗತ್ಯದ ಸಿಬಂದಿಯಿಲ್ಲ.

ಕಾಸರಗೋಡು: ಕಾಸರಗೋಡು ನಗರ ಸಮೀಪದ ಎರಿಯಾಲ್‌ನಲ್ಲಿರುವ ಕೂಡ್ಲು ಗ್ರೂಪ್‌ ವಿಲ್ಲೇಜ್‌ ಆಫೀಸ್‌ (ಗ್ರಾಮ ಕಚೇರಿ) ವಿಭಜಿಸಬೇಕೆಂದು ಇಲ್ಲಿನ ಜನರು ಕಳೆದ ಹಲವಾರು ವರ್ಷಗಳಿಂದ ಒತ್ತಾಯಿಸುತ್ತಿದ್ದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಜತೆಗೆ ಈ ಗ್ರಾಮ ಕಚೇರಿಯಲ್ಲಿ  ನೌಕರರ ಸಂಖ್ಯೆಯೂ ತೀರಾ ಕಡಿಮೆಯಿದೆ. ಅವಶ್ಯಕತೆಗೆ ಬೇಕಾದಷ್ಟು ನೌಕರರನ್ನು  ನೇಮಕಾತಿ ಮಾಡದಿರುವುದರಿಂದ ವಿವಿಧ ಅಗತ್ಯಗಳಿಗೆ ಇಲ್ಲಿಗೆ ಆಗಮಿಸುವ ಜನರು ತೀವ್ರ ಸಂಕಷ್ಟಕ್ಕೊಳಗಾಗುತ್ತಿದ್ದಾರೆ. ಇದು ವ್ಯಾಪಕ ಪ್ರತಿಭಟನೆಗೂ ಕಾರಣವಾಗಿದೆ.

ಕಾಸರಗೋಡು ಜಿಲ್ಲೆಯಲ್ಲಿ ಅತೀ ಹೆಚ್ಚು ಮನೆಗಳು ಮತ್ತು  ಕಟ್ಟಡಗಳು ಇರುವ ವಿಲ್ಲೇಜ್‌ ಎಂದು ಕೇರಳ ರಾಜ್ಯ ಆಡಳಿತ ಪರಿಷ್ಕರಣೆ ಸಮಿತಿಯು ಪತ್ತೆಹಚ್ಚಿದ ಕೂಡ್ಲು  ಗ್ರಾಮವನ್ನು  ಜಿಲ್ಲಾ  ಆಡಳಿತ ವರ್ಗವು ನಿರಂತರವಾಗಿ ಕಡೆಗಣಿಸುತ್ತಿದೆ. ಮೊಗ್ರಾಲ್‌ ಪುತ್ತೂರು ಪಂಚಾಯತ್‌ನ ಎಲ್ಲ  ಮತ್ತು  ಮಧೂರು ಪಂಚಾಯತ್‌ನ ಬಹುತೇಕ ಪ್ರದೇಶಗಳು ಒಳಗೊಂಡ ಈ ಗ್ರಾಮ ಕಚೇರಿಯಲ್ಲಿ ನೋಟೀಸು ಕೂಡ ನೀಡಲು ಗ್ರಾಮಾಕಾರಿಗಳೇ ಹೋಗಬೇಕಾಗುತ್ತಿರುವುದು ವಿಪರ್ಯಾಸ.

ಕಳೆದ ಒಂದು ವರ್ಷದಿಂದ ಇಲ್ಲಿನ ವಿಲೇಜ್‌ ಫೀಲ್ಡ್‌  ಅಸಿಸ್ಟೆಂಟ್‌ ಹುದ್ದೆ  ಖಾಲಿಯಾಗಿ ಉಳಿದಿದೆ. ಓರ್ವರು 2017 ಆಗಸ್ಟ್‌ನಿಂದಲೂ ಇನ್ನೋರ್ವರು 2018ರಿಂದಲೂ ಇತರ ಕಚೇರಿಗೆ ವರ್ಗಾವಣೆಗೊಂಡಿದ್ದಾರೆ. ಆದರೆ ಇದಕ್ಕೆ ಬದಲಾಗಿ ಇತರ ನೌಕರರನ್ನು ನೇಮಕಾತಿ ಮಾಡಿಲ್ಲ.  ಕಾಸರಗೋಡು ಶಾಸಕರು ಹಾಗೂ ಬಿಜೆಪಿ ಸಹಿತ ವಿವಿಧ ರಾಜಕೀಯ ಪಕ್ಷಗಳ ನೇತಾರರು ಮತ್ತಿತರರು ಕಂದಾಯ ಖಾತೆ ಸಚಿವ ಇ.ಚಂದ್ರಶೇಖರನ್‌ ಸಹಿತ ಹಲವಾರು ಮಂದಿ ಸಚಿವರು, ಅಧಿಕಾರಿಗಳಿಗೆ ಕೂಡ್ಲು  ಗ್ರಾಮ ಕಚೇರಿಯನ್ನು ವಿಭಜಿಸಬೇಕು ಅಥವಾ ಹೆಚ್ಚಿನ ನೌಕರರನ್ನು  ನೇಮಕಾತಿ ಮಾಡಬೇಕು ಎಂದು ನಿರಂತರವಾಗಿ ಒತ್ತಾಯಿಸುವ ಮಧ್ಯೆ ಈಗ ಇರುವ ಹುದ್ದೆಗಳನ್ನು  ಕೂಡ ಭರ್ತಿಗೊಳಿಸಲು ಸಂಬಂಧಪಟ್ಟ  ಅಧಿಕಾರಿಗಳು ಮುಂದಾಗುತ್ತಿಲ್ಲವೆಂಬ ಆರೋಪ ಕೇಳಿಬಂದಿದೆ.

ವಿವಿಧ ಅರ್ಜಿಗಳಿಗಾಗಿ ಇಲ್ಲಿಗೆ ತಲುಪುವ ಜನರು ಗಂಟೆಗಟ್ಟಲೆ ಕಾದು ನಿಲ್ಲಬೇಕಾದ ಸ್ಥಿತಿಯುಂಟಾಗಿದೆ. ಮೊಗ್ರಾಲ್‌ ಪುತ್ತೂರು ಮತ್ತು ಶಿರಿಬಾಗಿಲುಗಳಲ್ಲಿ  ರೀಸರ್ವೇ ಕುರಿತಾದ ದೂರುಗಳನ್ನು  ಇಲ್ಲಿನ ವಿಲ್ಲೇಜ್‌ ಆಫೀಸರ್‌ಗೆ ವಹಿಸಿಕೊಟ್ಟ  ಬಳಿಕ ಇಲ್ಲಿರುವ ನೌಕರರ ಸಂಕಷ್ಟ  ಇಮ್ಮಡಿಯಾಗಿದೆ.
 
ಈಗ ಇರುವ 3 ಮಂದಿ ನೌಕರರು ರಾತ್ರಿ ಹಗಲು ಕಷ್ಟಪಟ್ಟು  ಸರಕಾರಿ ವಿಷಯಗಳಿಗೆ ಮತ್ತು  ಜನರ ಸಮಸ್ಯೆಗಳಿಗೆ ಒಂದು ಹಂತದವರೆಗೆ ಪರಿಹಾರ ಕಲ್ಪಿಸುತ್ತಿದ್ದಾರೆ.

ಇಷ್ಟೆಲ್ಲಾ ಸಂಕಷ್ಟಗಳ ಮಧ್ಯೆಯೂ 2018ನೇ ಜನವರಿಯಿಂದ ತೊಡಗಿ ಇದುವರೆಗೆ 12,000ದಷ್ಟು  ಸರ್ಟಿಫಿಕೇಟ್‌ಗಳನ್ನು ವಿತರಿಸಲಾಗಿದೆ. ಇಲ್ಲಿಗೆ ತಲುಪುವ ಜನರ ಸಮಸ್ಯೆಗಳಿಗೆ ಸಂಬಂಧಪಟ್ಟವರು ತುರ್ತು ಪರಿಹಾರ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ  ಉಗ್ರ ಹೋರಾಟ ನಡೆಸಲಾಗುವುದು ಎಂದು ವಿವಿಧ ಜನಪರ ಸಂಘಟನೆಗಳು ಮುನ್ನೆಚ್ಚರಿಕೆ ನೀಡಿವೆ.

ಅಪಾರ ವಿಸ್ತೀರ್ಣದ ಭೂಪ್ರದೇಶ : ವಿದ್ಯಾನಗರದಲ್ಲಿರುವ ನಗರಸಭಾ ಕ್ರೀಡಾಂಗಣದಿಂದ ತೊಡಗಿ ಸೀತಾಂಗೋಳಿಯ ಕಿನ್‌ಫ್ರಾ ಪಾರ್ಕ್‌ ತನಕವೂ ರಾಷ್ಟ್ರೀಯ ಹೆದ್ದಾರಿಯಲ್ಲಿ  ಅಡ್ಕತ್ತಬೈಲಿನಿಂದ ತೊಡಗಿ ಮೊಗ್ರಾಲ್‌ ಸೇತುವೆ ವರೆಗೂ ಇರುವ ಪ್ರದೇಶಗಳು ಈ ಗ್ರಾಮ ಕಚೇರಿಗೆ ಒಳಪಟ್ಟಿವೆ. ಕಾಸರಗೋಡು ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ  22 ಮತಗಟ್ಟೆಗಳು ಈ ಗ್ರಾಮ ಕಚೇರಿಯ ವ್ಯಾಪ್ತಿಯಲ್ಲಿ  ಸೇರಿವೆ. ಈ ಮೂಲಕ ಕೂಡ್ಲು  ಗ್ರಾಮ ಕಚೇರಿಗೆ ಅಪಾರ ಭೂಪ್ರದೇಶವು ಒಳಪಟ್ಟಿದ್ದು, ಇಲ್ಲಿನ ಅಧಿಕಾರಿಗಳು ಮತ್ತು ನೌಕರರು ಹೊರಲಾರದಷ್ಟು  ಕೆಲಸದ ಹೊರೆಯನ್ನು  ಹೊರಬೇಕಾಗುತ್ತಿದೆ. ಇದರಿಂದಾಗಿ ಯಾವುದೇ ಕೆಲಸಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಈ ಬಗ್ಗೆ  ಕಂದಾಯ ಸಚಿವರೇ ನೇರವಾಗಿ ಗಮನಿಸಿ ಸರಿಯಾದ ವ್ಯವಸ್ಥೆ  ಕಲ್ಪಿಸಬೇಕಾಗಿದೆ.

ಟಾಪ್ ನ್ಯೂಸ್

Desi Swara: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

Desi Swara: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

Mussoorie: ಭೀಕರ ರಸ್ತೆ ಅಪಘಾತ… 5 ವಿದ್ಯಾರ್ಥಿಗಳ ದುರಂತ ಅಂತ್ಯ, ಓರ್ವಳ ಸ್ಥಿತಿ ಗಂಭೀರ

Mussoorie: ಭೀಕರ ರಸ್ತೆ ಅಪಘಾತ… 5 ವಿದ್ಯಾರ್ಥಿಗಳ ದುರಂತ ಅಂತ್ಯ, ಓರ್ವಳ ಸ್ಥಿತಿ ಗಂಭೀರ

mangalore international airport

Mangaluru; ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಪೋಟ ಬೆದರಿಕೆ; ಪೊಲೀಸ್ ಭದ್ರತೆ

Pen drive case; ಪ್ರಜ್ವಲ್ ರೇವಣ್ಣ ಹಾಸನ ನಿವಾಸದಲ್ಲಿ ಎಸ್ಐಟಿ ಪರಿಶೀಲನೆ

Pen drive case; ಪ್ರಜ್ವಲ್ ರೇವಣ್ಣ ಹಾಸನ ನಿವಾಸದಲ್ಲಿ ಎಸ್ಐಟಿ ಪರಿಶೀಲನೆ

Raichur; ಅಣ್ಣಾಮಲೈ ಸೆಲ್ಫಿಗಾಗಿ ನೂಕುನುಗ್ಗಲು: ವೇದಿಕೆಯಲ್ಲೇ ಲಾಠಿ ಬೀಸಿದ ಪೊಲೀಸರು

Raichur; ಅಣ್ಣಾಮಲೈ ಸೆಲ್ಫಿಗಾಗಿ ನೂಕುನುಗ್ಗಲು: ವೇದಿಕೆಯಲ್ಲೇ ಲಾಠಿ ಬೀಸಿದ ಪೊಲೀಸರು

MIvsKKR; ಹಲವು ಪ್ರಶ್ನೆಗಳಿವೆ, ಆದರೆ…: ಎಂಟನೇ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?

MIvsKKR; ಹಲವು ಪ್ರಶ್ನೆಗಳಿವೆ, ಆದರೆ…: ಎಂಟನೇ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?

ಬಿಗ್‌ಬಾಸ್‌ ವಿಜೇತ ಎಲ್ವಿಶ್‌ ಯಾದವ್‌ ವಿರುದ್ಧ ಅಕ್ರಮ ವರ್ಗಾವಣೆ ಕೇಸ್‌ ದಾಖಲಿಸಿದ ಇ.ಡಿ

ಬಿಗ್‌ಬಾಸ್‌ ವಿಜೇತ ಎಲ್ವಿಶ್‌ ಯಾದವ್‌ ವಿರುದ್ಧ ಅಕ್ರಮ ವರ್ಗಾವಣೆ ಕೇಸ್‌ ದಾಖಲಿಸಿದ ಇ.ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ಕಾವೇರಿ ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು

Madikeri ಕಾವೇರಿ ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು

Sea ಹಠಾತ್‌ ಉಬ್ಬರ ಸಾಧ್ಯತೆ: ರೆಡ್‌ ಅಲರ್ಟ್‌ ಘೋಷಣೆ

Sea ಹಠಾತ್‌ ಉಬ್ಬರ ಸಾಧ್ಯತೆ: ರೆಡ್‌ ಅಲರ್ಟ್‌ ಘೋಷಣೆ

Manjeshwar ಹಟ್ಟಿ ಬೆಂಕಿಗಾಹುತಿ: ಹಸುಗಳು ಪಾರು

Manjeshwar ಹಟ್ಟಿ ಬೆಂಕಿಗಾಹುತಿ: ಹಸುಗಳು ಪಾರು

Kasaragod 6.96 ಕೋಟಿ ರೂ. ಅಮಾನ್ಯ ನೋಟು : ಕ್ರೈಂ ಬ್ಯಾಂಚ್‌ ತನಿಖೆ ಆರಂಭ

Kasaragod 6.96 ಕೋಟಿ ರೂ. ಅಮಾನ್ಯ ನೋಟು : ಕ್ರೈಂ ಬ್ಯಾಂಚ್‌ ತನಿಖೆ ಆರಂಭ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Desi Swara: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

Desi Swara: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

Desi Swara: ಹೆಮ್ಮೆಯ ದುಬೈ ಕನ್ನಡ ಸಂಘ- ಶಾರ್ಜಾ ಮಳೆ ಸಂತ್ರಸ್ಥರಿಗೆ ಸಹಾಯ ಹಸ್ತ

Desi Swara: ಹೆಮ್ಮೆಯ ದುಬೈ ಕನ್ನಡ ಸಂಘ- ಶಾರ್ಜಾ ಮಳೆ ಸಂತ್ರಸ್ಥರಿಗೆ ಸಹಾಯ ಹಸ್ತ

Mussoorie: ಭೀಕರ ರಸ್ತೆ ಅಪಘಾತ… 5 ವಿದ್ಯಾರ್ಥಿಗಳ ದುರಂತ ಅಂತ್ಯ, ಓರ್ವಳ ಸ್ಥಿತಿ ಗಂಭೀರ

Mussoorie: ಭೀಕರ ರಸ್ತೆ ಅಪಘಾತ… 5 ವಿದ್ಯಾರ್ಥಿಗಳ ದುರಂತ ಅಂತ್ಯ, ಓರ್ವಳ ಸ್ಥಿತಿ ಗಂಭೀರ

mangalore international airport

Mangaluru; ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಪೋಟ ಬೆದರಿಕೆ; ಪೊಲೀಸ್ ಭದ್ರತೆ

Pen drive case; ಪ್ರಜ್ವಲ್ ರೇವಣ್ಣ ಹಾಸನ ನಿವಾಸದಲ್ಲಿ ಎಸ್ಐಟಿ ಪರಿಶೀಲನೆ

Pen drive case; ಪ್ರಜ್ವಲ್ ರೇವಣ್ಣ ಹಾಸನ ನಿವಾಸದಲ್ಲಿ ಎಸ್ಐಟಿ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.