ನಿರಂತರ ಮನವಿ ಮಾಡಿದರೂ ಸ್ಪಂದಿಸದ ಇಲಾಖೆ
Team Udayavani, Nov 23, 2018, 2:55 AM IST
ಅಜೆಕಾರು: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಅಜೆಕಾರು ಪೇಟೆಯಲ್ಲಿರುವ ಹಳೆಯ ಕಟ್ಟಡ ತೆರವುಗೊಳಿಸುವಲ್ಲಿ ಶಿಕ್ಷಣ ಇಲಾಖೆಯ ನಿಧಾನಗತಿಯ ಧೋರಣೆಯಿಂದಾಗಿ ಪಕ್ಕದ ಅಂಗನವಾಡಿಯ ಪುಟಾಣಿಗಳು ಭಯದಲ್ಲಿಯೇ ನಿತ್ಯ ಕಾಲಕಳೆಯಬೇಕಾಗಿದೆ. ಸುಮಾರು 104 ವರ್ಷಗಳ ಹಿಂದೆ ಮಣ್ಣಿನ ಗೋಡೆಯಿಂದ ನಿರ್ಮಿಸಲ್ಪಟ್ಟ ಈ ಕಟ್ಟಡ ಕಳೆದ 10 ವರ್ಷಗಳಿಂದ ಕುಸಿಯುತ್ತಾ ಬಂದಿದ್ದು ಸ್ಥಳೀಯರು ಕಟ್ಟಡ ತೆರವುಗೊಳಿಸುವಂತೆ ನಿರಂತರ ಮನವಿ ಮಾಡುತ್ತಿದ್ದರೂ ಅಧಿಕಾರಿಗಳು ಈವರೆಗೆ ಆಸ್ಥೆ ವಹಿಸಿಲ್ಲ. ಕಟ್ಟಡ ಮೇಲ್ಛಾವಣಿ ಸಂಪೂರ್ಣ ಹಾನಿಗೊಂಡಿದೆ. ಹಿಂಭಾಗದಲ್ಲಿ ಇದಕ್ಕೆ ಹೊಂದಿಕೊಂಡಂತೆ ಅಂಗನವಾಡಿ ಕೇಂದ್ರವಿದೆ.
30 ವರ್ಷಗಳ ಹಿಂದೆ ಶಾಲೆ ಸ್ಥಳಾಂತರ
ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯು ಈ ಹಳೇಯ ಕಟ್ಟಡದಿಂದ ಪ್ರಸಕ್ತ ಇರುವ ಕಟ್ಟಡಕ್ಕೆ ಸ್ಥಳಾಂತರಗೊಂಡು 30 ವರ್ಷ ಕಳೆದಿದೆ. ಆದರೂ ಹಳೇ ಕಟ್ಟಡ ವಿಲೇವಾರಿ ಆಗಿಲ್ಲ.
ಹಲವು ನಿರ್ಣಯ
ಅಪಾಯಕಾರಿಯಾಗಿರುವ ಈ ಶಾಲೆಯ ಕಟ್ಟಡ ತೆರವು ಮಾಡುವಂತೆ ಮರ್ಣೆ ಪಂಚಾಯತ್ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದ್ದು ಅದರಂತೆ ಮರ್ಣೆ ಪಂಚಾಯತ್ ನಿರ್ಣಯ ಕೈಗೊಂಡು ಶಿಕ್ಷಣ ಇಲಾಖೆಗೆ ಸೂಚಿಸಿತ್ತು. ಅಲ್ಲದೆ 2015ನೇ ಸಾಲಿನಲ್ಲಿ ತಾಲೂಕು ಪಂಚಾಯತ್ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಗೊಂಡು ನಿರ್ಣಯ ಕೈಗೊಳ್ಳಲಾಗಿತ್ತು. ನಿರ್ಣಯದಂತೆ ಅಂದಿನ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಪಂಚಾಯತ್ರಾಜ್ ಎಂಜಿನಿಯರಿಂಗ್ರವರಿಂದ ಮೌಲ್ಯ ಮಾಪನ ಮಾಡಿಸಿ ಅಕ್ಟೋಬರ್ 6.2016 ರಂದು ಶಿಕ್ಷಣ ಇಲಾಖೆಗೆ ಕಟ್ಟಡ ವಿಲೇವಾರಿ ಮಾಡಲು ಸೂಚಿಸಿದ್ದರು. 2016ರ ನವೆಂಬರ್ 2ರಂದು ಹಿಂಬರಹ ನೀಡಿದ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಶಿಕ್ಷಣ ಇಲಾಖೆಯ ನಿಯಮದಂತೆ ತೆರವುಗೊಳಿಸಲು ಸೂಚಿಸಿದ್ದರು. ಆದರೆ ಕಟ್ಟಡದ ಮೌಲ್ಯಮಾಪನದ ಜತೆಗೆ ಶಾಲಾಭಿವೃದ್ಧಿ ಸಮಿತಿಯ ನಿರ್ಣಯ ಇಲ್ಲದಿರುವುದರಿಂದ ತೆರವುಗೊಳ್ಳಲಿಲ್ಲ. ಸದ್ಯ ಕಟ್ಟಡ ಮೌಲ್ಯಮಾಪನ ಮಾಡಿ ಉಡುಪಿ ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿಗೆ ಕಳುಹಿಸಲಾಗಿದ್ದು ಇನ್ನೂ ಪ್ರಕ್ರಿಯೆ ಹಂತದಲ್ಲೇ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಇನ್ನೂ ನಡೆಯದ ಟೆಂಡರ್ ಪ್ರಕ್ರಿಯೆ; ರಾಜ್ಯದಲ್ಲಿ ಅಗ್ನಿಶಾಮಕ ವಾಹನ ಕೊರತೆ
Road Mishap ಮಣಿಪಾಲ: ಕಾರು ಢಿಕ್ಕಿಯಾಗಿ ಪಾದಚಾರಿ ಸಾವು
Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು
Theme Park Karkala ಅವಶೇಷ ತೆರವಿಗೆ ಕೋರ್ಟ್ ಆದೇಶ; ಜಿಲ್ಲಾಧಿಕಾರಿ ತಡೆ!
Parashurama Theme Park; ಕೊನೆಯ ಸಾಕ್ಷ್ಯವೂ ನಾಶಕ್ಕೆ ಯತ್ನ: ಉದಯ ಕುಮಾರ್ ಶೆಟ್ಟಿ ಆರೋಪ
MUST WATCH
ಹೊಸ ಸೇರ್ಪಡೆ
ಚಿನ್ನದ ನಾಡಿನ ಕಲಾವಿದೆ ವಿದ್ಯಾಶ್ರೀ ಪ್ರತಿಭೆ ಅನಾವರಣ-ನೃತ್ಯಗಂಗಾ ಪ್ರದರ್ಶನ
BJP ಕುರುಬ ಸಮುದಾಯಕ್ಕೆ ಒಂದೂ ಟಿಕೆಟ್ ಕೊಟ್ಟಿಲ್ಲ: ಸಿಎಂ ಸಿದ್ದರಾಮಯ್ಯ ಕಿಡಿ
ಅಮಿತಾಭ್ ಟು ಶಾರುಖ್: ಇಂದು ಕೋಟಿ ಕುಳರಾದ ಈ ನಟರ ಮೊದಲ ಸಂಪಾದನೆ ಎಷ್ಟಾಗಿತ್ತು ಗೊತ್ತಾ?
Panaji: ದಾರಿ ಮಧ್ಯೆ ಹೊತ್ತಿ ಉರಿದ ಟ್ರಕ್… 32 ಲಕ್ಷ ಮೌಲ್ಯದ ಸೊತ್ತು ನಷ್ಟ
Belagavi; ಭಿಕ್ಷೆ ರೀತಿಯಲ್ಲಿ ಸಿಎಂ ಬರ ಪರಿಹಾರ ನೀಡಿದ್ದಾರೆ: ವಿಜಯೇಂದ್ರ ಆಕ್ರೋಶ