ಎಚ್ಡಿಕೆ ಮೂರ್ಖ ಸಿಎಂ
Team Udayavani, Dec 28, 2018, 6:00 AM IST
ಬಾಗಲಕೋಟೆ: “ಮುಖ್ಯಮಂತ್ರಿ ಕುಮಾರಸ್ವಾಮಿ ಮೂರ್ಖ ಸಿಎಂ. ಉತ್ತರ ಕರ್ನಾಟಕದವರು ನನಗೆ ಮತ ಹಾಕಿಲ್ಲ ಎಂದು ಅವಮಾನ ಮಾಡಿದರು. ಅವರಂತಹ ಅಳುವ ಸಿಎಂ ನಮಗೆ ಬೇಕಾಗಿಲ್ಲ. ನಗುವ, ಜನರ ಕಷ್ಟ ದೂರ ಮಾಡಿ, ನಗಿಸುವ ಮುಖ್ಯಮಂತ್ರಿ ಬೇಕು’ ಎಂದು ಧಾರವಾಡ ಮನಸೂರ ಮಠದ ಬಸವರಾಜ ದೇವರು ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗೆ ಎಲ್ಲರೂ ಮತ ಹಾಕಿದ್ದಾರೆ. ಮುಖ್ಯಮಂತ್ರಿಗೆ ಗಂಭೀರತೆ, ಚೈತನ್ಯ ಮೂಡಿಸುವ ವ್ಯಕ್ತಿತ್ವ ಬೇಕು. ಪ್ರಾಂತ್ಯವಾರು ತಾರತಮ್ಯ ಮಾಡುವ ಸಿಎಂ ಬೇಡ. ಸರ್ಕಾರ ಎಲ್ಲ ಉತ್ಸವಗಳನ್ನು ದಕ್ಷಿಣ ಕರ್ನಾಟಕದಲ್ಲೇ ನಡೆಸುತ್ತದೆ. ಮೈಸೂರು ಉತ್ಸವ, ಭರಚುಕ್ಕಿ, ಅವರಪ್ಪ, ಅವರವ್ವ ಎಂದು ಉತ್ಸವ ಮಾಡುತ್ತಾರೆ. ಅವು ಮನಿ (ದುಡ್ಡು) ಉತ್ಸವ. ಉತ್ತರ ಕರ್ನಾಟಕದ ಐಹೊಳೆ, ಪಟ್ಟದಕಲ್ಲು, ಬಾದಾಮಿ ಉತ್ಸವ ಏಕೆ ಮಾಡುವುದಿಲ್ಲ ಎಂದರು.
ಸಿದ್ದರಾಮಯ್ಯ ಕುರಿ ಆಗಬೇಡಿ, ಟಗರು ಆಗಬೇಕು. ನಾವೆಲ್ಲ ಅವರನ್ನು ಟಗರಿನಂತೆ ಬೆಳೆಸಿದ್ದೇವೆ. ಆದರೆ, ಟಗರು ನಮಗೇ ಗುಧ್ದೋಕೆ ಬರುತ್ತಿದೆ. ಟಗರು ಆಡಿಸೋನಿಗೆ ಟಗರು ಎದುರು ಬಿದ್ದರೆ, ಟಗರು ಆಡಿಸುವವನು ಇರುವುದಿಲ್ಲ. ಟಗರೂ ಇರೋದಿಲ್ಲ. ಟಗರು ಆಗಿ ಮನೆತನಕ್ಕೆ ಹೆಸರು ತಗೆದುಕೊಂಡು ಬಾ ಎಂದು ನಾವು ಹೇಳುತ್ತೇವೆ. ಆದರೆ, ಸಿದ್ದರಾಮಯ್ಯ ಅದನ್ನು ಮಾಡುತ್ತಿಲ್ಲ. ಅವರಿಗೆ ತನ್ನ ಮಗನಿಗೆ ಒಂದು ಸ್ಥಾನಮಾನ ಕೊಡಿಸಲು ಆಗಲಿಲ್ಲ. ಸಮಾಜವನ್ನು ಎಸ್ಟಿ ಮೀಸಲಾತಿಗೆ ಸೇರಿಸಿ ಎಂದು ಕೇಳಿದರೂ ಕಡೆಗಣಿಸಿದರು ಎಂದರು.
ಎಂ.ಟಿ.ಬಿ. ನಾಗರಾಜ ಅವರಿಗೆ ಸಚಿವ ಸ್ಥಾನ ನೀಡಿರುವುದು ಪೇಮೆಂಟ್ ಸೀಟೋ ಏನೋ ಗೊತ್ತಿಲ್ಲ ಎಂದ ಅವರು, ಮಾಜಿ ಸಚಿವ ಎಚ್.ವೈ. ಮೇಟಿ ಅವರನ್ನು ನೆನೆದು, ಪಾಪ ಮೇಟಿ ತರಹ ಯಾವುದಾದರೊಂದು ಪ್ರಕರಣದಲ್ಲಿ ಸಿಲುಕಿಸಿ ಕುರುಬ ಸಮುದಾಯದ ಸಚಿವರನ್ನು ತೆಗೆದು ಹಾಕುವಂತಹ ವ್ಯಕ್ತಿಗಳು ಉತ್ತರ ಕರ್ನಾಟಕದಲ್ಲಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಕಾಂಗ್ರೆಸ್ ಯಾಕೆ ದಲಿತರಿಗೆ ಗ್ಯಾರಂಟಿ ನೀಡಲಿಲ್ಲ: ಛಲವಾದಿ ನಾರಾಯಣ ಸ್ವಾಮಿ
Pen Drive Case; ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್ಔಟ್ ನೋಟಿಸ್ ಹೊರಡಿಸಿದ ಎಸ್ಐಟಿ
Lok Sabha Polls: ಮೋದಿ ಪ್ರಧಾನಿಯಾಗುವುದನ್ನು ತಡೆಯಲು ಸಾಧ್ಯವಿಲ್ಲ: ಬಿ.ವೈ. ರಾಘವೇಂದ್ರ
Lok Sabha Election: ಕಾಂಗ್ರೆಸ್ ಅಭ್ಯರ್ಥಿಗೆ ಸೋಲಿನ ಭೀತಿ: ಗಾಯತ್ರಿ ಸಿದ್ದೇಶ್ವರ
Shivamogga: ಕಚೇರಿ ಮುಂದೆ ವಾಮಾಚಾರ… ಆಕ್ರೋಶ ಹೊರಹಾಕಿದ ಈಶ್ವರಪ್ಪ
MUST WATCH
ಹೊಸ ಸೇರ್ಪಡೆ
Kannada Cinema; ರಂಗಮಂಟಪ ಸುತ್ತ ‘ರಂಗಸ್ಥಳ’; ಹೊಸ ಚಿತ್ರದ ಟೈಟಲ್ ಲಾಂಚ್
BJP 200 ಸೀಟು ದಾಟುವುದು ಕಷ್ಟ: ಗೋವಾದಲ್ಲಿ ಶಶಿ ತರೂರ್
Prajwal Revanna ವಿದೇಶಕ್ಕೆ ತೆರಳಲು ಕ್ಲಿಯರೆನ್ಸ್ ಕೇಳಿಲ್ಲ: ವಿದೇಶಾಂಗ ಸಚಿವಾಲಯ
ರೈತರಿಗೆ ತಂತ್ರಜ್ಞಾನದ ಕೊಡುಗೆ ಕೊಟ್ಟರೆ ಪ್ರಗತಿ ಸಾಧ್ಯ: ಹಂದೆ
UP; ಬ್ರಿಜ್ ಭೂಷಣ್ ಪುತ್ರನನ್ನು ಕಣಕ್ಕಿಳಿಸಿದ ಬಿಜೆಪಿ: ರಾಯ್ ಬರೇಲಿಯಿಂದ ಸಚಿವ