ಎದುರಾದ ನೀರಿನ ಸಮಸ್ಯೆ ಟ್ಯಾಂಕರ್ನಿಂದ ಸರಬರಾಜು
Team Udayavani, May 2, 2019, 10:35 AM IST
ಬಜಪೆ: ಮಳವೂರು ಗ್ರಾ.ಪಂ. ವ್ಯಾಪ್ತಿಯ ಕೆಂಜಾರು ಗ್ರಾಮದ ಪೇಜಾವರ, ಪೊರ್ಕೋಡಿ ದೇವಸ್ಥಾನ, ತತ್ತಾಡಿ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ಈ ವರ್ಷ ಮಳೆ ಬಾರದ ಕಾರಣ ಈ ಪ್ರದೇಶದ ಬಾವಿ, ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಈ ಪ್ರದೇಶಗಳಿಗೆ ನೀರಿನ ಸಮಸ್ಯೆ ಎದುರಾಗಿದೆ. ಇನ್ನೂ ಕೆಲವೆಡೆ ನೀರಿನ ಪೈಪ್ಗ್ಳು ಹಾಗೂ ಓವರ್ ಹೆಡ್ ಟ್ಯಾಂಕ್ನ ಸಮರ್ಪಕ ನಿರ್ವಹಣೆಯಿರದೆ ನೀರಿನ ಸಮಸ್ಯೆ ಎದುರಾಗಿದೆ.
ಪೊರ್ಕೋಡಿ ದೇವಸ್ಥಾನ ಪ್ರದೇಶದ ಸುಮಾರು 20 ಮನೆಗಳಿಗೆ ನೀರಿನ ಸಮಸ್ಯೆ ಇದ್ದು, ಇಲ್ಲಿ ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಗಿದೆ. ಈ ಬಾರಿ ಪೈಪ್ಲೈನ್ ಮಾಡಲಾಗಿದೆಯಾದರೂ ಸಂಪರ್ಕವಾಗಿಲ್ಲ. ಈಗ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
ತತ್ತಾಡಿ ಪ್ರದೇಶದ 30 ಮನೆಗಳಿಗೆ ನೀರಿನ ಸಮಸ್ಯೆ ಇದ್ದು, ಇಲ್ಲಿನ ಜಿಲ್ಲಾ ಪಂಚಾಯತ್ನಿಂದ ಟ್ಯಾಂಕ್ ನಿರ್ಮಾಣ ಆಗುತ್ತಿದೆ.ಪೈಪ್ಲೈನ್ ಅಗಿದೆ. ಖಾಸಗಿ ಬಾವಿಯಲ್ಲಿ ನೀರು ಇಲ್ಲದ ಕಾರಣ ಟ್ಯಾಂಕರ್ನಿಂದ ನೀರು ಸರಬರಾಜಾಗುತ್ತಿದೆ.
ಪೇಜಾವರದ 30 ಮನೆಗಳಿಗೆ ನೀರಿನ ಸಂಪರ್ಕಕ್ಕೆ ಟ್ಯಾಂಕ್ ಹಾಗೂ ಪೈಪ್ಲೈನ್ ಅಗಿದ್ದು, ಸಂಪರ್ಕ ಮಾತ್ರ ಬಾಕಿ ಇದೆ. ಮಳವೂರು ಡ್ಯಾಂನ ನೀರು ನೀಡಲು ಈಗ ಮರವೂರಿನ ರೈಲ್ವೇ ಹಳಿಯ ಬದಿಯಿಂದ ಪೈಪ್ ಹಾಕಲಾಗಿದೆ. ಇನ್ನು ಒಂದು ವಾರದೊಳಗೆ ಡ್ಯಾಂನ ನೀರು ಸಂಪರ್ಕ ನೀಡಲಾಗುತ್ತದೆ. ಇಲ್ಲಿಯೂ ಟ್ಯಾಂಕರ್ನಿಂದ ನೀರು ಸರಬರಾಜು ಮಾಡಲಾಗುತ್ತದೆ. ಕರಂಬಾರು ಬದ್ರಿಯಾ ಮಸೀದಿ, ಆಂತೋನಿ ಕಟ್ಟೆ ಚರ್ಚ್ ಬಳಿ, ಅಂಬೇಡ್ಕರ್ ನಗರದಲ್ಲಿ ಕೊಳವೆಬಾವಿಯಲ್ಲಿ ಈಗ ನೀರಿಲ್ಲ. ಇನ್ನೂ 15 ದಿನಗಳಲ್ಲಿ ಮಳೆ ಬಾರದಿದ್ದರೆ ಇಲ್ಲಿಯೂ ಸಮಸ್ಯೆ ಬರಬಹುವುದು.
ಸುಬ್ರಾಯ ನಾಯಕ್, ಎಕ್ಕಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudhol; ಹೃದಯಾಘಾತದಿಂದ ಚುನಾವಣಾ ಕರ್ತವ್ಯನಿರತ ಸಿಬ್ಬಂದಿ ಸಾವು
IPL 2024; ಧೋನಿ ಬದಲು ಸಿಎಸ್ ಕೆ ತಂಡದಲ್ಲಿ ವೇಗಿಯನ್ನು ಆಡಿಸಿ..: ಹರ್ಭಜನ್ ಸಿಂಗ್ ಟೀಕೆ
ಇಸ್ರೇಲ್ ದೇಶದಲ್ಲಿ ಅಲ್ಜಝೀರಾ ಸುದ್ದಿ ವಾಹಿನಿ ಶಾಶ್ವತ ಸ್ಥಗಿತ!
LS Polls: “ಕಾಂಗ್ರೆಸ್ಸಿಗರಿಗೆ ಬಡವರೆಂದರೆ ನಾಟಕೀಯ ಪ್ರೀತಿ’: ಗಾಯತ್ರಿ ಸಿದ್ದೇಶ್ವರ್
T20 World Cup; ಕ್ರಿಕೆಟ್ ಮೆಗಾ ಕೂಟಕ್ಕೆ ಪಾಕ್ ಉಗ್ರರಿಂದ ಬೆದರಿಕೆ