ಕುರುಹೀನಶೆಟ್ಟಿ ಸಮಾಜಕ್ಕೆ ಪ್ರಾತಿನಿಧ್ಯ ನೀಡಿ
•ಭಂಡಾರ ಬಣ್ಣದ ಸೀರೆ ತೊಟ್ಟ ಸುಮಂಗಲಿಯರು•ಸಮುದಾಯ ಸಂಘಟನೆಗೆ ಶೀಘ್ರ ಸಮ್ಮೇಳನ
Team Udayavani, May 7, 2019, 1:05 PM IST
ಗಂಗಾವತಿ: ಕುರುಹೀನಶೆಟ್ಟಿ ಸಮಾಜದ ಸುಮಂಗಲಿಯರಿಂದ ನಗರದಲ್ಲಿ ಪೂರ್ಣಕುಂಭ ಮೆರವಣಿಗೆ ನಡೆಯಿತು.
ಗಂಗಾವತಿ: ನಗರದ ನೀಲಕಂಠೇಶ್ವರ ದೇವಾಲಯ ನಿರ್ಮಾಣದ ಸುವರ್ಣಮಹೋತ್ಸವ ಹಾಗೂ ನೂತನ ಕಲ್ಯಾಣ ಮಂಟಪದ ಉದ್ಘಾಟನೆ ನಿಮಿತ್ತ ಸೋಮವಾರ ಕುರುಹೀನಶೆಟ್ಟಿ ಸಮಾಜದ ಸುಮಂಗಲಿಯರು ಹಮ್ಮಿಕೊಂಡಿದ್ದ 1008 ಕುಂಭ ಮೆರವಣಿಗೆ ಗಮನ ಸೆಳೆಯಿತು.
ನಗರದ ಶ್ರೀಚನ್ನಬಸವಸ್ವಾಮಿ ಮಲ್ಲಿಕಾರ್ಜುನ ಮಠದಿಂದ ಪ್ರಾರಂಭವಾದ ಮೆರವಣಿಗೆ ಮಹಾತ್ಮಗಾಂಧಿ ಬಸವಣ್ಣ ಮಳೆಮಲ್ಲೇಶ್ವರ ವೃತ್ತದ ಮೂಲಕ ಶ್ರೀನೀಲಕಂಠೇಶ್ವರ ದೇವಾಲಯ ತಲುಪಿತು. 1008 ಕುಂಭ ಹೊತ್ತ ಮಹಿಳೆಯರು ಭಂಡಾರ ಬಣ್ಣದ ಸೀರೆ ಧರಿಸಿದ್ದು ಎಲ್ಲರ ಗಮನ ಸೆಳೆಯಿತು. ಭಜನಾ ತಂಡ, ಸಮಾಳ, ತಾಷಾ ಸೇರಿ ಹಲವು ಜಾನಪದ ಕಲಾ ತಂಡಗಳು ಕುಂಭ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಕುಂಭ ಮೆರವಣಿಗೆಗೆ ಕುರುಹೀನ ಶೆಟ್ಟಿ ಸಮಾಜದ ಜಗದ್ಗುರು ನೀಲಕಂಠ ಪಟ್ಟದಾರ್ಯ ಸ್ವಾಮೀಜಿ, ಮಾಜಿ ಸಚಿವ ಎಂ. ಮಲ್ಲಿಕಾರ್ಜುನ ನಾಗಪ್ಪ ಸೇರಿ ಕುರುಹೀನ ಶೆಟ್ಟಿ ಸಮಾಜದ ಮುಖಂಡರು ಉಪಸ್ಥಿತರಿದ್ದರು. ಒಂದೂವರೆ ಕಿ.ಮೀ. ಉದ್ದದ ಮೆರವಣಿಗೆಯ ಮಾರ್ಗ ಮಧ್ಯೆ ಕುಂಭ ಹೊತ್ತ ಮಹಿಳೆಯರಿಗೆ ವಿವಿಧ ಸಮುದಾಯದವರು ನೀರು, ಮಜ್ಜಿಗೆ ವಿತರಣೆ ಮಾಡುವ ಮೂಲಕ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ
ವಿಧಾನಸಭಾ ಚುನಾವಣೆಯಲ್ಲಿ ಸಿದ್ದು,ಡಿಕೆಶಿ ನನ್ನ ಜತೆ ಕೈ ಜೋಡಿಸಿದ್ದರು:ಗಾಲಿ ಜನಾರ್ದನ ರೆಡ್ಡಿ
Koppala: ವೈದ್ಯರ ನಿರ್ಲಕ್ಷ್ಯ-ಚಿಕಿತ್ಸೆ ಫಲಿಸದೇ ಗರ್ಭಿಣಿ ಸಾವು ; ಕುಟುಂಬಸ್ಥರ ಪ್ರತಿಭಟನೆ
Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ
Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ